ಮಂಗಳೂರು: ಶ್ರೀ ಪೇಜಾವರ ಅಧೋಕ್ಷಜ ಮಠದ ವತಿಯಿಂದ ರಾಮೋತ್ಸವದ ಅಂಗವಾಗಿ ಭಕ್ತಿ ರಥ ಯಾತ್ರೆಯು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು ಭಕ್ತಿ ರಥಯಾತ್ರೆಯನ್ನು ಇಂದು (ಮಾ.31-ಸೋಮವಾರ) ಮಧ್ಯಾಹ್ನ ಉರ್ವ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ವಾದ್ಯಗೋಷ್ಠಿಯೊಂದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಡಾ. ಎಂ ಬಿ ಪುರಾಣಿಕ್, ಉರ್ವ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಸುರೇಂದ್ರ ರಾವ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ H. K ಪುರುಷೋತ್ತಮ್, ಪ್ರಮುಖರಾದ ಸುಧಾಕರ್ ರಾವ್ ಪೇಜಾವರ, ಶ್ರೀ ಮಂಗಳಾದೇವಿ ದೇವಸ್ಥಾನದ ಅಧ್ಯಕ್ಷ ಅರುಣ್ ಐತಾಳ್, ವಿಹಿಂಪ ಪ್ರಮುಖರಾದ ಶಿವಾನಂದ್ ಮೆಂಡನ್, ಪುನೀತ್, ರವಿ ಅಸೈಗೊಳಿ, ಮನೋಹರ್ ಸುವರ್ಣ, ಗುರುಪ್ರಸಾದ್ ಕಡಂಬಾರ್, ವಸಂತ್ ಶೇಟ್, ಹರೀಶ್ ಕುಮಾರ್ ಶೇಟ್, ರಾಮಕೃಷ್ಣ ರಾವ್ ಕದ್ರಿ, ಗಣೇಶ್ ಹೆಬ್ಬಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ