ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಕೃತಿ ಮಾಡಿ ನಿಜವಾದ ಅರ್ಥದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸೋಣ !
26 ಜನವರಿ ಈ ದಿನ ಭಾರತದ ಪ್ರಜಾಪ್ರಭುತ್ವ ದಿನ ಅಂದರೆ ಗಣರಾಜ್ಯೋತ್ಸವವಾಗಿದೆ. ಈ ಪ್ರಯುಕ್ತ ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವಂತಹ ಕೃತಿಗಳು ಹಾಗೂ ಆದರ್ಶ ಪ್ರಜಾಪ್ರಭುತ್ವವುಳ್ಳ ರಾಜ್ಯ ಬರುವುದಕ್ಕಾಗಿ ಅವಶ್ಯಕವಿರುವ ಬೇಡಿಕೆಗಳನ್ನು ಈ ಲೇಖನದಲ್ಲಿ ಮಂಡಿಸಲಾಗಿದೆ.
ಈ ರೀತಿಯ ಕೃತಿ ಮಾಡುವುದರಿಂದ ಆದರ್ಶ ಪ್ರಜಾಪ್ರಭುತ್ವದ ರಾಜ್ಯ ಬರುತ್ತದೆ ಹಾಗೂ ಆಗಲೇ ಕ್ರಾಂತಿಕಾರರು ದೇಶಕ್ಕಾಗಿ, ಪರ್ಯಾಯವಾಗಿ ನಮಗಾಗಿ ಮಾಡಿದ ಬಲಿದಾನದ ಋಣವನ್ನು ನಿಜಾರ್ಥದಲ್ಲಿ ತೀರಿಸಬಹುದು.
ಪ್ರಜೆಗಳು ಪ್ರಜೆಗಳ ಕಲ್ಯಾಣಕ್ಕಾಗಿ ನಡೆಸುತ್ತಿರುವ ರಾಜ್ಯವೆಂದರೆ ಪ್ರಜಾಪ್ರಭುತ್ವ, ಅಂದರೆ ಪ್ರಜಾತಂತ್ರ. ಆದರೆ ಮಿತ್ರರೇ, ಇಂದು ನಿಜವಾದ ಅರ್ಥದಲ್ಲಿ ಪ್ರಜೆಗಳ ರಾಜ್ಯವಿದೆಯೇ? ಇಲ್ಲವಲ್ಲ? ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಇಂದಿನ ದಯನೀಯ ಸ್ಥಿತಿಯ ಹಿಂದಿರುವ ಕಾರಣಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ.
‘ರಾಷ್ಟ್ರಾಭಿಮಾನದ ಅಭಾವ’ವೇ ದೇಶದ ಎಲ್ಲ ಸಮಸ್ಯೆಗಳ ಹಿಂದಿನ ಕಾರಣ
ಇಂದು ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ದೇಶದಲ್ಲಿ ಭ್ರಷ್ಟಾಚಾರವು ಕೋಲಾಹಲವೆಬ್ಬಿಸಿದೆ. ದೇಶದ ಗಡಿಗಳು ಕೂಡ ಸುರಕ್ಷಿತವಾಗಿಲ್ಲ. ದೇಶದ ಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮೆಲ್ಲರ ಅಸ್ತಿತ್ವಕ್ಕೂ ಧಕ್ಕೆಯುಂಟಾಗುವುದು. ಇದಕ್ಕಾಗಿ ನಾವು ದೇಶದ ಭಾವೀ ಪ್ರಜೆಗಳು ಎಂಬ ಸಂಬಂಧದಿಂದ ಈ ವಿಷಯದ ಬಗ್ಗೆ ಗಂಭೀರವಾದ ವಿಚಾರ ಮಾಡಿ ಉಪಾಯವನ್ನು ಹುಡುಕಬೇಕಾಗಿದೆ, ಆಗಲೇ ಮುಂಬರುವ ಭಾರತವು ಆದರ್ಶ ಹಾಗೂ ಸುಜಲಾಂ? ಸುಫಲಾಂ ಆಗುತ್ತದೆ.
ನಮ್ಮೆಲ್ಲರಲ್ಲಿರುವ ರಾಷ್ಟ್ರಾಭಿಮಾನದ ಅಭಾವವೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದ. ‘ನಾನು ಮಾಡುವ ಪ್ರತಿಯೊಂದು ಕೃತಿಯನ್ನು ನನ್ನಲ್ಲಿ ಹಾಗೂ ಇತರರಲ್ಲಿ ರಾಷ್ಟ್ರಾಭಿಮಾನ ಜಾಗೃತವಾಗುವಂತೆಯೇ ಮಾಡುವೆನು’ ಎಂದು ನಾವು ಇಂದಿನಿಂದ ನಿರ್ಧರಿಸಬೇಕಾಗಿದೆ.
ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಸಲುವಾಗಿ ಮಾಡಬೇಕಾಗಿರುವ ಕೃತಿಗಳು
1. ಧ್ವಜದ ಅಪಮಾನವನ್ನು ತಡೆಯುವುದು.
2. ಕ್ರಾಂತಿಕಾರರ ಚರಿತ್ರೆಯ ಅಧ್ಯಯನ ಮಾಡಿ ಅವರ ಮೌಲ್ಯಗಳನ್ನು ಕೃತಿಯಲ್ಲಿ ತರುವುದು.
3. ದೇಶಭಕ್ತಿ ಹಾಡುಗಳನ್ನು ಕಂಠಪಾಠ ಮಾಡುವುದು ಹಾಗೂ ಅದನ್ನು ಸಮೂಹದಲ್ಲಿ ಹಾಡುವುದು.
4. ಕ್ರಾಂತಿಕಾರರ ಘೋಷವಾಕ್ಯಗಳನ್ನು ಹಾಗೂ ಅವರ ಚಿತ್ರಗಳನ್ನು ಮನೆಯಲ್ಲಿ ಹಾಕುವುದು.
5. ಯಾವುದಾದರೊಬ್ಬ ಕ್ರಾಂತಿಕಾರರನ್ನು ನಮಗೆ ಆದರ್ಶವಾಗಿ ಆರಿಸುವುದು.
6. ಸ್ನೇಹಿತರ ಜನ್ಮದಿನದಂದು ಕ್ರಾಂತಿಕಾರರ ಚಿತ್ರ ಅಥವಾ ಅವರ ಬಗ್ಗೆ ಮಾಹಿತಿ ನೀಡುವ ಸಣ್ಣ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು.
7. ತಮ್ಮ ಶಾಲೆಗಳಲ್ಲಿ ಸಂಪೂರ್ಣ ‘ವಂದೇ ಮಾತರಂ’ಅನ್ನು ಹೇಳಲು ಆಗ್ರಹ ಮಾಡುವುದು.
8. ರಾಷ್ಟ್ರಗೀತೆಯ ಅಪಮಾನವಾಗುತ್ತಿದ್ದರೆ ಅದನ್ನು ತಡೆಯುವುದು.
9. ಕ್ರಾಂತಿಕಾರರ ಜೀವನದ ಮೇಲಾಧರಿಸಿದ ಚರ್ಚಾಕೂಟಗಳನ್ನು ಆಯೋಜಿಸುವುದು.
10. ಪ್ರತಿಜ್ಞೆಯಂತೆ ನಡೆದುಕೊಳ್ಳುವುದು.
11. ಕ್ರಾಂತಿಕಾರರ ಹಾಗೂ ದೇಶಭಕ್ತರ ಚಿತ್ರಗಳ ಪ್ರದರ್ಶನವನ್ನು ಆಯೋಜಿಸುವುದು.
12. ಕ್ರಾಂತಿಕಾರರ ಚಿತ್ರಗಳಿಗೆ ಬಣ್ಣ ಹಚ್ಚುವ ಸ್ಪರ್ಧೆಯನ್ನು ಆಯೋಜಿಸುವುದು.
13. ದೇಶಭಕ್ತಿಯನ್ನು ಮೂಡಿಸುವಂತಹ ಚಲನಚಿತ್ರ ಹಾಗೂ ಧಾರಾವಾಹಿಗಳನ್ನು ನೋಡುವುದು..
ಮೇಲೆ ನೀಡಿರುವಂತಹ ಪ್ರತಿಯೊಂದು ಅಂಶಗಳನ್ನೂ ನಾವು ಆಚರಿಸಿದಾಗ ಅದು ನಿಜವಾದ ಪ್ರಜಾಪ್ರಭುತ್ವವಾಗಿರುತ್ತದೆ. ನಾವು ಪ್ರತಿಯೊಂದು ಅಂಶಗಳನ್ನು ಕೃತಿಯಲ್ಲಿ ತಂದುಕೊಳ್ಳೋಣ.
- ಮೋಹನ್ ಗೌಡ
ರಾಜ್ಯ ವಕ್ತಾರರು
ಹಿಂದೂ ಜನಜಾಗೃತಿ ಸಮಿತಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ