*ವಿದ್ಯುನ್ಮಾನ ಮತಯಂತ್ರ ಮಾದರಿ ಬಳಕೆ
*ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಭವಿಶ್ ಜಿ, ಕಾರ್ಯದರ್ಶಿಯಾಗಿ ಬಿಂದು ಕೆ.ಜೆ ಆಯ್ಕೆ
*ಜೊತೆ ಕಾರ್ಯದರ್ಶಿಯಾಗಿ ಗ್ರೀಷ್ಮಾ ಎಸ್.ಎ. ಆಯ್ಕೆ
*ಕ್ರೀಡಾ ಕಾರ್ಯದರ್ಶಿಯಾಗಿ ಸಾತ್ವಿಕ್ ಆರ್ ಹಾಗೂ ಕ್ರೀಡಾ ಜತೆ ಕಾರ್ಯದರ್ಶಿಯಾಗಿ ಸಮೃದ್ಧಿ ಜೆ ಶೆಟ್ಟಿ ಆಯ್ಕೆ
ಪುತ್ತೂರು: 2025-26ನೇ ಶೈಕ್ಷಣಿಕ ವರ್ಷದ ಕಾಲೇಜು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳ ಆಯ್ಕೆಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಕಾಲೇಜು ಅಧ್ಯಕ್ಷರಾಗಿ ದ್ವಿತೀಯ ವಿಜ್ಞಾನ ವಿಭಾಗದ ಭವಿಶ್̤ ಜಿ, ಕಾರ್ಯದರ್ಶಿಯಾಗಿ ದ್ವಿತೀಯ ಕಲಾ ವಿಭಾಗದ ಬಿಂದು ಕೆ.ಜೆ, ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಗ್ರೀಷ್ಮಾ ಎಸ್.ಎ. ಆಯ್ಕೆಯಾಗಿದ್ದಾರೆ.
ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಅವರ ನಿರ್ದೇಶನದಲ್ಲಿ, ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಶ್ವನಾಥ್ ಕೆ. ಅವರ ನೇತೃತ್ವದ ಕ್ಷೇಮಪಾಲನಾ ತಂಡ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟಿತು. ಇದೇ ಸಂದರ್ಭದಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸಾತ್ವಿಕ್ ಆರ್ ಹಾಗೂ ಕ್ರೀಡಾ ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸಮೃದ್ಧಿ ಜೆ ಶೆಟ್ಟಿ ಆಯ್ಕೆಗೊಂಡರು.
ವ್ಯವಸ್ಥಿತ ಮತದಾನ ಪ್ರಕ್ರಿಯೆ
ಪ್ರಜಾಪ್ರಭುತ್ವ ವ್ಯವಸ್ಥೆಯ ಲೋಕಸಭಾ ಚುನಾವಣೆಯ ಮಾದರಿಯಲ್ಲಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಯಿತು. ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳಾದ ವಿಶ್ವನಾಥ್ ಕೆ. ಅವರು ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಿದರು.
ಜೂನ್ 18ರ ವರೆಗೆ ನಿಗದಿತ ನಮೂನೆಯೊಂದಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ನಾಮಪತ್ರ ಪರಿಶೀಲನೆಯ ನಂತರ ಅಭ್ಯರ್ಥಿಗಳಿಗೆ ಪ್ರಚಾರ ನಡೆಸಲು ಮಾದರಿ ನೀತಿಸಂಹಿತೆಯ ನಿಯಮಾವಳಿಗಳೊಂದಿಗೆ ಅವಕಾಶ ನೀಡಲಾಯಿತು. ಅಧಿಸೂಚನೆಯ ಪ್ರಕಟಣೆಯಂತೆ ಜೂನ್ 20ರಂದು ವಿದ್ಯುನ್ಮಾನ ಮತಯಂತ್ರದ ಸಹಾಯದೊಂದಿಗೆ ಚುನಾವಣೆ ನಡೆದು ಕೆಲವೇ ಹೊತ್ತಿನಲ್ಲಿ ಫಲಿತಾಂಶ ಪ್ರಕಟಿಸಲಾಯಿತು.
ಇವಿಎಂ ಮಾದರಿಯಲ್ಲಿ ಮತದಾನ
ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು (ಇವಿಎಂ ಸಿಮ್ಯುಲೇಟರ್) ಬಳಸಲಾಗಿತ್ತು. ಲೋಕಸಭೆ ಮುಂತಾದ ಚುನಾವಣೆಗಳ ಮತದಾನ ಮಾಡಿದ ಅನುಭವ ವಿದ್ಯಾರ್ಥಿಗಳಿಗಾಯಿತು. ವಿದ್ಯಾರ್ಥಿ ಕ್ಷೇಮಪಾಲನಾ ತಂಡದ ಸದಸ್ಯರು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಚುನಾವಣೆಯಲ್ಲಿ ದಾಖಲೆಯ 98.6% ಮತದಾನ ದಾಖಲಾಯಿತು.
1. ಭವಿಶ್ ಜಿ
2. ಬಿಂದು ಕೆ.ಜೆ
3. ಗ್ರೀಷ್ಮಾ ಎಸ್. ಎ
4. ಸಾತ್ವಿಕ್ ಆರ್
5. ಸಮೃದ್ಧಿ ಜೆ ಶೆಟ್ಟಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ