ಬೆಂಗಳೂರು: ಈ ವಾರಾಂತ್ಯದಲ್ಲಿ (ಮೇ 17 ಮತ್ತು 18) ನಗರದ ಹೃದಯ ಭಾಗದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಶ್ರೀ ರಾಮ-ಕೃಷ್ಣರ ಮುಖಾಮುಖಿಯಾಗಲಿದೆ. ದೇಶದ ಪ್ರಖ್ಯಾತ ನೃತ್ಯ ಕಲಾವಿದರಾದ ನಿರುಪಮಾ ಹಾಗೂ ರಾಜೇಂದ್ರ ದಂಪತಿಯವರ ಅಭಿನವ ನೃತ್ಯ ಸಂಸ್ಥೆಯ ಕಲಾವಿದರು ‘ರಾಮ ಕಥಾ ವಿಸ್ಮಯ’ವನ್ನು ಕಲಾಪ್ರಿಯರ ಎದುರು ಪ್ರಸ್ತುತ ಪಡಿಸಲಿದ್ದಾರೆ.
ಈ 90 ನಿಮಿಷಗಳ ಡಿಸ್ನಿಯಂತಹ ಸಂಗೀತಮಯ ನಾಟಕವು ರಾಮಾಯಣವನ್ನು ಮಗುವಿನ ಕಲ್ಪನಾಶೀಲ ದೃಷ್ಟಿಕೋನದ ಮೂಲಕ ಕಲಾರಸಿಕರ ಮುಂದಿಡುತ್ತದೆ. ಯಶೋದೆಯು ತನ್ನ ಮಗ ಬಾಲ ಕೃಷ್ಣನಿಗೆ ಮಲಗುವ ಮುನ್ನ ರಾಮನ ಕಥೆಯನ್ನು ಹೇಳುವ ರೂಪದಲ್ಲಿ ಈ ಕಥೆಯು ಜೀವಂತಿಕೆ ಪಡೆಯುತ್ತದೆ. 60 ಕಲಾವಿದರು ಪ್ರಸ್ತುತ ಪಡಿಸುವ ಈ ಪ್ರದರ್ಶನವು ಬ್ರಾಡ್ವೇ ಶೈಲಿಯ ವೈಭವದೊಂದಿಗೆ ಕಥಕ್ ಮತ್ತು ಭರತನಾಟ್ಯವನ್ನು ಸಮಕಾಲೀನ ಶೈಲಿಯೊಂದಿಗೆ ನೋಡುಗರನ್ನು ಮಂತ್ರಮುಗ್ದಗೊಳಿಸುತ್ತದೆ.
ಸಂಗೀತ ನಾಟಕ ಅಕಾಡೆಮಿ ಪುರಸ್ಕೃತರಾದ ನಿರುಪಮ ಮತ್ತು ರಾಜೇಂದ್ರ ರಂಗವನ್ನು ತಮ್ಮ ವೈವಿಧ್ಯಮಯ ನೃತ್ಯ ಸಂಯೋಜನೆ, ಸೃಜನಶೀಲ ಕಲೆ-ವೇಷಭೂಷಣ, ಮತ್ತು ಗ್ರಾಮೀಣ ಕುಶಲಕರ್ಮಿಗಳಿಂದ ರಚಿತವಾದ ಕಲಾತ್ಮಕ ಒಡವೆಗಳೊಂದಿಗೆ ಜೀವಂತಗೊಳಿಸುತ್ತಾರೆ. ಪ್ರವೀಣ್ ಡಿ. ರಾವ್ರ ಸಂಗೀತವು ಶಾಸ್ತ್ರೀಯ ಮತ್ತು ನಾಟಕಗಳ ಸಂಪ್ರದಾಯಗಳನ್ನು ಸಂಗಮದಂತಿದ್ದು, ಶತಾವಧಾನಿ ಡಾ. ಆರ್. ಗಣೇಶ್ರ ಕಾವ್ಯಾತ್ಮಕ ಸಾಹಿತ್ಯವು ಕಥೆಯನ್ನು ಭಾವನಾತ್ಮಕವಾಗಿ ಮುನ್ನಡೆಸುತ್ತದೆ. ಸೀತೆಯ ಸ್ವಯಂವರದಿಂದ ರಾಮನ ವಿಜಯೋತ್ಸವದವರೆಗೆ, ದೇವತೆಗಳು, ರಾಕ್ಷಸರು, ಪ್ರಾಣಿಗಳು ಮತ್ತು ವೃಕ್ಷಗಳಂತಹ ಚೈತನ್ಯಮಯ ಪಾತ್ರಗಳು ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ಆಕರ್ಷಿಸುತ್ತವೆ.
2008ರಲ್ಲಿ ಪ್ರಥಮ ಪ್ರದರ್ಶನಗೊಂಡಾಗಿನಿಂದ ‘ರಾಮ ಕಥಾ ವಿಸ್ಮಯ’ ವಿಶ್ವಾದ್ಯಂತ ಸಾವಿರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ, ಮಕ್ಕಳಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ ಮತ್ತು ಎ.ಆರ್. ರೆಹಮಾನ್ರಿಂದ “ಭಾರತದ ಲಾಸ್ ವೇಗಾಸ್ ಶೈಲಿಯ ಪ್ರದರ್ಶನ” ಎಂಬ ಪ್ರಶಂಸೆಯನ್ನು ಪಡೆದಿರುವ ಈ ನೃತ್ಯ ಕಥಾ ರೂಪಕ, ಕಲಾರಸಿಕರಿಗೆ ಹೊಸ ವಿಶಿಷ್ಟ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.
ಸಾಹಿತ್ಯ: ಶತಾವಧಾನಿ ಡಾ. ಆರ್. ಗಣೇಶ್
ಸಂಗೀತ: ಪ್ರವೀಣ್ ಡಿ. ರಾವ್
ಕಲಾತ್ಮಕ ನಿರ್ದೇಶನ ಮತ್ತು ನೃತ್ಯ ಸಂಯೋಜನೆ: ನಿರುಪಮ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ
ವೇಷಭೂಷಣ ವಿನ್ಯಾಸ: ಟಿ.ಡಿ. ರಾಜೇಂದ್ರ
ಕಲಾ ನಿರ್ದೇಶನ ಮತ್ತು ದೃಶ್ಯಗಳು: ವಿನೋದ್ ಗೌಡ
ಬೆಳಕಿನ ವಿನ್ಯಾಸ: ಅಜಯ್ ವಿಜೇಂದ್ರ
ನಿರ್ಮಾಣ: ಅಭಿನವ ನೃತ್ಯ ಕಂಪನಿ, ಬೆಂಗಳೂರು
Tickets for the show are available on Bookmyshow:
https://in.bookmyshow.com/plays/rama-katha-vismaya/ET00435251
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ