ವೇದ ಮಂತ್ರ ಪಠಣದಿಂದ ದೇಹ ಮತ್ತು ಆತ್ಮದ ಶುದ್ಧೀಕರಣ: ಕೃಷ್ಣಪ್ರಸಾದ್ ಅಡಿಗ

Upayuktha
0


ಮಂಗಳೂರು: ವೇದ ಮಂತ್ರಗಳು ದೈವಿಕ ಶಕ್ತಿಯಿಂದ ತುಂಬಿರುವ ಪ್ರಾಚೀನ ಮಂತ್ರಗಳಾಗಿದ್ದು ಮನಸ್ಸು ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುವ ಶಕ್ತಿಯನ್ನು ಹೊಂದಿದೆ ಎಂದು ಕೂಟ ಮಹಾಜಗತ್ತು (ರಿ) ಸಾಲಿಗ್ರಾಮ ಇದರ ಸಂಘಟನಾ ಕಾರ್ಯದರ್ಶಿ ಮಧೂರು ಕೃಷ್ಣಪ್ರಸಾದ್ ಅಡಿಗ ನುಡಿದರು.


ಅವರು ಕೂಟ ಮಹಾ ಜಗತ್ತು ಮಂಗಳೂರು ಅಂಗಸಂಸ್ಥೆಯ ವತಿಯಿಂದ ಶ್ರೀ ಗುರು ನರಸಿಂಹ ಸಭಾಭವನ ಪಾಂಡೇಶ್ವರ ಇಲ್ಲಿ ಆಯೋಜಿಸಲಾದ 25 ನೇ ವರ್ಷದ 20 ದಿನಗಳ ವಸಂತ ವೇದ ಪಾಠ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಬ್ರಾಹ್ಮಣರಾದವರು ತಮ್ಮ ದೈನಂದಿನ ಕಾರ್ಯಗಳ ಜೊತೆ ಜೊತೆಗೆ ನಿತ್ಯ ಅನುಷ್ಠಾನ ಸಂಧ್ಯಾವಂದನಾದಿ ಅಗ್ನಿ ಕಾರ್ಯಗಳನ್ನು ಮಾಡಿಕೊಂಡು ಬಂದಾಗ ಆತ್ಮಶಕ್ತಿ ಜಾಗೃತವಾಗುತ್ತದೆ. ಇದರಿಂದ ಮಕ್ಕಳ ಓದುವಿನಲ್ಲೂ ಏಕಾಗ್ರತೆ ಬರಲು ಸಾಧ್ಯ ಇಲ್ಲಿ ಹೇಳಿಕೊಟ್ಟ ಜಪ ಸೂಕ್ತ ಗಳನ್ನು ನಿತ್ಯವೂ ಪಠಣ ಮಾಡಿ ನಮ್ಮ ಪರಂಪರೆಯನ್ನು ಉಳಿಸಿ ಎಂದು ಜ್ಯೋತಿಷಿ ಶ್ರೀರಂಗ ಐತಾಳ್ ಕದ್ರಿ ಇವರು ಶುಭ ಹಾರೈಸಿದರು.


ವೇದ ಗುರುಗಳಾದ ವಿದ್ವಾನ್ ಶ್ರೀಕರ ಭಟ್ ಮತ್ತು ವಿದ್ವಾನ್ ಕಾರುಣ್ಯ ಶ್ರೀನಿಧಿ ಇವರುಗಳಿಗೆ ಮಕ್ಕಳು ಗುರು ನಮನ ಸಲ್ಲಿಸಿದರು. ದೈಹಿಕ ಅಡೆತಡೆಗಳಿಂದ ದೈವಿಕ ಶಕ್ತಿಯ ಅನುಗ್ರಹ ಪಡೆಯಲು ಉಪಯುಕ್ತವಾದ ಶಕ್ತಿಯೇ ಮಂತ್ರ ಎಂದು ಕರೆಯುತ್ತೇವೆ ಎಂದು ಅಧ್ಯಕ್ಷತೆ ವಹಿಸಿದ್ದ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ನುಡಿದರು.


ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ನಿರೂಪಿಸಿ ಸ್ವಾಗತಿಸಿದರು. ಉಪಾಧ್ಯಕ್ಷ  ಪ್ರಭಾಕರ ಐತಾಳ್, ಕೋಶಾಧಿಕಾರಿ ಪದ್ಮನಾಭ ಮಯ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಕೂಟವಾಣಿ ಪತ್ರಿಕೆಯ ಅಡ್ಡೂರು ಕೃಷ್ಣ ರಾವ್, ಮ್ಯಾನೇಜರ್ ಶಿವರಾಮ ರಾವ್, ಸಿವಿಲ್ ಇಂಜಿನಿಯರ್ ರಂಗನಾಥ ಐತಾಳ್, ಸಿ ಎ. ಚಂದ್ರಮೋಹನ್, ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಭಾ ಎಸ್ ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ, ಜೊತೆ ಕಾರ್ಯದರ್ಶಿ ಅನುಪಮ, ಕೋಶಾಧಿಕಾರಿ ಗೌರಿ ಹೊಳ್ಳ, ಹಿರಿಯರಾದ ರಘುರಾಮ ರಾವ್, ಶಿವರಾಮಯ್ಯ, ಚಂದ್ರಶೇಖರ ಮಯ್ಯ ಮೊದಲಾದವರು ಉಪಸ್ಥಿತರಿದ್ದರು. ನಗರದ ಸುಮಾರು 27 ಜನ ವಟುಗಳು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top