ಪೆರ್ನಾಜೆಯಲ್ಲಿ ಸತತ ಮೂರು ದಿನಗಳಿಂದ ಕಾಡಾನೆ ಹಾವಳಿ

Upayuktha
0

ಕೃಷಿಗೆ ಒಂದೆಡೆ ಕಾಡುಪ್ರಾಣಿಗಳ ಹಾವಳಿ, ಇನ್ನೊಂದೆಡೆ ಮಳೆಯ ಚೆಲ್ಲಾಟ




ಪೆರ್ನಾಜೆ: ಕಾಸರಗೋಡಿನ ಪರಪೆಯಿಂದ ಪ್ರಾರಂಭವಾಗಿ ಮುಗೇರು- ಸುಳ್ಯ ತಾಲೂಕು ಕನಕಮಜಲು ಪ್ರದೇಶವು ರಕ್ಷಿತಾರಣ್ಯದಿಂದ ಕೂಡಿದ್ದು, ಇಲ್ಲಿಂದ ಹೊರಟ ಕಾಡಾನೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ತೋಟಗಳಿಗೆ ನುಗ್ಗಿ ಹಾನಿ ಮಾಡಿದೆ.


ಈಗಾಗಲೇ ಹಲವು ಬಾರಿ ಕುಮಾರ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿದ ಆನೆ, ಮೂರು ದಿನಗಳಿಂದ ಬಾಳೆ ತೋಟವನ್ನು ಛಿದ್ರಗೊಳಿಸುತ್ತಿದೆ. 25ಕ್ಕೂ ಮಿಕ್ಕಿ ಬಾಳೆ ಗಿಡಗಳನ್ನು ನಾಶ ಮಾಡಿದ್ದು ಅಡಿಕೆ ಗಿಡಗಳಿಗೂ ಬಹಳಷ್ಟು ಹಾನಿಯಾಗಿದೆ.


ಕೃಷಿಕರನ್ನು ಕಾಡಾನೆ ಹೈರಾಣ ಮಾಡಿಸುತ್ತಿದ್ದು, ಇದಕ್ಕೆಲ್ಲ ಸರಕಾರ ಸೂಕ್ತ ಪರಿಹಾರ ನೀಡುವುದು ಮಾತ್ರವಲ್ಲದೆ ಕಾಡಾನೆಗಳನ್ನು ಇಲ್ಲಿಂದ ತೆರವು ಮಾಡುವ ಕಾರ್ಯ ಆಗಬೇಕಾಗಿದೆ. ಆನೆ ಹಾವಳಿ ಬಗ್ಗೆ ಊರವರು ಆಕ್ರೋಶ ವ್ಯಕ್ತಪಡಿಸಿದ್ದು, ಇಷ್ಟು ವರ್ಷಗಳಿಂದ ಎಲ್ಲೂ ಇಲ್ಲದ ಆನೆಗಳು ಇದೀಗ ಎಲ್ಲೆಡೆ ರಾಜಾರೋಶವಾಗಿ ಹೇಗೆ ಬಂದವು ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.


ಒಂದೆಡೆ ಕೂಲಿ ಆಳುಗಳ ಸಮಸ್ಯೆ, ಇನ್ನೊಂದೆಡೆ ಅಡಿಕೆಗೆ ಎಲೆ ಚುಕ್ಕಿ ರೋಗ, ಮತ್ತೊಂದೆಡೆ ಅಡಿಕೆಗೆ ಕ್ಯಾನ್ಸರ್ ಕಾರಕ ವರದಿಯಿಂದ ಕಂಗೆಟ್ಟ ರೈತ. ಪ್ರಕೃತಿಯ ಮುನಿಸು ಎಲ್ಲವನ್ನೂ ಬಡಪಾಯಿ ರೈತ ನಿಭಾಯಿಸಬೇಕಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top