ಹಿಮಾಲಯನ್ ಯೋಗಿ ಅಘೋರಿ ಚಿದಂಬರ್ ಅವರಿಗೆ ಕರ್ನಾಟಕ ಅಚೀವರ್ಸ್ ಅವಾರ್ಡ್

Upayuktha
0




ದಾವಣಗೆರೆ:  ಆಧ್ಯಾತ್ಮಿಕತೆ ಮತ್ತು ಚೈತನ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ  ಹಿಮಾಲಯನ್ ಯೋಗಿ ಅಘೋರಿ ಚಿದಂಬರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ಅಚೀವರ್ಸ್ ಅವಾರ್ಡ್ ಅನ್ನು ಚಿತ್ರ ಸಂತೆ ಆಯೋಜಿಸಿದ ಭವ್ಯ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಮಹಾವತಾರ್ ಬಾಬಾಜಿ ಮಾರ್ಗ ದರ್ಶನದಲ್ಲಿ ಸ್ಥಾಪಿತವಾದ ಚಂಡಿಕಾಶ್ರಮದ ಮೂಲಕ ಯೋಗಿ ಚಿದಂಬರ್ ಅವರು ನಿರಂತರ ಯೋಗ ಸಾಧನೆ, ಧ್ಯಾನ ಶಿಬಿರಗಳು, ಉಚಿತ ಚಿಕಿತ್ಸಾ ಶಿಬಿರಗಳು,  ಕಾಸ್ಮಿಕ್ ಹೀಲಿಂಗ್ ಥೆರಪಿಯ ಮೂಲಕ ನೂರಾರು ಜನರಿಗೆ ಶಾರೀರಿಕ,‌ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಒದಗಿಸಿದ್ದಾರೆ.


ಓಂ ಚಂಡಿಕಾ ಸೇವಾ ಟ್ರಸ್ಟ್  ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನತೆಗೆ ದೀರ್ಘಕಾಲೀನ ಕಾಯಿಲೆಗಳು, ಡಯಾಬಿಟಿಸ್, ಮಾನಸಿಕ ಒತ್ತಡ ಇತ್ಯಾದಿಗಳ ನಿವಾರಣೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಸಿನಿಮಾ ನಟಿ ಹರ್ಷಿಕ ಪೂಣಚ್ಚ ಪ್ರಶಸ್ತಿ ಪ್ರದಾನ ಮಾಡಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
To Top