ಬೆಂಗಳೂರು: ಅತ್ಯಂತ ಜನಪ್ರಿಯ ಆಭರಣ ಸಂಸ್ಥೆಗಳಲ್ಲಿ ಒಂದಾಗಿರುವ ಎವಿಆರ್ ಸ್ವರ್ಣ ಮಹಲ್ ಜ್ಯುವೆಲರ್ಸ್ ಇದೀಗ ದಕ್ಷಿಣ ಭಾರತದ ಮದುಮಗಳನ್ನು ಅದ್ದೂರಿಯಾಗಿ ಸಿಂಗರಿಸುವುದಕ್ಕಾಗಿಯೇ ಸಿದ್ಧಗೊಳಿಸಿರುವ ತನ್ನ ‘ಸಂಪ್ರದಾಯ’ ಎಂಬ ಅದ್ಭುತ ಆಭರಣ ಸಂಗ್ರಹವನ್ನು ಲೋಕಾರ್ಪಣೆ ಮಾಡಿದೆ. ಈ ಸಂಗ್ರಹವನ್ನು ಇತ್ತೀಚೆಗೆ ಬೆಂಗಳೂರಿನ ಬಸವನಗುಡಿಯ ಗಂಜಾಂ ಮಂಟಪದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಫ್ಯಾಷನ್ ಶೋ ನಡೆದಿದ್ದು, ನಟಿ ಧನ್ಯ ರಾಮ್ ಕುಮಾರ್ ಮತ್ತು ವಂಶಿ ಉದಯ್ ಅವರು ಈ ಆಭರಣ ಸಂಗ್ರಹವನ್ನು ಪ್ರದರ್ಶಿಸಿದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಂಪ್ರದಾಯದ ಸಂಗ್ರಹಗಳನ್ನು ಪ್ರದರ್ಶಿಸಲಾಯಿತು.
‘ಸಂಪ್ರದಾಯ’ ಆಭರಣ ಸಂಗ್ರಹವು ದಕ್ಷಿಣ ಭಾರತದ ವಿವಾಹ ಸಂಪ್ರದಾಯಗಳಿಗೆ ಸಲ್ಲಿಸಿರುವ ಗೌರವ ಎಂದು ಸಂಸ್ಥೆ ತಿಳಿಸಿದ್ದು, ಈ ಆಭರಣ ಸಂಗ್ರಹವು ಈ ಕಾಲದ ಮದುಮಗಳು ತನ್ನ ಪರಂಪರೆಯನ್ನು ಹೆಮ್ಮೆಯಿಂದ ಧರಿಸಲು ಅನುವು ಮಾಡಿಕೊಡುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಎ.ಬಿ.ಎಸ್. ಸಂಜಯ್ ಅವರು, “ಸಂಪ್ರದಾಯ ಕೇವಲ ಒಂದು ಆಭರಣ ಸಂಗ್ರಹ ಮಾತ್ರವಲ್ಲ, ಇದು ದಕ್ಷಿಣ ಭಾರತದ ವಿವಾಹ ಸಂಪ್ರದಾಯಕ್ಕೆ ಸಂದ ಗೌರವವಾಗಿದೆ” ಎಂದರು.
ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಸೌಮ್ಯ ಅವರು, “ಸಂಪ್ರದಾಯ ಸಂಗ್ರಹದ ಪ್ರತಿಯೊಂದು ಆಭರಣವೂ ಹೊಸ ಬದುಕಿನ ಕಾಲಿಡುತ್ತಿರುವ ವಧುವಿನ ಘನತೆ ಮತ್ತು ಮದುವೆ ಸಂಪ್ರದಾಯಗಳಿಂದ ಜನ್ಮತಾಳಿವೆ” ಎಂದರು.
ನಿರ್ದೇಶಕರಾದ ಎ.ವಿ.ಆರ್. ಸಿದ್ಧಾಂತ್ ಅವರು, “ಈ ಸಂಗ್ರಹವು ಹಳೆಯದು ಮತ್ತು ಹೊಸದರ ಮಧ್ಯದ ಸೇತುವೆಯಾಗಿದೆ. ಸಂಪ್ರದಾಯವನ್ನು ಸಂಭ್ರಮಿಸುವ ಪ್ರತಿಯೊಬ್ಬ ವಧುವಿಗಾಗಿ ಈ ಸಂಗ್ರಹವನ್ನು ರಚಿಸಲಾಗಿದೆ” ಎಂದರು.
ಮತ್ತೊಬ್ಬ ನಿರ್ದೇಶಕರಾದ ಎ.ವಿ.ಆರ್. ಶ್ರೀ ಸ್ಮರಣ್, “ಸಂಪ್ರದಾಯ ಸಂಗ್ರಹವು ಚಿನ್ನದ ಮೂಲಕ ಕಥೆಗಳನ್ನು ಹೇಳುವ ನಮ್ಮ ಹುಮ್ಮಸ್ಸಿನ ಪ್ರತಿಬಿಂಬವಾಗಿದೆ” ಎಂದರು.
‘ಸಂಪ್ರದಾಯ’ ಸಂಗ್ರಹವು ಕರ್ನಾಟಕ ಮತ್ತು ತಮಿಳುನಾಡಿನಲ್ಲಿರುವ ಎವಿಆರ್ ಸ್ವರ್ಣ ಮಹಲ್ ಜ್ಯುವೆಲರ್ಸ್ ನ 20 ಶೋರೂಂಗಳಲ್ಲಿ ಲಭ್ಯವಿದೆ. ಈ ಸಂಗ್ರಹವನ್ನು ವೀಕ್ಷಿಸಲು https://avrswarnamahal.com ಗೆ ಭೇಟಿ ನೀಡಬಹುದು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ