ಬೆಂಗಳೂರು; ಪ್ರೇಕ್ಷಕರ ಮನಸೆಳೆದ ವೀಣಾ ವಾದನ

Upayuktha
0


ಬೆಂಗಳೂರು : ಮಲ್ಲೇಶ್ವರದ ಈಜುಕೊಳದ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳೆದ ಒಂದು ವಾರದಿಂದ ಜರುಗುತ್ತಿರುವ ಶ್ರೀ ಪುರಂದರದಾಸರ ಆರಾಧನಾ ಕಾರ್ಯಕ್ರಮಗಳ ಸರಣಿಯಲ್ಲಿ ರಾಯರಿಗೆ ಪ್ರಿಯವಾದ ವೀಣಾ ವಾದನ ಕಾರ್ಯಕ್ರಮವನ್ನು ಕು|| ಅಹಿಕಾ ನಡೆಸಿಕೊಟ್ಟಳು.


ಕುಮಾರನ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಅಹಿಕಾ (ಕೃತಿಕಾ ಮತ್ತು ನಾಗದೀಪ್ ಅವರ ಪುತ್ರಿ) ಇಷ್ಟು ಚಿಕ್ಕ ವಯಸ್ಸಿಗೆ ಕರ್ನಾಟಕ ಸರ್ಕಾರದಿಂದ ಕೊಡಲ್ಪಡುವ "ಕರ್ನಾಟಕ ಕಲಾಶ್ರೀ" ಪ್ರಶಸ್ತಿ ಪಡೆದಿದ್ದಾಳೆ. ಅಹಿಕಾ ವೀಣಾ ನುಡಿಸುವುದಲ್ಲದೇ ಭರತನಾಟ್ಯ ಮತ್ತು ಹಾಡುಗಾರಿಕೆಯಲ್ಲೂ ಕಾರ್ಯಕ್ರಮ ನೀಡುವುದರೊಂದಿಗೆ ಓದಿನಲ್ಲೂ ಮುಂದಿದ್ದಾಳೆ.


ವೀಣಾ ವಾದನ ಕಾರ್ಯಕ್ರಮವನ್ನು ಮೊದಲಿಗೆ ಗಜವದನ ಬೇಡುವೆ ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಆರಂಭಿಸಿ, ರೋಗಹರನೇ ಕೃಪಾಸಾಗರ, ದಯಮಾಡೋ ರಂಗ, ಗೋವಿಂದ ನಿನ್ನ ನಾಮವೇ ಚಂದ, ನಾರಾಯಣ ನಿನ್ನ ನಾಮದ ಸ್ಮರಣೆಯ, ಪಿಳ್ಳಂಗೋವಿಯ ಚೆಲ್ವ ಕೃಷ್ಣನ, ವೆಂಕಟಾಚಲ ನಿಲಯಂ, ಪ್ರೀಣಯಾಮೋ ವಾಸುದೇವಂ, ವಂದೇ ವಂದ್ಯಮ್, ಪಾಲಯಾಚ್ಯುತ, ಭಾಗ್ಯದ ಲಕ್ಷ್ಮಿ ಬಾರಮ್ಮ, ಶ್ರೀ ವಾದಿರಾಜರ ದಶಾವತಾರ ಸ್ತುತಿಯಾದ ಪ್ರೋಷ್ಟೀಶ ವಿಗ್ರಹ ಹೀಗೆ ಇನ್ನೂ ಹಲವಾರು ಅಪರೂಪದ ಕೃತಿಗಳನ್ನು ನುಡಿಸಿ, ಪ್ರೇಕ್ಷಕರ ಮನ ಗೆದ್ದಳು. 


ಸಹವಾದ್ಯದಲ್ಲಿ ಸೀತಾರಾಮ್ (ಪಿಟೀಲು), ವರದರಾಜ್ (ಮೃದಂಗ) ಸಾಥ್ ನೀಡಿದರು. ವಿಜಯ ವಿಠ್ಠಲ ಭಜನಾ ಮಂಡಳಿಯ ಅಧ್ಯಕ್ಷೆ ರಮಾಮಣಿ ವಂದನಾರ್ಪಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top