ನವದೆಹಲಿ: ವಸಂತ್ ಕುಂಜ್ ನಲ್ಲಿರುವ ಪೇಜಾವರ ಮಠದ ಶಾಖೆ ಶ್ರೀ ಕೃಷ್ಣ ಧಾಮದಲ್ಲಿ ಭಾನುವಾರ 31 ವಿಪ್ರ ಬಾಲಕರಿಗೆ ಸಾಮೂಹಿಕ ಉಪನಯನ ಸಂಸ್ಕಾರ ಸಮಾರಂಭವು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ವೈಭವದಿಂದ ನೆರವೇರಿತು.
ಬಿಹಾರ ಮತ್ತು ಉತ್ತರಪ್ರದೇಶಗಳಲ್ಲಿ ತೀರಾ ಬಡತನದಲ್ಲಿರುವ ಬ್ರಾಹ್ಮಣರ ಮಕ್ಕಳನ್ನು ಕಳೆದ ವರ್ಷಗಳಿಂದ ಕರೆತಂದು ಇಲ್ಲಿನ ವೇದವ್ಯಾಸ ಗುರುಕುಲದಲ್ಲಿ ಸಂಪೂರ್ಣ ಉಚಿತ ವಸತಿ ಅಶನ ವಸನಾದಿ ಸಹಿತ ಶಿಕ್ಷಣ ನೀಡಲಾಗುತ್ತಿದೆ. ಅವರಲ್ಲಿ ಅರ್ಹತೆ ಹೊಂದಿರುವ ಬಾಲಕರಿಗೆ ಶ್ರೀಮಠದ ಐವೇಜಿನಿಂದಲೇ ಸಾಮೂಹಿಕ ಉಪನಯನ ಸಂಸ್ಕಾರ ಸಮಾರಂಭವನ್ನೂ ನಡೆಸಲಾಗುತ್ತದೆ. ಬಾಲಕರು ಹೆತ್ತವರಿಗೆ ಹೊಸ ವಸ್ತ್ರ, ಧಾರ್ಮಿಕ ವಿಧಿ, ನೂರಾರು ಜನರಿಗೆ ಭೋಜನ ಕೂಟ ಸಹಿತ ಸಮಾರಂಭದ ಎಲ್ಲ ವೆಚ್ಚಗಳನ್ನು ಶ್ರೀಮಠವೇ ಭರಿಸುತ್ತದೆ. ಶ್ರೀಗಳವರು ಎಲ್ಲ ಮಕ್ಕಳಿಗೂ ನಾರಾಯಣ ಅಷ್ಟಾಕ್ಚರ ಮಂತ್ರೋಪದೇಶ ನೀಡಿ ತಪ್ತಮುದ್ರಾಧರಣೆಗೈದು ವಿಪ್ರ ವಿಹಿತವಾದ ನಿತ್ಯಕರ್ಮಾನುಷ್ಠಾನಗಳ ಅವಶ್ಯವಾಗಿ ನಿರ್ವಹಿಸುವ ಕುರಿತು ಸಂದೇಶ ನೀಡಿ ಹರಸಿದರು.
ಗುರುಕುಲದ ಪ್ರಾಚಾರ್ಯ ಡಾ ವಿಠೋಬಾಚಾರ್ಯರ ನೇತೃತ್ವದಲ್ಲಿ ಋತ್ವಿಜರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ನವದೆಹಲಿ ಕೇಂದ್ರೀಯ ಸಂಸ್ಕೃತ ವಿ ವಿ ಕುಲಪತಿ ಡಾ ಶ್ರೀನಿವಾಸ ಆಚಾರ್ಯ ವರಖೇಡಿ, ಶ್ರೀನಿಧಿ ಆಚಾರ್ಯ ಹಾಗೂ ಮಠದ ಆಡಳಿತ ಮಂಡಳಿ ಪದಾಧಿಕಾರಿಗಳು ನೂರಾರು ಮಂದಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ