ವಿಶ್ವ ಪರಿಸರ ದಿನದ ಥೀಮ್ 2025- ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ
ಜೂನ್ 5 ಪರಿಸರ ದಿನವನ್ನಾಗಿ ಎಲ್ಲೆಡೆ ಆಚರಣೆ ಮಾಡುತ್ತೇವೆ. ಇದು ಪ್ರಾರಂಭವಾದ ರೀತಿ ಅದ್ಬುತವಾದದ್ದು. 1972ರಿಂದ ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಪರಿಸರದ ರಕ್ಷಣೆಗೆ ಅಗತ್ಯತೆ ಕುರಿತು, ಅದರಲ್ಲೂ ವಿಶೇಷವಾಗಿ, ಮಾನವ ಸಂಬಂಧಿತ ಚಟುವಟಿಕೆಗಳು ನೈಸರ್ಗಿಕ ಹವಾಮಾನ ಪರಿಸ್ಥಿತಿಗಳನ್ನು ಹದಗೆಡಿಸಲು ಕಾರಣವಾಗಿವೆ.
ತಾಪಮಾನದಲ್ಲಿ ಹೆಚ್ಚಳ, ಮಂಜುಗಡ್ಡೆಗಳ ಕರಗುವಿಕೆ ಸೇರಿದಂತೆ ಇನ್ನಿತರ ಅಡ್ಡ ಪರಿಣಾಮಗಳಿಗೆ ಪರಿಸರ ನಾಶ ಸಾಕ್ಷಿಯಾಗಿದೆ.
ಇತಿಹಾಸ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1972ರಲ್ಲಿ ಪರಿಸರ ರಕ್ಷಣೆಯ ಕ್ರಮಗಳ ಪ್ರೋತ್ಸಾಹಕ ಕ್ರಮ ಮತ್ತು ಜಾಗೃತಿಯನ್ನು ಮೂಡಿಸಿತು. ಸ್ವೀಡನ್ನ ಸ್ಟಾಕ್ಹೋಮ್ನಲ್ಲಿನ ವಿಶ್ವಸಂಸ್ಥೆಯ ಕಾನ್ಫರೆನ್ಸ್ನಿಂದ ಇದು ಆರಂಭವಾಯಿತು. ಈ ಸಭೆಯಲ್ಲಿ ಪರಿಸರ ರಕ್ಷಣೆ ಅಗತ್ಯತೆ ಕುರಿತು ಮಾತುಕತೆ ನಡೆಸಲಾಯಿತು.
2ನೇ ವಿಶ್ವ ಯುದ್ಧದಿಂದಾದ ಪರಿಣಾಮ ಮತ್ತು ಈ ಸಂದರ್ಭದಲ್ಲಿ ನಡೆಯುತ್ತಿದ್ದ ಶೀತಲ ಸಮರದ ಹಿನ್ನೆಲೆಯಲ್ಲಿ ಇದು ನಡೆಯಿತು. ಜಪಾನ್ನ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಪರಮಾಣು ಬಾಂಬ್ ದಾಳಿಯಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಕ್ಯೂಬಾ, ವಿಯೆಟ್ನಾಂ ಮತ್ತು ಇತರರು ಸೇರಿದಂತೆ ಇತರೆ ಕಡೆ ಯುದ್ಧಗಳು ನಡೆಯುತ್ತಿದ್ದವು. 1973ರಲ್ಲಿ ವಿಶ್ವ ಪರಿಸರ ದಿನವಾಗಿ ಘೋಷಿಸಲಾಯಿತು.
ಪರಿಸರವನ್ನು ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಿಲು ಬದ್ಧವಾಗಿರುವುದಾಗಿ ಪರಿಸರ ಕುರಿತ ಜಾಗತಿಕ ಸಭೆ ತಿಳಿಸಿದೆ.
ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ಸಂರಕ್ಷಣಾ ಕ್ರಮಗಳನ್ನು ಉತ್ತೇಜಿಸಲು ಇದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ 2019ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2021-2030ರ ಪರಿಸರ ವ್ಯವಸ್ಥೆಯ ಪುನರ್ಸ್ಥಾಪನೆಯ ನಿರ್ಣಯವನ್ನು ಅಂಗೀಕರಿಸಿತು. ಈ ವಿಶ್ವ ಪರಿಸರ ದಿನದ ಗುರಿ, ಈ ಬದ್ಧತೆಯೆಡೆಗಿನ ಪ್ರಗತಿಯನ್ನು ಬೆಂಬಲಿಸುವುದಾಗಿದೆ.
ಯುಎನ್ಇಪಿ ಪ್ರಕಾರ, ಜಾಗತಿಕವಾಗಿ, ದೇಶಗಳು ಒಂದು ಬಿಲಿಯನ್ ಹೆಕ್ಟೇರ್ ಭೂಮಿಗಳನ್ನು ಪುನರ್ಸ್ಥಾಪನೆಗೆ ನಿರ್ಣಯಿಸಿದೆ. ಅದರಲ್ಲೂ ದೊಡ್ಡ ಪ್ರದೇಶವಾಗಿರುವ ಚೀನಾ ಶೇ 30ರಷ್ಟು ಭೂಮಿ ಮತ್ತು ಸಮುದ್ರವನ್ನು ರಕ್ಷಿಸುವ ಗುರಿ ಹೊಂದಿದೆ.
ಪ್ರಮುಖ ಅಂಶಗಳು:
ಸಾವಯವ ಕೃಷಿಗೆ ಉತ್ತೇಜನ:
ಸಾವಯವ ಕೃಷಿಗೆ ಉತ್ತೇಜಿಸುವುದರಿಂದ ಭೂಮಿ ಫಲವತ್ತತೆಯ ವಿನ್ಯಾಸ ರಕ್ಷಣೆ ಮಾಡಬಹುದಾಗಿದೆ. ಜೊತೆಗೆ ಆಹಾರಗಳು ಬೆಳೆಗಳು ಶೇ 100ರಷ್ಟು ಸುರಕ್ಷಿತ ಮತ್ತು ಆರೋಗ್ಯಯುತವಾಗಿರುತ್ತವೆ.
ಮರ ನೆಡುವುದು:
ನಗರೀಕರಣ ಮತ್ತು ದೇಶಗಳು ವೇಗದ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಮರಗಳ ನಾಶವಾಗಿವೆ. ಗಿಡ-ಮರ ನಾಶ ಮಾಡಿ ಕೈಗಾರಿಕೆ, ಮನೆ ಅಥವಾ ನಗರಗಳ ನಿರ್ಮಾಣ ಮಾಡಲಾಗಿದೆ. ಇದು ನೀರಿನ ಸಾಮರ್ಥ್ಯ ನಷ್ಟದ ಜೊತೆಗೆ ಪ್ರಮುಖ ಪರಿಸರ ಸಮಸ್ಯೆಯಾಗಿದೆ. ಈ ಹಿನ್ನೆಲೆ ಭೂಮಿಯ ಗುಣಮಟ್ಟ ರಕ್ಷಣೆ ಮತ್ತು ಆಮ್ಲಜನಕದ ಉದ್ದೇಶದಿಂದ ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕಿದೆ.
ಶುದ್ಧ ಜಲದ ಪರಿಸರ ವ್ಯವಸ್ಥೆ ಮರು ನಿರ್ಮಾಣ:
ಶುದ್ಧ ಜಲ ಪರಿಸರ ವ್ಯವಸ್ಥೆಯ ಜಲಚಕ್ರ ಭೂಮಿ ಫಲವತ್ತತೆ ಕಾಪಾಡುತ್ತದೆ. ಇದು ಬಿಲಿಯಾಂತರ ಜನರಿಗೆ ಆಹಾರ ಮತ್ತು ನೀರು ಒದಗಿಸುವ ಮೂಲಕ ಬರ, ಪ್ರವಾಹದಿಂದ ರಕ್ಷಿಸುತ್ತದೆ. ಅನೇಕ ಸಸ್ಯಗಳು ಮತ್ತು ಪ್ರಾಣಿಗಳಿಗೆ ಆವಾಸಸ್ಥಾನ ಕಲ್ಪಿಸುತ್ತದೆ. ಹವಾಮಾನ ಬದಲಾವಣೆ, ಮಾಲಿನ್ಯ, ಮೀನುಗಾರಿಕೆ ಅತಿ ಎನ್ನುವ ಮಟ್ಟದಲ್ಲಿ ಸಾಗಿದೆ. ನೀರಿನ ಗುಣಮಟ್ಟ ಸುಧಾರಣೆ ಮೂಲಕ ಜನರು ಇದನ್ನು ನಿಲ್ಲಿಸಬಹುದಾಗಿದೆ. ಮಾಲಿನ್ಯದ ಮೂಲ ಪತ್ತೆ ಮತ್ತು ಶುದ್ಧ ಜಲ ಪರಿಸರ ವ್ಯವಸ್ಥೆಯನ್ನು ನಿರ್ವಹಣೆ ಮಾಡಬೇಕಿದೆ.
ಕರಾವಳಿ ಮತ್ತು ಸಾಗರ ಪ್ರದೇಶಗಳ ನವೀಕರಣ:
ಸಾಗರ ಮತ್ತು ಸಮುದ್ರಗಳು ಮಾನವರಿಗೆ ಆಮ್ಲಜನಕ, ಆಹಾರ ಮತ್ತು ನೀರನ್ನು ಒದಗಿಸುತ್ತವೆ. ಆದರೆ ಹವಾಮಾನ ಬದಲಾವಣೆಯನ್ನು ತಗ್ಗಿಸುತ್ತದೆ ಮತ್ತು ಸಮುದಾಯಗಳು ತೀವ್ರ ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತವೆ. ವಿಶ್ವಸಂಸ್ಥೆಯ ಪ್ರಕಾರ, 3 ಬಿಲಿಯನ್ಗೂ ಹೆಚ್ಚು ಜನರು, ಪ್ರಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಾಗರ ಮತ್ತು ಕರಾವಳಿ ಜೀವವೈವಿಧ್ಯತೆಯನ್ನು ತಮ್ಮ ಜೀವನೋಪಾಯವಾಗಿ ಕಂಡುಕೊಂಡಿದ್ದಾರೆ. ಗ್ರೋವ್ಗಳು, ಉಪ್ಪು ಜವುಗುಗಳು, ಕೆಲ್ಪ್ ಕಾಡುಗಳು ಮತ್ತು ಹವಳದ ಬಂಡೆಗಳನ್ನು ಪುನಃಸ್ಥಾಪಿಸುವ ಮೂಲಕ ನೀಲಿ ಪರಿಸರ ವ್ಯವಸ್ಥೆ ಕಾಪಾಡಬೇಕಿದೆ.
ಹಣಕಾಸು ಪುನಃಸ್ಥಾಪನೆ:
ಭೂಮಿ ರಕ್ಷಣೆಗೆ ಸುಸ್ಥಿರ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕ್ ಖಾತೆ ಮರುಸ್ಥಾಪನೆಗೆ ದೇಣಿಗೆ ನೀಡಿ ಅಥವಾ ಕ್ರೌಡ್-ಫಂಡ್ ಸಹಾಯ ಮಾಡಬೇಕಿದೆ.
ಪ್ರತಿದಿನ ಪರಿಸರ ದಿನವಾಗುವತ್ತ ನಾವೆಲ್ಲರೂ ಗಮನ ಹರಿಸಬೇಕಾಗಿದೆ. ಮುಖ್ಯವಾಗಿ ಹೆಚ್ಚಿನ ಕಡೆಗಳಲ್ಲಿ ವನಮೋತ್ಸವ ಬೇಸಿಗೆಯಲ್ಲಿ ಒಣ ಮಹೋತ್ಸವ ಆಗಿರುತ್ತದೆ ಗಿಡ ನೆಡುವುದು ಮಾತ್ರವಲ್ಲ ಅದರ ಪಾಲನೆಯು ಬಹಳ ಮುಖ್ಯ. ಕನಿಷ್ಠ ಮಳೆಗಾಲ ಹೊರತುಪಡಿಸಿ ನಾಲ್ಕು ತಿಂಗಳು ಸರಿಯಾದ ಪ್ರಮಾಣದಲ್ಲಿ ನೀರು ಕೊಟ್ಟಲ್ಲಿ ಗಿಡ ಬೆಳೆದು ಪರಿಸರಕ್ಕೆ ದೊಡ್ಡ ಕೊಡುಗೆ ಆಗಬಹುದು.
ಈಗಿನ ಸಮಯದಲ್ಲಿ ಅಭಿವೃದ್ಧಿಯ ನೆಪದಲ್ಲಿ ಹಲವಾರು ಗಿಡಮರಗಳ ನಾಶ ಸರ್ವೇಸಾಮಾನ್ಯವಾಗಿದೆ. ಅಭಿವೃದ್ದಿ ಬೇಕು, ಆದರೆ ಅದರೊಂದಿಗೆ ಪರಿಸರವನ್ನು ಕೂಡ ಬೆಳೆಸುವ ಸಂಕಲ್ಪ ತೊಡಬೇಕಾಗಿದೆ. ಪರಿಸರ ನಾಶವಾದಲ್ಲಿ ಕೇವಲ ಮನುಷ್ಯರಿಗೆ ಮಾತ್ರವಲ್ಲ ,ಇಡೀ ಪ್ರಾಣಿ ಸಂಕುಲಕ್ಕೆ ಗಂಡಾಂತರ ಕಾದಿದೆ ಪರಿಸರ ದಿನದಲ್ಲಿ ಮಾತ್ರ ಗಿಡಗಳನ್ನು ನೆಡೆದೆ ವರ್ಷಪೂರ್ತಿ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ನಮ್ಮಿಂದ ಆಗಬೇಕು.
ನಮ್ಮ ಮನೆ ನಮ್ಮ ಮರ ಅಭಿಯಾನ:
ಉಡುಪಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಮ್ಮ ಮನೆ ನಮ್ಮ ಮರ ತಂಡ ಪರಿಸರವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ವರ್ಷಪೂರ್ತಿ ಗಿಡಗಳನ್ನು ಬೆಳೆಸುವ ದೊಡ್ಡ ಕೆಲಸ ಮಾಡುತ್ತಿದೆ ಇತರ ವಿಶೇಷ ಮನೆ ಮನೆಗಳಲ್ಲಿ ಗಿಡಗಳನ್ನು ನೆಡುವುದು. ಯಾಕೆಂದರೆ ಮನೆ ಆವರಣದಲ್ಲಿ ನೆಟ್ಟ ಗಿಡ ಪಾಲನೆ ಆ ಮನೆಯವರಿಂದ ನಡೆಯುತ್ತದೆ. ಈ ಅಭಿಯಾನವನ್ನು ಮೆಚ್ಚಿ ಸಾಲುಮರ ತಿಮ್ಮಕ್ಕ ಫೌಂಡೇಶನ್ ವತಿಯಿಂದ ಪ್ರಶಸ್ತಿ ಕೂಡ ಈ ತಂಡಕ್ಕೆ ಲಭಿಸಿರುವುದು ಅಭಿನಂದನೀಯ.
ಇಂತಹ ಹಲವಾರು ಸಂಘ ಸಂಸ್ಥೆಗಳು ಪರಿಸರದ ಕೆಲಸ ನಿರಂತರವಾಗಿ ಮಾಡಿದ್ದಲ್ಲಿ ಪರಿಸರ ದಿನ ವರ್ಷಪೂರ್ತಿ ನಡೆಯಲು ಸಾಧ್ಯ. ನಾವೆಲ್ಲರೂ ಒಂದಾಗಿ ಪರಿಸರಕ್ಕೆ ಕೊಡುಗೆ ಕೊಡೋಣ.
- ರಾಘವೇಂದ್ರ ಪ್ರಭು ಕರ್ವಾಲು, ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ