ಜನಪ್ರಿಯ ಶಿಕ್ಷಕ ಎಂ.ಬಿ. ಶಂಕರಮೂರ್ತಿ 9ನೇ ವರ್ಷದ ಸಂಸ್ಮರಣೆ
ದಾವಣಗೆರೆ: ಜನಪ್ರಿಯ ಶಿಕ್ಷಕ ಎಂ.ಬಿ. ಶಂಕರಮೂರ್ತಿ ಇವರ 9ನೇ ವರ್ಷದ ಪುಣ್ಯ ಸ್ಮರಣಾರ್ಥ ದಾವಣಗೆರೆಯ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ ವಿಷಯಾಧಾರಿತ ಕಾರ್ಯಾಗಾರ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಜನವರಿ 06 ಮತ್ತು 07 ರಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೌಹಾರ್ದ ಪ್ರಕಾಶನ ಸಂಸ್ಥೆಯ ಎ.ಸಿ. ಶಶಿಕಲಾ ಶಂಕರಮೂರ್ತಿಯವರು ತಿಳಿಸಿದ್ದಾರೆ.
ಮಕ್ಕಳಿಗೆ ಕಾರ್ಯಾಗಾರ ಜನವರಿ 06 ಸೋಮವಾರ ಬೆಳಗ್ಗೆ 10 ಗಂಟೆಗೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಜನವರಿ 07 ರಂದು ಮಂಗಳವಾರ ಮಧ್ಯಾಹ್ನ 2-45ಕ್ಕೆ ಏರ್ಪಡಿಸಲಾಗಿದ್ದು ದಾವಣಗೆರೆಯ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಪ್ರೊ. ವೈ.ಎಂ. ವಿಠಲರಾವ್ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಡಾ. ಜಸ್ಟಿನ್ ಡಿಸೋಜಾ ಶಿವಣ್ಣನವರು ವಹಿಸಲಿದ್ದಾರೆ. ಗೌರವ ಅಧ್ಯಕ್ಷರಾಗಿ ದಾವಣಗೆರೆಯ ಎಂ.ಎA. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ. ಎಂ.ಎ. ಪಟ್ಟಣಶೆಟ್ಟಿ ಅವರು ಉಪಸ್ಥಿತರಿರುತ್ತಾರೆ.
ದೊಡ್ಡಬಳ್ಳಾಪುರದ ವೈಜ್ಞಾನಿಕ ಚಿಂತಕ ಮತ್ತು ಹಿರಿಯ ಸಾಹಿತಿಗಳಾದ ಡಾ. ಹುಲಿಕಲ್ ನಟರಾಜ್ ರವರು "ವಿಜ್ಞಾನವನ್ನು ನಂಬಿ: ಮೌಢ್ಯತೆಗೆ ಬಲಿಯಾಗಬೇಡಿ" ಪವಾಡದ ವಿಚಾರ ಕುರಿತು ವಿಶ್ಲೇಷಣೆ ಪ್ರತ್ಯಕ್ಷತೆಯ ಉಪನ್ಯಾಸ ನೀಡಲಿದ್ದಾರೆ.
ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ. ಎಚ್.ವಿ.ವಾಮದೇವಪ್ಪನವರು ಮತ್ತು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಹೆಚ್.ಕೆ. ಲಿಂಗರಾಜುರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ದಾವಣಗೆರೆ ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸಾಹಿತ್ಯ ಪ್ರಕಾರಗಳ ಬರಹಗಳ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಿದ್ದಾರೆ.
ಸೌಹಾರ್ದ ಪ್ರಕಾಶನದ ವ್ಯಾಟ್ಸಪ್ ಗುಂಪಿನಿಂದ ಮಹಿಳೆಯರಿಗಾಗಿ ನಡೆಸಿದ ಕವಿ ರನ್ನನ ಹಳೆಗನ್ನಡ ಕಾವ್ಯ ಪೂರಕ ಪದಬಂಧ ಹಾಗೂ “ನಮ್ಮ ದೃಶ್ಯಕ್ಕೆ ನಿಮ್ಮ ಕವಿತೆ” ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದ ವನಿತೆಯರಿಗೆ ಪ್ರೋತ್ಸಾಹಕ ಬಹುಮಾನ ವಿತರಣೆ ನಡೆಯಲಿದೆ. ಬೆಂಗಳೂರಿನ ಎಲೆಮರೆಯ ಬಹುಮುಖ ಪ್ರತಿಭಾನ್ವಿತ ರೇಖಾ ಪುರಾಣಿಕ್ ಹಾಗೂ ಸಹೃದಯಿ ಸಾಹಿತ್ಯ, ಸಂಸ್ಕೃತಿಯ ದಾವಣಗೆರೆಯ ಕುಸುಮಾ ಲೋಕೇಶ್ ಹಿತ ನುಡಿಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಜಗಳೂರು ತಾಲೂಕಿನ ಚಿತ್ರಕಲಾ ಶಿಕ್ಷಕ ರಮೇಶ್ ಎಚ್.ಕಟ್ಟಿಮನಿ, ಶಾಮನೂರಿನ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಐ.ಕೆ. ಉಮಾದೇವಿ, ಹಾಸನ ಜಿಲ್ಲೆಯ ಬೇಲೂರಿನ ಶಾಂತಲಾ ಬಾಲಕಿಯರ ಪ್ರೌಢಶಾಲೆ ಹಿಂದಿ ಶಿಕ್ಷಕಿ ಸುನಿತಾ ಜಿ.ಸಿ., ಕಲ್ಬುರ್ಗಿ ಜಿಲ್ಲೆಯ ಮಹಾಗಾಂವ ಸರ್ಕಾರಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಶುಕೂರ್ ಮಿಯಾ ಎಂ ಕಲ್ಮೋಡ್, ಉಡುಪಿ ಜಿಲ್ಲೆ, ಕಾಪು ತಾಲ್ಲೂಕು, ಮಲ್ಲಾರು ಸರ್ಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಗಿರಿಜಾ ನಾಯಕ್, ದಾವಣಗೆರೆ ಜಿಲ್ಲೆಯ ಗಂಗನಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಕವಿತಾ ಎಸ್., ದಾವಣಗೆರೆ ಡೆಂಟಲ್ ಕಾಲೇಜಿನ ಪ್ರಸನ್ನ ಜಿ.ಕೆ. ಮುಂತಾದವರನ್ನು ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಗುರುತಿಸಿ ಸನ್ಮಾನ ಮಾಡಲಾಗುವುದು ಎಂದು ಸೌಹಾರ್ದ ಪ್ರಕಾಶನದ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ.
ಸಾಹಿತ್ಯಿಕ, ಶೈಕ್ಷಣಿಕ ಕಾಳಜಿಯ ಸರ್ವರೂ ಆಗಮಿಸಿ ಈ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಸೌಹಾರ್ದ ಪ್ರಕಾಶನದ ಸರ್ವ ಸದಸ್ಯರು ವಿನಂತಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ