ಮುದ್ದಣ್ಣನ ಪ್ರಮೋಷನ್- ನಾಟಕ ಪ್ರದರ್ಶನ

Upayuktha
0


ಬೆಂಗಳೂರು: ಕನ್ನಡ ಭವನ ನಯನ ಸಭಾಂಗಣದಲ್ಲಿ ಬುಧವಾರ (ಜ.29) ರಂಗಚಂದಿರ ತಂಡ ಆಯೋಜಿಸಿದ್ದ ರಂಗಕರ್ಮಿ ಟೆಲಿಕಾಂ ದತ್ತಾತ್ರೇಯ ನೆನಪಿನಲ್ಲಿ ಗಾಯನ- ರಂಗ ಗೌರವ- ಮುದ್ದಣ್ಣನ ಪ್ರಮೋಷನ್ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಯಿತು.


ಸಾಹಿತಿಗಳಾದ ಡಾ. ಬೈರಮಂಗಲ ರಾಮೇಗೌಡ. ಹಿರಿಯ ಪತ್ರಕರ್ತರಾದ ರಾಜು ಮಳವಳ್ಳಿ, ಮಾಧ್ಯಮದ ಹಿರಿಯ ಛಾಯಾಗ್ರಾಹಕ ಕೆಎಸ್‌  ಗಣೇಶ್, ಕ್ರೀಡಾಪಟು ಕೆ ಆರ್ ಲಕ್ಷ್ಮಿ ನಾರಾಯಣ್. ಕುಹೂ.. ಕುಹೂ... ಸಂಸ್ಥೆಯ ನಿರ್ದೇಶಕರಾದ ಸುರೇಶ್ ಬಾಬು, ರಂಗ ನಿರ್ದೇಶಕ ವೆಂಕಟಾಚಲ ರವರಿಗೆ ರಂಗ ಗೌರವ ನೀಡಲಾಯಿತು.


ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎಂ ಪ್ರಕಾಶ್ ಮೂರ್ತಿ ಜಿ. ಬಾಬು, ವಿಶ್ವಮಾನವ ಕುವೆಂಪು ಕಲಾನಿಕೇತನ ಸಂಸ್ಥಾಪಕ ಅಧ್ಯಕ್ಷ ಕುವೆಂಪು ಪ್ರಕಾಶ್, ರಾಧಾಕೃಷ್ಣ ಹೆಗಡೆ, ಜಿಪಿಓ ಚಂದ್ರು, ಪ್ರಭಾಕರ್, ಕಲಾವಿದರಾದ ಮುರುಡಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top