ಮಡಿಕೇರಿಯಲ್ಲಿ ನೂತನ ಮುಳಿಯ ಸಿಲ್ವರಿಯ ಉದ್ಘಾಟನೆ

Upayuktha
0


  

ಪುತ್ತೂರು: ಮಡಿಕೇರಿಯ ಮುಳಿಯ ಗೋಲ್ಡನ್ ಅಂಡ್ ಡೈಮಂಡ್ ಇದರ ನೂತನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವಿಸ್ಕೖತ ಮಳಿಗೆಯಾದ ಸಿಲ್ವರಿಯಾವನ್ನು ಇಂದು ಖ್ಯಾತ ನಟ ರಮೇಶ್ ಅರವಿಂದ್  ಉದ್ಘಾಟಿಸಿದರು. ಬಳಿಕ ಮಾತನಾಡಿ, ತಾನಿಂದು ಬ್ರಹ್ಮಗಿರಿ ತಪ್ಪಲಿನ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಆ ಬಳಿಕ ಕಾವೇರಿ ತೀರ್ಥವನ್ನು ಮಡಿಕೇರಿಯ ಮುಳಿಯ ಸಂಸ್ಥೆಗೆ ತಂದು ವಿಧ್ಯುಕ್ತವಾಗಿ ಕಾವೇರಿ ತೀರ್ಥವನ್ನು ಮಳಿಗೆಗೆ ಪ್ರೋಕ್ಷಣೆ ಮಾಡಿದೆ. ನಿಜಕ್ಕೂ ಇದೊಂದು ಅಪೂರ್ವ ಅನುಭವ ಎಂದು ಬಣ್ಣಿಸಿದರು. ಉದ್ಘಾಟನಾ ಕಾರ್ಯಕ್ರಮವೊಂದು ಯಾವ ರೀತಿ ವಿನೂತನವಾಗಿರ ಬೇಕೆಂಬುದಕ್ಕೆ ಮುಳಿಯ ಸಂಸ್ಥೆಯ ನೂತನ ಮಳಿಗೆಯ ಉದ್ಘಾಟನೆಯೇ ಸಾಕ್ಷಿ ಎಂದೂ ರಮೇಶ ಹೇಳಿದರು.


ತಾನು ಪ್ರಥಮ ಬಾರಿಗೆ 31 ವರ್ಷಗಳ ಹಿಂದೆ ಚಿತ್ರೀಕರಣಕ್ಕಾಗಿ ಕ್ಯಾಮರ ಎದುರಿಸಿದ್ದೇ ಕೊಡಗಿನ ಹರದೂರು ಗ್ರಾಮದ ಸೇತುವೆಯಲ್ಲಿ ಎಂದು ಮೌನ ಗೀತೆ ಚಿತ್ರೀಕರಣ ಸಂದFವನ್ನೂ ರಮೇಶ್ ಸ್ಮರಿಸಿಕೊಂಡರು. ಪ್ರಕೖತಿ ರಮಣೀಯ ಕೊಡಗಿಗೆ ತಾನು ಅನೇಕ ಸಲ ಬಂದಿದ್ದೇನೆ. ಅನೇಕ ಚಿತ್ರಗಳು ಕೊಡಗಿನಲ್ಲಿ ಚಿತ್ರೀಕರಣವಾಗಿದೆ. ಈ ಭೂಮಿ ತನ್ನ ಪಾಲಿಗೆ ಭಾಗ್ಯದಾಯಕವಾಗಿದೆ ಎಂದೂ ರಮೇಶ್ ಹೇಳಿದರು.


ರಾಜಮಹಾರಾಜರ ಆ ಕಾಲದಿಂದ ಈ ಕಾಲದವರೆಗೂ ಮಾನವನ ಸೌಂದಯ೯ಕ್ಕೆ ಮೆರುಗು ನೀಡಿದ್ದೇ ಆಭರಣಗಳು ಎಂದು ಹೇಳಿದ ರಮೇಶ್ ಅರವಿಂದ್,  ಇದೀಗ ತಾನು ಸೌಂದರ್ಯದ ಪ್ರತೀಕವಾದ ಮುಳಿಯ ಚಿನ್ನಾಭರಣ ಸಂಸ್ಥೆಯ ರಾಯಭಾರಿಯಾಗಿದ್ದು ಹೆಮ್ಮೆ ತಂದಿದೆ ಎಂದೂ ಹೇಳಿದರು.


ಮೊದಲು ನಮ್ಮೊಳಗೆ ಸಂತೋಷವನ್ನು ಕಂಡುಕೊಳ್ಳಬೇಕು. ಆಗ ಮನಸ್ಸಿನ ಸಂಭ್ರಮ ಇಮ್ಮಡಿಗೊಳ್ಳುತ್ತದೆ. ಇದನ್ನೇ ಮುಳಿಯ ಸಂಸ್ಥೆಯು ಸಂತೋಷಕ್ಕಾಗಿ ಮುಳಿಯಕ್ಕೆ ಬನ್ನಿ ಎಂಬ ಧೇಯ ವಾಕ್ಯದೊಂದಿಗೆ ಪ್ರಸ್ತುತಪಡಿಸಿದೆ ಎಂದೂ ರಮೇಶ್ ಅರವಿಂದ್ ಹೇಳಿದರು.


ಮುಳಿಯ ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಮುಳಿಯ ಸಂಸ್ಥೆಯು ಚಿನ್ನಾಭರಣಗಳ ತಯಾರಿಕೆಯಲ್ಲಿ 81 ವಷ೯ಗಳನ್ನು ಪೂರೈಸಿದೆ. ಈ ಸುಧೀರ್ಘ ಹಾದಿಯಲ್ಲಿ ಸದಾ ಗ್ರಾಹಕರ ವಿಶ್ವಾಸವನ್ನು ತನ್ನದಾಗಿಸಿಕೊಂಡಿದೆ. ಹಾಗೆಯೇ ಹಲವು ಹೊಸತನಗಳನ್ನು ಪ್ರಸ್ತುತ ಅಡಿಸುತ್ತದೆ ಎಂದರು.


ಬಾರತದಲ್ಲಿಯೇ ಮೊದಲ ಬಾರಿಗೆ ಮುಳಿಯ ಸಂಸ್ಥೆಯಲ್ಲಿ ಗ್ರಾಹಕರ ಎದುರಲ್ಲೇ ಚಿನ್ನ, ವಜ್ರ ಮತ್ತು ಬೆಳ್ಳಿಯ ನಿಖರತೆ ಪತ್ತೆ ಹಚ್ಚುವ ಯಂತ್ರವನ್ನು ಸ್ಥಾಪಿಸಲಾಗಿದೆ ಎಂದು ಕೇಶವ ಪ್ರಸಾದ್ ಹೇಳಿದರು. ಪ್ರತೀ ಬ್ರಾಂಡ್‌ಗೆ ಒಂದು ವ್ಯಕ್ತಿತ್ವ ಇದೆ. ಅಂಥ ವ್ಯಕ್ತಿತ್ವಕ್ಕೆ ನಿಕಟವಾಗಿರುವ ವ್ಯಕ್ತಿಯೇ ಆಯಾ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ ಎಂದು ರಮೇಶ್ ಅರವಿಂದ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ ಕಾರಣ ವಿವರಿಸಿದರು.


ಮುಳಿಯ ಸಂಸ್ಥೆಯ ಮಾರುಕಟ್ಟೆ ಸಲಹೆಗಾರ ವೇಣು ಶರ್ಮ ಮಾಹಿತಿ ನೀಡಿ, ಮುಳಿಯ ಸಂಸ್ಥೆಯು ಚಿನ್ನಾಭರಣಗಳ ವಹಿವಾಟನ್ನು ಕೇವಲ ವ್ಯಾಪಾರಕ್ಕಾಗಿ ಮಾತ್ರ ಪರಿಗಣಿಸದೇ ಅದನ್ನು ಸಾಮಾಜಿಕ ಬದ್ದತೆಯಿಂದಲೂ ಕಾಣುತ್ತಿದೆ ಎಂದು ಹೇಳಿದರು.


ಗುರುಪ್ರಿಯ ನಾಯಕ್ ಪ್ರಾಥಿ೯ಸಿ  ಮಡಿಕೇರಿ ಶಾಖಾ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ ಸ್ವಾಗತಿಸಿ, ಕೖಷ್ಣವೇಣಿ ಮುಳಿಯ ವಂದಿಸಿದರು. ಬಿಗ್ ಬಾಸ್ ರಿಯಾಲಿಟಿ ಶೋ ಹಿನ್ನೆಲೆ ಧ್ವನಿ ನೀಡಿರುವ ಬಡೆಕ್ಕಿಲ ಪ್ರದೀಪ್, ಮುಳಿಯ ಸಂಸ್ಥೆಯ ವ್ಯವಸ್ಥಾಪಕ ನಿದೇ೯ಶಕ ಕೖಷ್ಣ ನಾರಾಯಣ ಮುಳಿಯ, ಅಶ್ವಿನಿ ಮುಳಿಯ, ಆದ್ಯ ಮುಂತಾದವರು ಉಪಸ್ಥಿತರಿದ್ದರು. ರಮೇಶ್ ಅರವಿಂದ್ ಅವರನ್ನು ತೆರೆದ ವಾಹನದಲ್ಲಿ ಮಧ್ಯಗಳ ಸಮೇತ ಬರಮಾಡಿ ಕೊಳ್ಳಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top