ಲೇಖಾ ಲೋಕ-46: ಪ್ರಸಿದ್ಧ ಕವಿ, ವಿಮರ್ಶಕ, ಶಿಕ್ಷಕ ವಿ. ಸೀತಾರಾಮಯ್ಯ

Upayuktha
0




ಆದರ್ಶ ಶಿಕ್ಷಕರಾಗಿ, ಪ್ರಬಂಧಕಾರರಾಗಿದ್ದ ವೆಂಕಟರಾಮಯ್ಯ ಸೀತಾರಾಮಯ್ಯನವರು ಕನ್ನಡ ಸಾಹಿತ್ಯದಲ್ಲಿ ಅನುಪಮ ಕೃಷಿ ಮಾಡಿ ನಾಡಿನಲ್ಲಿ ಹೆಸರಾಂತ ಮಹನೀಯರಾಗಿದ್ದರು. ವಿ.ಸೀ. ಎಂದೇ ಹೆಸರು ಪಡೆದಿದ್ದ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ  ಬಹುಶ್ರುತ ಪಂಡಿತರು ಎಂದೆನಿಸಿ, ಅನೇಕ ಶಿಷ್ಯ ವರ್ಗದವರನ್ನು ಪ್ರೀತಿಯಿಂದ ಸಂಪಾದಿಸಿದ್ದರು.


ಬೆಂಗಳೂರು ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಹಳ್ಳಿಯಲ್ಲಿ ವೆಂಕಟರಾಮಯ್ಯ ಮತ್ತು ದೊಡ್ಡ ವೆಂಕಟಮ್ಮ ಪುತ್ರನಾಗಿ 2-10-1899 ರಂದು ಜನಿಸಿದರು. ಮೈಸೂರಿನಲ್ಲಿ ಅಭ್ಯಾಸ ಮಾಡಿ, ಬಿ.ಎ ಪದವಿ ಮತ್ತು ಎಂ.ಎ. ಪದವಿಯನ್ನು 1922ರಲ್ಲಿ ಪಡೆದರು. ಆರು ಕವನ ಸಂಕಲನಗಳನ್ನು ಬಿಡುಗಡೆ ಮಾಡಿದರು. ಆರು ಕವನ ಸಂಕಲನಗಳಲ್ಲಿ, ಅರಲು ಬರಲು ಕೃತಿಗೆ 1973 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು. ಇವರು ಪ್ರಬಂಧಗಳನ್ನು ಬರೆದರು. ಅದರಲ್ಲಿ ಬೆಳದಿಂಗಳು, ಸೀಕರಣೆ ಪ್ರಮುಖವಾದ ಕೃತಿಗಳಾಗಿವೆ.


ನಾಟಕಗಳನ್ನು ಸಹ ಬರೆದರು. ಅದರಲ್ಲಿ ಮುಖ್ಯವಾಗಿ "ಪಾಪ ಪುಣ್ಯ" ಎಂಬ ನಾಟಕ ಚಲನಚಿತ್ರವಾಗಿ ಪ್ರದರ್ಶನಗೊಂಡಿತು. ಮತ್ತೊಂದು ನಾಟಕ ಪಟ್ಟ ಬಂಧ ಮೇಜರ್ ಬಾರ್ಬರ್ ಇವರಿಂದ ರಚನೆಯಾದ ನಾಟಕ. ಸೃಜನಾತ್ಮಕ ರಚನೆಗಳು, ವಿಮರ್ಶಾ ಕೃತಿಗಳು ಸಹ ಇವರು ಬರೆದು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಮಹನೀಯರು. ಕಾಲೇಜು ದಿನಗಳು ಅಶ್ವತ್ಥಾಮನ್, ಕವಿ ಕಾವ್ಯ ದೃಷ್ಟಿ, (ವಿಮರ್ಶೆ) ಹಣ ಪ್ರಪಂಚ, ಅರ್ಥ ಮತ್ತು ಮೌಲ್ಯ, ಸಾಹಿತ್ಯಾವಲೋಕನ, ಕಲಾನುಭವ (ಉಪನ್ಯಾಸಗಳ ಸಂಗ್ರಹ) ಮಹಾಕವಿ ಪಂಪ, ಅಭಿಜ್ಞಾನ ಶಾಕುಂತಲ ಮತ್ತು ಅನುವಾದಿತ ಶ್ರೇಷ್ಠವಾದ ಕೃತಿಗಳನ್ನು ಸಹ ಬರೆದು ನಾಡಿಗೆ ನೀಡಿದ್ದಾರೆ.


ಬಂಗಾಳಿ ಸಾಹಿತ್ಯ ಚರಿತ್ರೆ ಪಿಗ್ಮ್ಯಾಲಿಯನ್ ಮೇಜರ ಬಾರ್ಬರ, ಪ್ರಮುಖವಾದವು.‌ ಸಂಪಾದಿಸಿದ ಕೃತಿಗಳಾದ ಕವಿರಾಜ ಮಾರ್ಗ, ವಡ್ಡಾರಾಧನೆ, ವ್ಯಾಕರಣಗಳು, ಯಕ್ಷಗಾನ ಜನಪದ ಸಾಹಿತ್ಯ ಪ್ರಸಿಧ್ಧವಾದ ಕೃತಿಗಳು. 1928 ರಿಂದ 1955 ರವರೆಗೆ ಅನೇಕ ಶಿಷ್ಯರಿಗೆ ಆದಶ೯ ಶಿಕ್ಷಕರಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಮಾಡಿದ  ಮಹಾನುಭಾವರು. ಇವರಿಗೆ 1973 ರಲ್ಲಿ ರಾಜ್ಯ ನೀಡುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ಡಾಕ್ಟರೇಟ್ ಪದವಿ ಮೈಸೂರು ವಿಶ್ವವಿದ್ಯಾಲಯದಿಂದ ದೊರೆತು ಸನ್ಮಾನಿಸಲಾಯಿತು.



1953ರಲ್ಲಿ ಕುಮಟಾದಲ್ಲಿ ಜರಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನುರಿತ ಶಿಕ್ಷಕರಾಗಿ, ಎಲ್ಲಾ ಶಿಷ್ಯರ ಪ್ರೀತಿಯನ್ನು ಸಹ ಸಂಪಾದಿಸಿ ಲೇಖಕರಾಗಿ, ವಿಮರ್ಶಕರಾಗಿ, ಪ್ರಬಂಧಕಾರರು ಎಂದೆನಿಸಿ, ಪ್ರಸಿಧ್ಧರಾಗಿದ್ದ ಸಾಹಿತ್ಯದ ಸಾಧಕರು. ನವೋದಯ ಕವಿಯೆನಿಸಿ ಉತ್ಕೃಷ್ಟ ಕವಿ ಸಂಕಲನಗಳನ್ನು ಬಿಡುಗಡೆ ಮಾಡಿದರು. 

ವಿ. ಸೀತಾರಾಮಯ್ಯನವರು ಪ್ರಾರಂಭದಲ್ಲಿ 1956 ರಿಂದ 1958 ರವರೆಗೆ ಆಕಾಶವಾಣಿಯಲ್ಲಿಯೂ ಸಹ ಭಾಷಣ ವಿಭಾಗದಲ್ಲಿ ಕೆಲಸವನ್ನು ಮಾಡಿದ್ದರು. ವಿ.ಸೀತಾರಾಮಯ್ಯನವರು ಪ್ರಾರಂಭದಲ್ಲಿ ಸಾಂಸ್ಕೃತಿಕ ನಗರ ಮೈಸೂರಿನ ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಉಪಾಧ್ಯಾಯ ವೃತ್ತಿ ಆರಂಭಿಸಿ, ನಂತರ ವಿವಿಧ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನು ಮಾಡಿ ನಿವೃತ್ತರಾದ ಮಹನೀಯರು. 1964 ರಿಂದ 1968 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಯನ್ನು ಮಾಡಿದ ಕವಿಗಳು. ಪ್ರಬುಧ್ಧ ಕನಾ೯ಟಕ  ಪತ್ರಿಕೆ, ಕನ್ನಡ ನುಡಿ ಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮತ್ತು ಕವಿ ಕಾವ್ಯ ಪರಂಪರೆಯ ಕಾವ್ಯ ಮಾಲೆಯ ಸಂಪಾದಕರಾಗಿದ್ದುದು ವಿಶೇಷ. ಮುಂಬಯಿ ಪ್ರಾಂತ್ಯದ ಭಾಷಾ ಸಮ್ಮೇಳನ 1954 ರಲ್ಲಿ ಜರುಗಿದಾಗ ಅದರ ಅಧ್ಯಕ್ಷತೆ ವಹಿಸಿ ಯಶಸ್ವಿಗೊಳಿಸಿದರು.



ಶ್ರೀ ಶೈಲ ಶಿಖರ, ವಾಲ್ಮೀಕಿ ರಾಮಾಯಣ, ಹಿರಿಯರು ಗೆಳೆಯರು, ಮತ್ತು ಸಂವಿಧಾನ ಕಾನೂನು ಮೊದಲಾದ ಗದ್ಯ ಕೃತಿಗಳನ್ನು ಮತ್ತು ಅನುವಾದ ಕೃತಿಗಳಾದ ಪುರಂದರದಾಸರು, ಪಂಜೆ ಮಂಗೇಶರಾವ್, ತ್ಯಾಗರಾಜ ಹೀಗೆ ಹಲವಾರು ಕೃತಿಗಳನ್ನು ಅನುವಾದ ಮಾಡಿದ ಮಹಾನುಭಾವರು. ಇವರು ಡಿ ವಿ ಗುಂಡಪ್ಪನವರು, ಪಂಜೆ ಮಂಗೇಶರಾವ್, ಕೆ ವೆಂಕಟಪ್ಪ ಮುಂತಾದ ಮಹನೀಯರ ಕೃತಿಗಳನ್ನು ಆಂಗ್ಲಭಾಷೆಗೆ ಭಾಷಾಂತರಿಸಿದ್ದಾರೆ. ಪ್ರವಾಸ ಕಥನ ಪಂಪಾಯಾತ್ರೆ ಎಲ್ಲಾ ಜನರ ಮೆಚ್ಚುಗೆಗೆ ಪಾತ್ರವಾದ ಕೃತಿ. ವಿದೇಶ ಪ್ರವಾಸ ಮಾಡಿ, ಅನೇಕ ಅನುಭವವನ್ನು ಪಡೆದರು. ಶಾಂತಿನಿಕೇತನವನ್ನು (ರವೀಂದ್ರನಾಥ್ ಟ್ಯಾಗೋರ್) ಸಂದರ್ಶಿಸಿದರು. ಇವರು ಅನೇಕ ಕಾವ್ಯ ಪ್ರಬಂಧ, ವಿಮರ್ಶೆ, ನಾಟಕ, ಅನುವಾದ ಕೃತಿಗಳನ್ನು ಕನ್ನಡ ನಾಡಿಗೆ ನೀಡಿ ಬೆಂಗಳೂರಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ 4-9-1983 ರಂದು ನಿಧನ ಹೊಂದಿ ಸಾಹಿತ್ಯಲೋಕದಿಂದ ಕಣ್ಮರೆಯಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top