ರಾಷ್ಟ್ರಮಟ್ಟದ ಗೌರವ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಅರ್ಜಿ ಆಹ್ವಾನ

Chandrashekhara Kulamarva
0

 



ದಾವಣಗೆರೆ: ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ  "ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ-2025" ರ ನಿಮಿತ್ಯವಾಗಿ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ಬೆಳಗಾವಿಯಿಂದ ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆಗೆ ಅರ್ಜಿ ಆಹ್ವಾನಿಸಲಾಗಿದೆ.


ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಕನ್ನಡ ನಾಡು ನುಡಿ ಮತ್ತು ಇತಿಹಾಸ ಸೇರಿ ಹಲವು ರಂಗಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಪ್ರತಿಭಾನ್ವಿತ ಸಾಧಕರಿಗೆ ಆಯ್ಕೆ ಪತ್ರವನ್ನು ಪ್ರವೇಶ ಶುಲ್ಕ ಭರಿಸಿದ ದಿನ ಮತ್ತು  ಪ್ರಶಸ್ತಿಯನ್ನು 26 ಜನವರಿ 2025 ರ ರವಿವಾರದಂದು ವರ್ಚುವಲ್ ಸಮಾರಂಭವನ್ನು ಆಯೋಜಿಸಿ ಗೌರವಪೂರ್ವಕವಾಗಿ ವಿತರಿಸಲಾಗುವುದು. 


ಹೆಚ್ಚಿನ ಮಾಹಿತಿಗೆ ವೇದಿಕೆಯ ಅಧ್ಯಕ್ಷ ಕವಿತ್ತ ಕರ್ಮಮಣಿ ಅವರ ವಾಟ್ಸಾಪ್ 9743867298 ನಂಬರ್‌ಗೆ ಸಂಪರ್ಕಿಸುವಂತೆ ವೇದಿಕೆಯ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್ ಶೆಣೈ  ತಿಳಿಸಿದ್ದಾರೆ.


إرسال تعليق

0 تعليقات
إرسال تعليق (0)
To Top