ರೋಹಿಣಿ ಯಾದವಾಡ ಅವರಿಗೆ ರಾಜ್ಯಮಟ್ಟದ "ಅಕ್ಕ" ಪ್ರಶಸ್ತಿ

Upayuktha
0


ಅಥಣಿ: ಅಥಣಿ ವಿದ್ಯಾವರ್ಧಕ ಸಂಸ್ಥೆ ಅಥಣಿಯ ಬಸಲಿಂಗಮ್ಮ ಜಿ ಹಂಜಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕಿ ರೋಹಿಣಿ ಯಾದವಾಡ ಅವರಿಗೆ ಬೆಂಗಳೂರಿನ ಪ್ರತಿಷ್ಠಿತ ಅಕ್ಕನ ಮನೆ ಪ್ರತಿಷ್ಠಾನ ಕೊಡಮಾಡುತ್ತಿರುವ 'ಅಕ್ಕ ರಾಜ್ಯ ಪ್ರಶಸ್ತಿ-2025" ಗೆ ಆಯ್ಕೆಯಾಗಿದ್ದಾರೆ. ಬರುವ ಮಾರ್ಚ್ 7 ರಂದು ಬೆಂಗಳೂರಿನಲ್ಲಿ ನಡೆಯಲಿರುವ "ಸಂಸ್ಕೃತಿ ಸಂಗಮ" ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 


ಬೆಂಗಳೂರಿನ ಅಕ್ಕನ ಮನೆ ಪ್ರತಿಷ್ಠಾನವು ವಿವೇಕದಿಂದ ವಿಕಾಸದೆಡೆಗೆ.... ಎಂಬ ಘೋಷವಾಕ್ಯದಡಿ ಕಳೆದ 15 ವರುಷಗಳಿಂದ ಕನ್ನಡ ನೆಲ, ಜಲ, ಭಾಷೆಗಾಗಿ ಶ್ರಮಿಸುತ್ತಿದೆ. ಈ ಬಾರಿ ಜಾನಪದ ಉತ್ಸವ ಹಾಗೂ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕನ್ನಡ ಬೋಧಿಸುತ್ತಿರುವ 50 ಜನ ಶಿಕ್ಷಕರನ್ನು ಆಯ್ಕೆ ಗೌರವಿಸುತ್ತಿದೆ. ಅವರಲ್ಲಿ ರೋಹಿಣಿ ಯಾದವಾಡ ಅವರ ಕನ್ನಡ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕ್ಕನಮನೆ ಪ್ರತಿಷ್ಠಾನದ ಅಧ್ಯಕ್ಷೆ ಹೇಮಲತಾ ಸಿ.ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ರೋಹಿಣಿಯವರು ಮೂಲತಃ ಬೆಳಗಾವಿ ಜಿಲ್ಲೆ ಅಥಣಿಯವರು. ಕಳೆದ 26 ವರುಷಗಳಿಂದ ಪ್ರತಿಷ್ಠಿತ ಅಥಣಿ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಅಧ್ಯಯನ, ಅಧ್ಯಾಪನ, ಸಾಹಿತ್ಯ ರಚನೆ, ಸಾಂಸ್ಕೃತಿಕ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಶಿಕ್ಷಕಿ ವೃತ್ತಿಯೊಂದಿಗೆ ಕವಯತ್ರಿ, ಅಂಕಣಕಾರ್ತಿ, ವಿಮರ್ಶಕಿಯಾಗಿರುವ  ಇವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ, ಮಾಧ್ಯಮ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದು 300ಕ್ಕೂ ಹೆಚ್ಚು ಬಿಡಿಲೇಖನಗಳು ಪ್ರಕಟಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ದತ್ತಿ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಆಯ್ಕೆ ಸಮಿತಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.


ಅಖಿಲ ಭಾರತ ಕನ್ನಡ ಸಮ್ಮೇಳನ ಮೈಸೂರು ಹಾಗೂ ಕಲಬುರಗಿಯಲ್ಲಿ ನಡೆದ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಂಭ್ರಮದ ಸರ್ವಾಧ್ಯಕ್ಷೆಯ ಶ್ರೇಯಸ್ಸು ಇವರದ್ದು. ವಿದ್ಯಾರ್ಥಿಗಳಿಗೆ ಹಾಗೂ ಯುವಜನಾಂಗಕ್ಕೆ ಕನ್ನಡ ಸಾಹಿತ್ಯ ರಚನೆಯ ಮಾರ್ಗದರ್ಶನ ಮಾಡುತ್ತ ಪ್ರೋತ್ಸಾಹ ನೀಡುತ್ತಿದ್ದಾರೆ.  


ಇವರ ವಿವಿಧ ಕ್ಷೇತ್ರದ ಸಾಧನೆಗೆ ಹಲವಾರು ಪ್ರಶಸ್ತಿ ಗೌರವ ಸಂದಿದ್ದು, ಸಮಾಜಸೇವೆಗೆ ರಾಜ್ಯ ಸರಕಾರದ "ಯುವ ಪ್ರಶಸ್ತಿ", ರಾಷ್ಟ್ರೀಯ ಬಸವ ಪ್ರತಿಷ್ಠಾನದ "ಕಾಯಕಯೋಗಿ" ಪ್ರಶಸ್ತಿ, ಮಾಧ್ಯಮಸೇವೆಗೆ " ಜಿಲ್ಲಾ ಆದರ್ಶ ಪತ್ರಕರ್ತೆ", ಶೈಕ್ಷಣಿಕ ಸೇವೆಗೆ "ಬೆಸ್ಟ್ ಟೀಚರ್, ಆದರ್ಶ ಗುರುಮಾತೆ, ಅತ್ಯುತ್ತಮ ಶಿಕ್ಷಕಿ, ಶಿಕ್ಷಣ ರತ್ನ ಮೊದಲಾದ ಪ್ರಶಸ್ತಿ, 'ಮಹಿಳಾ ಲೋಕದ ಕಣ್ಮಣಿ', 'ಮಹಿಳಾ ಮನಿಹ ಮಹಿಳಾ ರತ್ನ ' ಬಿರುದುಗಳು ಸಂದಿವೆ. ಇವರ ಕೃತಿಗಳಿಗೆ ರಾಜ್ಯಮಟ್ಟದ ಸರ್ ವಿಶ್ವೇಶ್ವರಯ್ಯ, ಕುವೆಂಪು ಪ್ರಶಸ್ತಿ, ಜಿಲ್ಲಾಮಟ್ಟದಲ್ಲಿ ಆಜೂರೆ ಪ್ರತಿಷ್ಠಾನ ಹಾಗೂ ಬೆಳಗಾವಿ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿಗಳು ಸಂದಿವೆ. ಇಂತಹ ಘನ ವ್ಯಕ್ತಿತ್ವದ ರೋಹಿಣಿಯವರಿಗೆ ಇದೀಗ ರಾಜ್ಯ ಮಟ್ಟದಲ್ಲಿ "ಅಕ್ಕ ರಾಜ್ಯ ಪ್ರಶಸ್ತಿ-2025" ದೊರೆಯುತ್ತಿರುವುದು ಸಂತಸದ ಸಂಗತಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top