ಮಂಗಳೂರು: ಮಂಗಳಾದೇವಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 190ನೇ ಜನ್ಮದಿನೋತ್ಸವವನ್ನು ನಾಳೆ- ಮಾರ್ಚ್ 1ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ನವಯುಗಾಚಾರ್ಯ ಭಗವಾನ್ ಶ್ರೀ ರಾಮಕೃಷ್ಣರು 1836ರಲ್ಲಿ ಪಶ್ಚಿಮ ಬಂಗಾಳದ ಕಾಮಾರಪುಕುರದಲ್ಲಿ ಅವತರಿಸಿದರು. ಅಪಾರ ಆಧ್ಯಾತ್ಮಿಕ ಮುಮುಕ್ಷುಗಳ ಪಾಲಿಗೆ ಕಲ್ಪತರುವಾದರು. ಇಂದಿಗೂ ಭಕ್ತರ ಪಾಲಿನ ಆರಾಧ್ಯದೈವವಾಗಿ ಕಂಗೊಳಿಸುತ್ತಿದ್ದಾರೆ. ಅವತಾರ ವರಿಷ್ಠನಾಗಿ ಧರೆಗಿಳಿದು ಇಂದಿಗೆ 190 ವರುಷ ಸಂದ ಈ ಸುಸಂದರ್ಭದಲ್ಲಿ ಅವರ 190ನೇ ಜನ್ಮದಿನೋತ್ಸವವನ್ನು ಆಚರಿಸಲಾಗುತ್ತಿದೆ.
ಬೆಳಗ್ಗೆ 8ರಿಂದ ಆರಂಭವಾಗಿ ಸಂಜೆ 6:30ರ ವರೆಗೂ ನಡೆಯುವ ಕಾರ್ಯಕ್ರಮಗಳಲ್ಲಿ ವಿಶೇಷ ಪೂಜೆ, ಭಜನೆಗಳು, ಹೋಮ, ಉಪನ್ಯಾಸ, ಭಕ್ತಿಗೀತೆಗಳು, ಸಂಕೀರ್ತನೆ, ಭಕ್ತಿಪ್ರಧಾನ ಬೆಂಗಾಳಿ ಚಲನಚಿತ್ರ ಪ್ರದರ್ಶನ ಇರಲಿದೆ.
ಈ ಪವಿತ್ರ ಸಮಾರಂಭದಲ್ಲಿ ಆಸ್ತಿಕ ಬಂಧುಗಳು ಕುಟುಂಬ ಸಮೇತ ಭಾಗವಹಿಸಿ, ಶ್ರೀರಾಮಕೃಷ್ಣರ ಆಶೀರ್ವಾದ ಪಡೆಯುವಂತೆ ಮಠದ ಪ್ರಕಟಣೆ ಆಹ್ವಾನ ನೀಡಿದೆ.
ಈ ಸಂದರ್ಭದಲ್ಲಿ ಭಗವಾನ್ ಶ್ರೀ ರಾಮಕೃಷ್ಣರ ಜೀವನದ ಮೇಲೆ ಆಧಾರಿತ ಭಕ್ತಿಪ್ರಧಾನ ಬೆಂಗಾಳಿ ಚಲನಚಿತ್ರ ಪ್ರದರ್ಶನವೂ ಇರಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ