ಮಲಬಾರ್ ಚಾರಿಟಬಲ್ ಟ್ರಸ್ಟ್ ನ ಕಾರ್ಯವೈಖರಿ ಶ್ಲಾಘಿಸಿದ ಮೇಯರ್ ಮುಲ್ಲಂಗಿ ನಂದೀಶ್
ಬಳ್ಳಾರಿ : ಭಾರತದ ಮುಂಚೂಣಿಯಲ್ಲಿರುವ ವ್ಯವಹಾರಿಕ ಸಮೂಹ ಸಂಸ್ಥೆ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ಪೋಷಕ ಸಂಸ್ಥೆಯಾಗಿರುವ ಮಲಬಾರ್ ಗ್ರೂಪ್ ಕರ್ನಾಟಕದ ಬಳ್ಳಾರಿಯ ಶೋರೂಮಿನಲ್ಲಿ ಅರ್ಹ ವಿದ್ಯಾರ್ಧಿನಿಯರಿಗೆ ವಿದ್ಯಾರ್ಥಿವೇತನವನ್ನು ವಿತರಿಸುವ ಕಾರ್ಯಕ್ರಮವನ್ನು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ಮುಲ್ಲಂಗಿ ನಂದೀಶ್ ಅವರು ಉದ್ಘಾಟಿಸಿದರು.
ಆನಂತರ ಅವರು ಮಾತನಾಡುತ್ತಾ, ಮಲಬಾರ್ ಚಾರಿಟೇಬಲ್ ಟ್ರಸ್ಟ್ನಿಂದ ಶಿಕ್ಷಣ ಸಬಲೀಕರಣ, ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಬಳ್ಳಾರಿಯ 105 ವಿದ್ಯಾರ್ಥಿನಿಯರಿಗೆ 8.98 ಲಕ್ಷ ರೂ ವಿದ್ಯಾರ್ಥಿ ವೇತನ ನೀಡುತ್ತಿರುವುದು ಅತ್ಯಂತ ಅಭಿನಂದನೀಯ ಕೆಲಸ.. ಮುಂದಿನ ದಿನಗಳಲ್ಲಿ ಈ ಟ್ರಸ್ಟ್ ನಿಂದ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳು ಆಗಬೇಕು ಎಂದರು.
ಮಲಬಾರ್ ಕಂಪನಿ ಅತ್ಯಂತ ಜನಪ್ರಿಯ ಬಂಗಾರದ ಆಭರಣಗಳು ಮತ್ತು ವಜ್ರದ ಆಭರಣಗಳ ಕಂಪನಿಯಾಗಿದ್ದು, ತನ್ನ ಜನಪ್ರೀಯತೆ ಜೊತೆಗೆ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಕಳೆದ 26 ವರ್ಷದಲ್ಲಿ ನೂರಾರು ಶಾಖೆಗಳನ್ನು ದೇಶದಾದ್ಯಂತ ಸ್ಥಾಪಿಸಿರುವ ಕಂಪನಿ ತನ್ನ ಚಾರಿಟೇಬಲ್ ಟ್ರಸ್ಟ್ನ ಸಿಎಸ್ಆರ್ ಅನುದಾನದಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ತೋರಿದೆ ಎಂದರು.
ಬಳ್ಳಾರಿಯ ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷರಾದ ಮೆಹತಾಬ್ ಅವರು ಮಾತನಾಡುತ್ತಾ ಮಲಬಾರ್ ಗೋಲ್ಡ್ ತನ್ನ ಕಂಪನಿಯ ಲಾಭಾಂಶದಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ, ಸಾರ್ವಜನಿಕರಿಗೆ ವಸತಿ ಯೋಜನೆ, ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ, ಊಟದ ವ್ಯವಸ್ಥೆ ಸೇರಿದಂತೆ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಂಪನಿ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ನ ರೀಜನಲ್ ಸಿ ಎಸ್ ಆರ್ ಇಂಚಾರ್ಜ್ ಹೈದರ್ ಅವರು ಮಾತನಾಡುತ್ತಾ, ಆರಂಭದಿಂದಲೂ ಮಲಬಾರ್ ಗ್ರೂಪ್ ತನ್ನ ಸಾಮಾಜಿಕ ಕಲ್ಯಾಣ ಚಟುವಟಿಕೆಗಳ ಮೂಲಕ ಸಮಗ್ರ ಬೆಳವಣಿಗೆಗೆ ಪೂರಕವಾದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. 1999 ರಲ್ಲಿ ಮಲಬಾರ್ ಚಾರಿಟೆಬಲ್ ಟ್ರಸ್ಟ್ (ಎಂಸಿಟಿ) ಅನ್ನು ರಚನೆ ಮಾಡಲಾಯಿತು.
ಇದರ ಮೂಲಕ ಸಮಾಜ ಮುಖಿ ಕಾರ್ಯಗಳನ್ನು ಮುಂದುವರಿಸುವುದು ಮತ್ತು ವಿಸ್ತರಣೆ ಮಾಡುವ ಕಾರ್ಯಗಳನ್ನು ನಡೆಸಲಾಗುತ್ತಿದೆ. ಸಮೂಹ ಸಂಸ್ಥೆಯು ತನ್ನ ವಾರ್ಷಿಕ ಲಾಭದ ಶೇ.5 ರಷ್ಟು ಭಾಗವನ್ನು ಶಿಕ್ಷಣ, ಆರೋಗ್ಯ ರಕ್ಷಣೆ, ಪರಿಸರ ಸುಸ್ಥಿರತೆ ಮತ್ತು ಬಡತನ ನಿರ್ಮೂಲನೆಯನ್ನು ಒಳಗೊಂಡ ಸಿಎಸ್ಆರ್ ಉಪಕ್ರಮಗಳಿಗೆ ಮೀಸಲಿಡುತ್ತಿದೆ. ಇದು ದುರ್ಬಲ ವರ್ಗದ ಸಮುದಾಯಗಳ ಸಬಲೀಕರಣದ ಉನ್ನತಿಗೆ ಸಹಕಾರಿಯಾಗುತ್ತಿದೆ.
2007 ರಲ್ಲಿ ಆರಂಭವಾದ ಮಲಬಾರ್ ರಾಷ್ಟ್ರೀಯ ವಿದ್ಯಾರ್ಥಿವೇತನ ಕಾರ್ಯಕ್ರಮವು ಅದರ ಸಿಎಸ್ಆರ್ ಚೌಕಟ್ಟಿನಡಿಯಲ್ಲಿ ಒಂದು ಅತ್ಯಂತ ಪ್ರಮುಖವಾದ ಉಪಕ್ರಮವಾಗಿದೆ. ಇಲ್ಲಿವರೆಗೆ ಈ ಕಾರ್ಯಕ್ರಮವನ್ನು ಬೆಂಬಲಿಸುವ ನಿಟ್ಟಿನಲ್ಲಿ 60 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದ್ದು, ಭಾರತದಾದ್ಯಂತ 95.000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲಾಗಿದೆ ಮತ್ತು ಕರ್ನಾಟಕ ರಾಜ್ಯದ 26.066 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ 16.82 ಕೋಟಿ ರೂಪಾಯಿಗಳ ನೆರವನ್ನು ನೀಡಲಾಗಿದೆ.
ವಿದ್ಯಾರ್ಥಿನಿಯರ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಮೂಲಕ ಮಲಬಾರ್ ಗ್ರೂಪ್ ವ್ಯಕ್ತಿಗಳನ್ನು ಮಾತ್ರವಲ್ಲದೇ ಇಡೀ ಸಮುದಾಯಗಳ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಭವಿಷ್ಯದ ಪೀಳಿಗೆಗಳು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಾಧನಗಳೊಂದಿಗೆ ಸಜ್ಜುಗೊಂಡಿವೆ ಎಂಬುದನ್ನು ಖಚಿತಪಡಿಸುತ್ತದೆ.
ಕರ್ನಾಟಕದಲ್ಲಿನ 491 ಕಾಲೇಜುಗಳ 5501 ಹೆಣ್ಣು ಮಕ್ಕಳ ವ್ಯಾಸಂಗಕ್ಕೆ ನೆರವಾಗುವ ದೃಷ್ಟಿಯಿಂದ ಒಟ್ಟು 4.74 ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನವನ್ನು ವಿತರಣೆ ಮಾಡಲಾಗುತ್ತಿದೆ ಎಂದರು. ವಿದ್ಯಾರ್ಥಿವೇತನ ಕಾರ್ಯಕ್ರಮವಲ್ಲದೇ, ಮಲಬಾರ್ ಗ್ರೂಪ್ನ ಹಸಿವು ಮುಕ್ತ ಜಗತ್ತು ಯೋಜನೆಯು ದೇಶದಾದ್ಯಂತದ ದುರ್ಬಲ ವರ್ಗದವರಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ.
ಈ ಕಾರ್ಯಕ್ರಮಕ್ಕೆ ಸ್ಥಳೀಯ ಎನ್ಜಿಒಗಳು ಮತ್ತು ಸ್ವಯಂಸೇವಕರ ಪಾಲುದಾರಿಕೆಯನ್ನು ಪಡೆಯಲಾಗುತ್ತಿದೆ. ಈ ಮೂಲಕ ಹಸಿವನ್ನು ಮುಕ್ತಗೊಳಿಸುವುದು ಮತ್ತು ಎಲ್ಲರಿಗೂ ಆಹಾರ ಭದ್ರತೆಯನ್ನು ಒದಗಿಸುವ ಬದ್ಧತೆಯನ್ನು ಈ ಉಪಕ್ರಮ ಹೊಂದಿದೆ. ಪ್ರಸ್ತುತ ದೇಶದ 17 ರಾಜ್ಯಗಳ 81 ನಗರಗಳಲ್ಲಿ ಪ್ರತಿದಿನ 60.000 ಕ್ಕೂ ಅಧಿಕ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಇದರ ಜೊತೆಗೆ ಝಾಂಬಿಯಾ ದೇಶದಲ್ಲಿ ಶಾಲಾ ಮಕ್ಕಳಿಗೆ ಪ್ರತಿದಿನ 10.000 ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತಿದೆ.
ಮಲಬಾರ್ ಗ್ರೂಪ್ ಈ ಕಾರ್ಯಕ್ರಮವನ್ನು ಭಾರತದ 200 ಕೇಂದ್ರಗಳಲ್ಲಿ ಪ್ರತಿದಿನ 1.00.000 ಅಧಿಕ ಜನರಿಗೆ ಊಟವನ್ನು ವಿತರಣೆ ಮಾಡಲು ಕಾರ್ಯಕ್ರಮ ರೂಪಿಸಿದೆ. ಈ ಹಸಿವು ಮುಕ್ತ ಜಗತ್ತು ಯೋಜನೆಯನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಯಾದ ಥನಲ್ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಮಲಬಾರ್ ಗ್ರೂಪ್ ವೃದ್ಧ ಮಹಿಳೆಯರಿಗಾಗಿ ಗ್ರಾಂಡ್ ಮಾ ಹೋಂ ಯೋಜನೆಯನ್ನೂ ಆರಂಭಿಸಿದೆ. ಇಲ್ಲಿ ನಿರ್ಗತಿಕ ಮಹಿಳೆಯರು, ವೃದ್ಧೆಯರಿಗೆ ಸಂಪೂರ್ಣ ಉಚಿತವಾಗಿ ಸುಸಜ್ಜಿತ ಆಶ್ರಯವನ್ನು ನೀಡಲಾಗುತ್ತಿದೆ. ಅವರಿಗೆ ಪೌಷ್ಟಿಕ ಆಹಾರ, ಔಷಧೋಪಚಾರ, ಆರೈಕೆ ಮಾಡಲಾಗುತ್ತಿದೆ. ಪ್ರಸ್ತುತ, ಬೆಂಗಳೂರು ಮತ್ತು ಹೈದ್ರಾಬಾದ್ನಲ್ಲಿ ಈ ಮನೆಗಳು ಕಾರ್ಯನಿರ್ವಹಿಸುತ್ತಿವೆ.
ಇಂತಹ ಮನೆಗಳನ್ನು ಕೇರಳದ ಪ್ರಮುಖ ನಗರಗಳು, ಚೆನ್ನೈ, ಕೋಲ್ಕತ್ತಾ, ದೆಹಲಿ ಮತ್ತು ಮುಂಬೈನಲ್ಲೂ ಆರಂಭಿಸುವ ಉದ್ದೇಶವನ್ನು ಹೊಂದಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಶಿಕ್ಷಣಕ್ಕಾಗಿ ನಾವು 12 ರಾಜ್ಯಗಳಲ್ಲಿ 581 ಮೈಕ್ರೋ-ಲರ್ನಿಂಗ್ ಸೆಂಟರ್ಗಳನ್ನು ಸ್ಥಾಪನೆ ಮಾಡಿದ್ದೇವೆ. ಇದುವರೆಗೆ 25.800 ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದೇವೆ ಎಂದರು.
ಸಂಸ್ಥೆಯ ಸಿಎಸ್ಆರ್ ಉಪಕ್ರಮಗಳು ದುರ್ಬಲ ವರ್ಗದ ಸಮುದಾಯಗಳಿಗೆ ವೈದ್ಯಕೀಯ ನೆರವು, ವಸತಿ ನಿರ್ಮಾಣ ಮತ್ತು ಅಗತ್ಯವಿರುವ ಹೆಣ್ಣು ಮಕ್ಕಳ ವಿವಾಹಕ್ಕೆ ಹಣಕಾಸು ನೆರವು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ನೀಡುವ ಮೂಲಕ ಈ ಸಮುದಾಯಗಳ ಜೀವನ ಮಟ್ಟವನ್ನು ಸುಧಾರಣೆ ಮಾಡುವ ಉದ್ದೇಶವನ್ನು ಹೊಂದಿದೆ. ಇಲ್ಲಿವರೆಗೆ ಮಲಬಾರ್ ಗ್ರೂಪ್ ಇಂತಹ ಅನೇಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳಿಗೆ 282.29 ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಿದೆ. ಈ ಮೂಲಕ ಸುಸ್ಥಿರ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದರು.
ಶಿಕ್ಷಣ ಮತ್ತು ಹಸಿವು ಸಮಸ್ಯೆಗಳಿಗೆ ಪರಿಹಾರದಂತಹ ಪ್ರಭಾವಶಾಲಿ ಉಪಕ್ರಮಗಳ ಮೇಲೆ ಮಲಬಾರ್ ಗ್ರೂಪ್ನ ನಿರಂತರ ಗಮನವು ಸಮುದಾಯಗಳು ಸಬಲೀಕರಣಗೊಂಡಾಗ ಮತ್ತು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಬೆಂಬಲಿಸಿದಾಗ ಮಾತ್ರ ಸುಸ್ಥಿತ ಬೆಳವಣಿಗೆ ಸಾಧ್ಯ ಎಂಬುದನ್ನು ಕಂಪನಿಯು ನಂಬುತ್ತದೆ. ಈ ಗ್ರೂಪ್ ತನ್ನ ವ್ಯಾಪಾರ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ವಿಸ್ತರಿಸುವುದನ್ನು ಮುಂದುವರಿಸಿ ಕೊಂಡು ಬರುತ್ತಿರುವುದರಿಂದ ಈ ಸಮರ್ಪಣೆಯು ಭವಿಷ್ಯದ ಎಲ್ಲಾ ಪ್ರಯತ್ನಗಳ ಹೃದಯದಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಶಾಖೆಯ ಮುಖ್ಯಸ್ಥರಾದ ವಿಜಯ್ ಕುಮಾರ್, ನಾಗೇಶ್ವರರಾವ್ ಪ್ರಾಚಾರ್ಯರು,ರೋಸ್ಲೀನ್ ಮೇರಿ ಪ್ರಾಚಾರ್ಯರು, ಆಂಜನೇಯ ಪ್ರಾಚಾರ್ಯರು, ಕಪ್ಪಗಲ್ ಚಂದ್ರಶೇಖರ್ ಆಚಾರಿ, ಎಮ್ಮಿಗನೂರು ಜಡೇಶ್, ನಟರಾಜ್, ಮಲಬಾರ್ ಗೋಲ್ಡ್ ನ ಇತರ ನಿರ್ವಹಣಾ ತಂಡದ ಸದಸ್ಯರು, ಗ್ರಾಹಕರು, ಹಿತೈಷಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ