ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ದಿನಾಂಕ 03-01-2025 ರಂದು ಎಸ್ ಎಫ್ ಐ ನ 7ನೇ ತಾಲೂಕು ಸಮ್ಮೇಳನವು ಅತ್ಯಂತ ಅದ್ದೂರಿಯಾಗಿ ನೆರವೇರಿತು.
ಬಳ್ಳಾರಿ: ಪಟ್ಟಣದ ನಾನಾ ಶಾಲಾ ಕಾಲೇಜು ಹಾಗೂ ಹಾಸ್ಟೆಲ್ ಘಟಕದ ವಿದ್ಯಾರ್ಥಿ ನಾಯಕರನ್ನು ಒಳಗೊಂಡು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮೌಲ್ಯಗಳ ಬಿತ್ತನೆ ಎಂಬ ವಿಚಾರದೊಂದಿಗೆ ಸಮ್ಮೇಳನವನ್ನು ಆಯೋಜಿಸಿ , ಬಳ್ಳಾರಿ ತಾಲೂಕಿನ ಶೈಕ್ಷಣಿಕ ಸಾಮಾಜಿಕ ಸ್ಥಿತಿಗತಿಗಳನ್ನ ಹಾಗೂ ಭಾರತ ದೇಶದ ಸಾಮಾಜಿಕ ಪರಿಸ್ಥಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಮಹಿಳೆಯರ, ವಿದ್ಯಾರ್ಥಿನಿಯರ ಸಾಮಾಜಿಕ ಸ್ಥಿತಿ ಹಾಗೂ ರೈತರ ಪರಿಸ್ಥಿತಿಯನ್ನು ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನ ಹಾಕುವುದರ ಮೂಲಕ ಉದ್ಘಾಟಿಸಿದ ಬಂಡಾಯ ಸಾಹಿತಿಗಳಾದ ಪಿಆರ್ ವೆಂಕಟೇಶ್ ರವರು ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕವನ್ನು ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಜಯಸೂರ್ಯರವರು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ ಎಫ್ ಐ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಡಾಕ್ಟರ್ ದೊಡ್ಡ ಬಸವರಾಜ್ ಗುಳೇದಾಳ್ ರವರು ಪ್ರಸ್ತುತ ಸಮಾಜದಲ್ಲಿ ಸರ್ಕಾರ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನ ಹಾಸ್ಟಲ್ ಸಮಸ್ಯೆಗಳನ್ನ ಖಾಸಗಿಕರಣವನ್ನ ಕೋಮುವಾದಿಕರಣವನ್ನ ಪ್ರಶ್ನಿಸುತ್ತಿಲ್ಲ ಅದಕ್ಕೆ ಉತ್ತರವನ್ನು ನೀಡುತ್ತಿಲ್ಲ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಐಕ್ಯತೆ ಅತ್ಯವಶ್ಯಕವಾಗಿದೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಸಂಘಟನೆಗಳು ದೊಡ್ಡ ಮಟ್ಟದ ಪ್ರಭಾವವನ್ನು ನೀಡುತ್ತಿವೆ.
ಪದವಿ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಸಮಸ್ಯೆ ಕಾಲೇಜು ಫೀಜ್ ಸಮಸ್ಯೆ ಕಡಿಮೆ ಕಾಲಾವಕಾಶದಲ್ಲಿ ಎಕ್ಸಾಮನ್ನು ಆಯಜಿಸುತ್ತಿರುವಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುವಂತ ಪರಿಸ್ಥಿತಿಯಲ್ಲಿ ವ್ಯವಸ್ಥೆ ನಿರ್ಮಾಣವಾಗಿದೆ ಇವೆಲ್ಲವಕ್ಕೂ ಸಂಘಟನೆಗಳಿಂದ ಪ್ರಶ್ನಿಸುವಂತಾಗಬೇಕು ವಿದ್ಯಾರ್ಥಿಗಳು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ತಾಲೂಕು ಮಟ್ಟದ ಎಸ್ಎಫ್ಐ ನೂತನ ಸಮಿತಿಯನ್ನು ರಚನೆ ಮಾಡಿದ್ದು ತಾಲೂಕು ಅಧ್ಯಕ್ಷರಾಗಿ ಎಂ ರಾಜೇಂದ್ರ ಪ್ರಸಾದ್ ಕಾರ್ಯದರ್ಶಿಯಾಗಿ ವರದರಾಜ್ ಉಪಾಧ್ಯಕ್ಷರಾಗಿ ಅಶೋಕ್ ನಂದಿನಿ ಶಿರೀಶ ಶಿವು ಕಾರ್ಯದರ್ಶಿಯಾಗಿ ಫಾತಿಮಾ ಬೇಗಂ ಕಾವ್ಯ ಕಾವೇರಿ ಅಜಯ್ ರವರು ಸೇರಿದಂತೆ ಇಪ್ಪತ್ತು ಜನರ ತಾಲೂಕು ಸಮಿತಿ ಆಯ್ಕೆಯಾಗಿದೆ ಎಂದು ಘೋಷಿಸಿದರು.
ಬಳ್ಳಾರಿ ಜಿಲ್ಲಾ ಸಂಚಾಲನ ಸಮಿತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ತಿಳಿಸಲು ವಿದ್ಯಾರ್ಥಿಗಳ ಸಹಾಯ ವಾಣಿ ಎಂದು 8150906039 ಎಂಬ ದೂರವಾಣಿ ಸಂಖ್ಯೆ ಹಾಗೂ sfibellary ಎಂಬ ಸಾಮಾಜಿಕ ಜಾಲತಾಣದ ಐಡಿ ಮುಖಾಂತರ ಸಂಪರ್ಕಕ್ಕೆ ಕರೆ ನೀಡಿದರು ಕಾರ್ಯಕ್ರಮದ ವರದರಾಜ್ ನಿರೂಪಿಸಿದರು ಅಜೇಯ್ ಸ್ವಾಗತಿಸಿದರು ವಂದನಾರ್ಪಣೆಯನ್ನು ಪ್ರವೀಣ್ ರವರು ನೆರವೇರಿಸಿ ಕೊಟ್ಟರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ