ಬಾಗಲಕೋಟ: ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಸಿ ಎಸ್ ಸಿ ಸೇವಾ ಕೇಂದ್ರಗಳ ಸಹಯೋಗದಲ್ಲಿ ಮಾನ್ಸೂನ್ ಮೆಗಾ ಲೋನ್ ಕಾರ್ಯಕ್ರಮವನ್ನು, ನವನಗರದ, ಶಟ್ಟರ್ ನಂಬರ್ 35 ರಲ್ಲಿರುವ ಬುಡ್ಡರ ಕಾಂಪ್ಲೆಕ್ಸಿನಲ್ಲಿರುವ ಸಿ ಎಸ್ ಸಿ ಜಿಲ್ಲಾ ಕೇಂದ್ರದಲ್ಲಿ ಬುಧವಾರ (ಜೂ.4) ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಕರ್ನಾಟಕ ಮತ್ತು ಕೇರಳ ಹೆಚ್ ಡಿಎಫ್ ಸಿ ಬ್ಯಾಂಕ್ ಲಿಮಿಟೆಡ್ನ ಶಾಖೆಯ ಬ್ಯಾಂಕಿಂಗ್ ಮುಖ್ಯಸ್ಥ ಅಹ್ಮದ್ ಜಕಾರಿಯ, ಹೆಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್ ಪಶ್ಚಿಮ ಮತ್ತು ದಕ್ಷಿಣ ಏಬಿಸಿಪಿ ವ್ಯವಹಾರ ಮುಖ್ಯಸ್ಥೆ ಶ್ರೀಮತಿ ವಂದನಾ ಲಾಲ್, ಕರ್ನಾಟಕ ಸಿಎಸ್ಸಿ ಇ-ಆಡಳಿತ ರಾಜ್ಯ ಮುಖ್ಯಸ್ಥ ಶಕೀಬ್ ಅಹ್ಮದ್, ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್ ನ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ರಜನೀಶ್ ಬರುವಾ, ಕರ್ನಾಟಕ ಮತ್ತು ಕೇರಳ ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್ನ ಎಬಿಸಿಪಿ ವಲಯ ಮುಖ್ಯಸ್ಥ ವಲಯ ಮುಖ್ಯಸ್ಥ ರಾಘವೇಂದ್ರ ರಾವ್ ಬಿ, ಹಾಗೂ ಕರ್ನಾಟಕ ಎಚ್ ಡಿ ಎಫ್ ಸಿ ರಾಜ್ಯ ಮುಖ್ಯಸ್ಥ ಅನಂತ ಕೆ ಎಸ್ ಅವರು ಸಾಮೂಹಿಕವಾಗಿ ವಿಡಿಯೊ ಕರೆ ಮೂಲಕ ಆನ್ಲೈನ್ ನಲ್ಲಿ ಚಾಲನೆ ನೀಡಿದರು.
ಅನಂತರ HDFC ಬ್ಯಾಂಕಿನ ಪೂರ್ವ ಹಾಗೂ ಪಶ್ಚಿಮ ವಲಯದ ಮುಖ್ಯಸ್ಥ ಮಹಾಂತೇಶ ಕರಿಗಾರ ಅವರು ಮಾತನಾಡಿ, ಈ ಮಾನ್ಸೂನ್ (ಮುಂಗಾರು) ಮೆಗಾ ಲೋನ್ ಮೂಲಕ ಹಲವು HDFC ಸಾಲದ ಉತ್ಪನ್ನಗಳನ್ನು ರೈತರಿಗೂ ಮತ್ತು ಸಾಮಾನ್ಯ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿಮತ್ತು ವಿಶೇಷ ರಿಯಾಯಿತಿ ಯೊಂದಿಗೆ ಒದಗಿಸಲಾಗುವುದು ಹಾಗೂ ಇತರ ಸಾಲ ಸೌಲಭ್ಯಗಳ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು HDFC Bank ಹೊಂದಿದೆ ಎಂದು ತಿಳಿಸಿದರು.
ಸಿ ಎಸ್ ಸಿ ಜಿಲ್ಲಾ ವ್ಯವಸ್ಥಾಪಕ ಶ್ರೀರಾಮ್ ಎನ್ ಮಾತನಾಡಿ, ಈ ಮೇಲಿನ ಎಲ್ಲಾ HDFC ಲೋನ್ ಸೇವೆಗಳನ್ನು ಜಿಲ್ಲಾದ್ಯಂತ ಸಿ ಎಸ್ ಸಿ ಸೇವಾ ಕೇಂದ್ರಗಳ ಮೂಲಕ ರೈತರ ಮನೆ ಬಾಗಿಲಿಗೆ ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಮತ್ತು ಯಾವುದೇ ನಮ್ಮ ಸ್ಥಳೀಯ ಉದ್ಯಮಿದಾರರು ದೇಶದ ಬೆನ್ನೆಲುಬಾಗಿರುವ ರೈತರನ್ನು ಸಾವಲಂಬಿಯಾಗಿಸಲು ಎಚ್ ಡಿ ಎಫ್ ಸಿ ಬ್ಯಾಂಕಿನವರು ಮಾನ್ಸೂನ್ ಮೆಗಾ ಲೋನ್ ಅಡಿಯಲ್ಲಿ ರೈತರ ಉತ್ತೇಜನಗಳಿಗೆ ಸಾಲವನ್ನು ಕೊಡುತ್ತಿದ್ದು ನಮ್ಮ ಉದ್ಯಮದಾರರು ಹೆಚ್ಚಿನ ರೈತರನ್ನು ಸಂಪರ್ಕಿಸಿ ಸಾಲವನ್ನು ಕೊಡುವುದರ ಮೂಲಕ ತಮ್ಮ ಆದಾಯದ ಜೊತೆಗೆ ರೈತರನ್ನು ಸಾವಲಂಬಿಯಾಗಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ HDFC ಸಿಬ್ಬಂದಿಗಳು ವೆಂಕಟೇಶ್ವರ ರಾವ್ ಚಿಲುಕುರಿ, ಕಾಶಿಮ್ ಅನವಲ್, ರಾಮಣ್ಣ ಕುಂಬಾರ, ರಿಶಿಕೇಶ್, ಪ್ರತಿಭಾ, ಮಹಾಂತೇಶ್, ಸುನಿಲ್, ರಮೇಶ್ ಮುಂತಾದವರು ಮತ್ತು ಸಿ ಎಸ್ ಸಿ ವಿ ಎಲ್ ಇ ಗಳಾದ ಹಬೀಬ್ ಎಂಡಿಗೇರಿ, ಆಶಿಶ್ ಪ್ರಭುಕರ್, ಚಂದ್ರಶೇಖರ್ ಪಟ್ರೋತ್ರಿ, ಶಾಹೀನ್ ರಕ್ಕಸಗಿ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ