ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸಹಕಾರನಗರದ ಶ್ರೀಮದುತ್ತರಾದಿ ಮಠದಲ್ಲಿ ಜೂನ್ 24 ರಿಂದ 27ರ ವರೆಗೆ ವಿವಿಧ ಧಾರ್ಮಿಕ| ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ : ಜೂನ್ 24, ಮಂಗಳವಾರ ಸಂಜೆ 6-00ಕ್ಕೆ ಶ್ರೀಕೃಷ್ಣಾಮೃತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ.
ಜೂನ್ 25, ಬುಧವಾರ : ಸಂಜೆ 6-00ಕ್ಕೆ ಶ್ರೀ ವೇಣುಗೋಪಾಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ.
ಜೂನ್ 26, ಗುರುವಾರ ಸಂಜೆ 6-00ಕ್ಕೆ "ಹರಿನಾಮ ಸಂಕೀರ್ತನೆ". ಗಾಯನ : ಕು|| ಅಭಿಜ್ಞಾ ಪಿ. ಕಶ್ಯಪ್, ಪಿಟೀಲು : ವಿದುಷಿ ಭಾರ್ಗವಿ, ಮೃದಂಗ : ವಿದ್ವಾನ್ ನಟರಾಜ್.
ಜೂನ್ 27, ಶುಕ್ರವಾರ : ಸಂಜೆ 6-00ಕ್ಕೆ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ ಏರ್ಪಡಿಸಿದೆ.
ಸ್ಥಳ : ಶ್ರೀಮದುತ್ತರಾದಿಮಠ, ಸಹಕಾರನಗರ, ಬೆಂಗಳೂರು-560092.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ