ಮಂಗಳೂರು: ಗುಜರಾತ್ ನ ಅಹಮದಾಬಾದ್ ನಲ್ಲಿ ಇತ್ತೀಚೆಗೆ ನಡೆದ ವಿಮಾನ ದುರ್ಘಟನೆಯಲ್ಲಿ ಬಲಿಯಾದ ಭಾರತದ ಹಾಗೂ ವಿದೇಶೀ ಪ್ರಯಾಣಿಕರ ಆತ್ಮ ಸದ್ಗತಿಗಾಗಿ ಹಾಗೂ ಅವರ ಕುಟುಂಬ ಸದಸ್ಯರ ಸಾಂತ್ವನ ಬಯಸಿ, ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ವಿಪ್ರ ಸಮಾಜ ಬಾಂಧವರಿಂದ ತಾ.16-06-2025 ಸೋಮವಾರ ಬೆಳಿಗ್ಗೆ ಗಂಟೆ 7-00 ರಿಂದ 8-00 ರ ತನಕ ಶ್ರೀ ಶರವು ಮಹಾಗಣಪತಿ ದೇವಳದ ಪ್ರಾಂಗಣದಲ್ಲಿ "ಸಾಮೂಹಿಕ ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಠನ ಹಾಗೂ ಸಾಮೂಹಿಕ ಪ್ರಾರ್ಥನೆ" ಸಲ್ಲಿಸಲಾಗುವುದು.
ಶರವು ರಾಘವೇಂದ್ರ ಶಾಸ್ತ್ರಿ, ಡಾ.ಪ್ರಭಾಕರ ಅಡಿಗ ಕದ್ರಿ, ಶ್ರೀರಂಗ ಐತಾಳ್ ಕದ್ರಿ, ಡಾ. ಸತ್ಯಕೃಷ್ಣ ಭಟ್ ಮತ್ತಿನ್ನಿತರರ ಮಾರ್ಗದರ್ಶನ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಮುಂದಾಳತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಪ್ರ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ವಿನಂತಿಸಿರುವರು.
ಹೆಚ್ಚಿನ ಮಾಹಿತಿಗಾಗಿ ಸುಧಾಕರ ರಾವ್ ಪೇಜಾವರ- 9448546051, ರಘುರಾಮ ರಾವ್- 7760054238, ಶ್ರೀಧರ ಹೊಳ್ಳ- 9844401834, ಪೂರ್ಣಿಮಾ ಪೇಜಾವರ- 9900788229 ಅಥವಾ ಎಸ್.ಪ್ರದೀಪ ಕುಮಾರ ಕಲ್ಕೂರ, ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ- 9845083736 ಇವರನ್ನು ಸಂಪರ್ಕಿಸಬಹುದು.