ತೆಂಕನಿಡಿಯೂರು ಕಾಲೇಜಿನಲ್ಲಿ ಸೈಬರ್‌ ಸೆಕ್ಯುರಿಟಿ ಕಾರ್ಯಾಗಾರ

Upayuktha
0



ಉಡುಪಿ: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಸೈಬರ್‌ ಸೆಕ್ಯುರಿಟಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲ್ಪೆ ಪೊಲೀಸ್‌ ಠಾಣೆಯ ಪಿ.ಎಸ್.ಐ.        ಶಿವಶಂಕರ್‌ ಮಾತನಾಡಿ “ಇತ್ತೀಚೆಗೆ  ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೂ ಸೈಬರ್‌ ಅಪರಾಧಗಳು ಕಡಿಮೆಯಾಗಿಲ್ಲ. 


ಡಿಜಿಟಲ್‌ ಯುಗದಲ್ಲಿ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲಿದ್ದು, ಹಾಗೆಯೇ ಅಪಾಯಗಳಿಗೂ ಕಾರಣವಾಗುತ್ತಿದೆ.  ಭಾರತದಲ್ಲಿ ಯುವ ಜನ ಸಂಪನ್ಮೂಲ 60ಪರ್ಸೆಂಟ್‌ ಇದ್ದು ಇದನ್ನ ನಾಶಪಡಿಸಲು ಮಾದಕ ವಸ್ತುಗಳ ಚಟಗಳ ಜಾಲಕ್ಕೆ ಯುವಜನತೆಯನ್ನು ಬಲಿ ಪಶು ಮಾಡುವ ಮೂಲಕ ದೇಶದ ಆರ್ಥಿಕತೆಗೆ ಪೆಟ್ಟು ಬೀಳಿಸುವ ಜಾಲಗಳು ಕೂಡ ನಮ್ಮಲ್ಲಿರುವುದು ಆತಂಕಕಾರಿ ವಿಷಯವಾಗಿದೆ. 


ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಜೀವನ ಶೈಲಿಯಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಯುವಜನತೆಯಲ್ಲಿ 2.1 ಷ್ಟು ಇರಬೇಕಾದ ಫರ್ಟಿಲಿಟಿ ರೇಟ್‌ 1.7 ಗೆ ಕುಸಿದಿದೆ. ಇದನ್ನೆಲ್ಲಾ ಗಮನಿಸಿ ತಾವು ಪ್ರಜ್ಞಾವಂತರಾಗಿ ಆದಷ್ಟು ದುಶ್ಚಟಗಳಿಗೆ ಬಲಿಯಾಗದೆ ಯಶಸ್ವಿ ಜೀವನ ನಡೆಸಿ ಹಾಗೆಯೆ ಸಾರಿಗೆ ನಿಯಮಗಳನ್ನು ಪಾಲಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ  ಎಸ್.ಎಂ.ಎಸ್‌ ಕಾಲೇಜಿನ ಉಪನ್ಯಾಸಕರಾದ ಸಂತೋಷ್‌ ನೀಲಾವರ ಮಾತನಾಡಿ ವಿವಿಧ ರೀತಿಯ ಸೈಬರ್‌ ಅಪರಾಧಗಳು, ಸೆಕ್ಯುರಿಟಿ ವಿಧಾನಗಳ ಬಗ್ಗೆ ಸವಿವರವಾಗಿ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದು, ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ದತ್ತ ಕುಮಾರ್‌, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ. ಉಪಸ್ಥಿತರಿದ್ದರು. 


ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರೇಂ ಸಾಯಿ ಆರ್.ಎಂ. ಸ್ವಾಗತಿಸಿ, ಕು.ಗೌತಮಿ ಜಿ. ಸುವರ್ಣ ವಂದಿಸಿದರು. ಮಹಮ್ಮದ್‌ ಸಹದ್‌ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್.ಡಬ್ಲ್ಯು ಉಪನ್ಯಾಸಕರಾದ ಅಮಿತ, ರಾಜೇಂದ್ರ ಎಂ. ರವಿ ಎಸ್.‌ ಕರಾವಳಿ ಕಾವಲು ಪಡೆಯ ಸಿಬ್ಬಂದಿ ರತ್ನಾಕರ್‌ ಉಪಸ್ಥಿತರಿದ್ದರು.




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top