ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊ೦ಡು ಪೊಲೀಸರು ಪ್ರಕರಣ ದಾಖಲಿಸುತ್ತಿರುವುದನ್ನು ಖ೦ಡಿಸಿ ಈಗಾಗಲೇ ನಾನು ದೆಹಲಿಯಲ್ಲಿರುವ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗದ ಅಧಿಕಾರಿಗಳು ಮ೦ಗಳೂರಿಗೆ ಬ೦ದು ತನಿಖೆ ಆರಂಭಿಸಿದ್ದಾರೆ. ನನ್ನ ಹೇಳಿಕೆಯನ್ನು ಕೂಡಾ ಅವರು ದಾಖಲಿಸಿದ್ದಾರೆ ಎಂದು ಮ೦ಗಳೂರು ಉತ್ತರ ಕ್ಲೇತ್ರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಪೊಲೀಸರು ರಾಷ್ಟ್ರೀಯ ಸ್ವಯ೦ಸೇವಕ ಸ೦ಘ, ವಿವಿಧ ಹಿಂದೂ ಪರ ಸಂಘಟನೆಗಳು, ಬಿಜಿಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊ೦ಡು ಅವರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಫೋಟೋ ತೆಗೆಯುತ್ತಿರುವುದು ಆತ೦ಕಕಾರಿ ವಿಚಾರವಾಗಿದೆ. ಕಾನೂನು, ಸುವ್ಯವಸ್ಥೆ ಹೆಸರಿನಲ್ಲಿ ಅವರು ಈರೀತಿ ಹಿಂಸೆ ನೀಡುತ್ತಿರುವುದನ್ನು ನಮಗೆ ಸಹಿಸಲು ಸಾಧ್ಯವಿಲ್ಲ ಎ೦ದು ಹೇಳಿದರು.
ಮುಡಾ ಕಲೆಕ್ಷನ್ ಕೇಂದ್ರವಾಗಿ ಮಾರ್ಪಾಡಾಗಿದೆ. ಅವ್ಯವಸ್ಥೆ ಆಗರವಾಗಿದೆ. ಜನರು ಕಟ್ಟಡಕ್ಕೆ ಅರ್ಜಿ ಮೂಡಾದಲ್ಲಿ ಸಲ್ಲಿಸಿದರೆ ಅದಕ್ಕೆ ಅನುಮೋದನೆ ಇಲ್ಲಿ ಆಗುತ್ತಿಲ್ಲ. ಬದಲಿಗೆ ಬೆ೦ಗಳೂರಿಗೆ ತೆರಳಬೇಕಾಗಿದೆ. ಇದು ಯಾತಕ್ಕೆ ಎನ್ನುವುದು ಜನರಿಗೆ ಗೊತ್ತಿದೆ. ಇದೆಲ್ಲವನ್ನೂ ಖ೦ಡಿಸಿ ನಾವು ದಕ್ಷಿಣ ಕನ್ನಡ ಮತ್ತು ಉಡುಪಿಯ ಎಲ್ಲಾ ಗ್ರಾಮ ಪ೦ಚಾಯತ್ಗಳಲ್ಲಿ ದೊಡ್ಡ ರೀತಿಯ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ