ಉಡುಪಿ:ಬದುಕಿನ ಆದರ್ಶಗಳನ್ನು ಕಾಣುವ ದೃಷ್ಟಿಯಲ್ಲಿ ಸಾಧನವಾಗಿ ಮಾಡಿಕೊಂಡ ಸಂತರಿಗೆ ಕಾವ್ಯ ಒಲಿಯುವಂತಹದು. ಸಾಧನಾ ಕೇರಿಯ ಸಂತನಿಗೆ ಈ ರೀತಿಯ ಕಾವ್ಯ ಸಿದ್ಧಿ ಒಲಿದಿದೆ. ವರ ಕವಿ ಬೇಂದ್ರೆಯಾದವರು. ಅವರು ಕವಿತೆಗಳಲ್ಲಿ ಕಾಣಿಸುವಂತಹದು ದಾಂಪತ್ಯದ ಪರಿಕಲ್ಪನೆ, ಮಾನವೀಯತೆ, ಸಾಮಾಜಿಕ ಆಶಯಗಳೊಂದಿಗೆ ಇಂದಿಗೂ ಜ್ವಲಂತ ಸಮಸ್ಯೆಯಾಗಿ ಮಾವನ ಕುಲವನ್ನು ಹಿಂಡುತ್ತಿರುವ ಬಡತನ ತೀವ್ರವಾಗಿ ಕಾಣಿಸಿಕೊಂಡಿದೆ.
ಬಡತನದ ಬಗ್ಗೆ ಬೇಂದ್ರೆಯವರಿಗೆ ನಿಜವಾಗಿಯೂ ಗರ್ವವಿತ್ತು. ಶ್ರೀಮಂತಿಕೆಯನ್ನು ಕಿತ್ತುಕೊಳ್ಳಬಹುದು; ಆದರೆ ಬಡತನವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಸ್ವತಃ ಬೇಂದ್ರೆಯವರೇ ಹೇಳಿದ್ದಾರೆ ಎಂಬುದಾಗಿ ಡಾ. ವಿಷ್ಣುಮೂರ್ತಿ ಪ್ರಭು ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಕನ್ನಡ ವಿಭಾಗವು, ಐಕ್ಯೂಎಸಿಯೊಂದಿಗೆ ಆಯೋಜಿಸಿದ ವರಕವಿ ಬೇಂದ್ರೆ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿತ್ಯಾನಂದ ವಿ. ಗಾಂವಕರ್ ಮಾತನಾಡಿ ಬೇಂದ್ರೆಯವರ ಜೀವನಾನುಭವಗಳೇ ಕಾವ್ಯವಾಗಿ ಅರಳಿದೆ. ಅವರು ಸರಳತೆ, ಪದಗಳನ್ನು ಕಟ್ಟುವ ಕ್ರಿಯೆಯಿಂದ ಅವರು ಸಾಹಿತ್ಯ ಲೋಕದಲ್ಲಿ ಶಬ್ದಗಾರುಡಿಗರು ಎನಿಸಿಕೊಂಡಿದ್ದಾರೆ ಎಂಬುದಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳಾದ ರಶ್ಮಿತಾ, ಕೃಷ್ಣ ಜಿ.ಜಿ. ಮತ್ತು ಜ್ಯೋತಿ ಬೇಂದ್ರೆಯವರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋಪಿ ಎಚ್., ಹಾಗೂ ಕನ್ನಡ ವಿಭಾಗ ಉಪನ್ಯಾಸಕರುಗಳಾದ ಅರ್ಚನಾ, ಭಾರತಿ ಹಾಗೂ ಶಾಲಿನಿ ಯು.ಬಿ. ಉಪಸ್ಥಿತರಿದ್ದರು.
ಎಂ.ಎ. ಕನ್ನಡ ವಿದ್ಯಾರ್ಥಿನಿ ಕೀರ್ತನಾ ಶೆಟ್ಟಿ ಬೇಂದ್ರೆ ಗಾಯನ ಮಾಡಿದರು. ಶಿವಾನಿ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಶ್ಮಿತಾ ಶೆಟ್ಟಿ ವಂದಿಸಿದರು. ನೈನಾ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
