ಪುತ್ತೂರು: ವಿವೇಕಾನಂದ ಕಲಾವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಸ್ನಾತಕೋತ್ತರ ವಾಣಿಜ್ಯ ವಿಭಾಗ IQAC ಮತ್ತು HEF ಮಹಿಳಾ ಘಟಕ ಮತ್ತು ರೇಡಿಯೋ ಪಾಂಚಜನ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ 'ಉದ್ಯಮಶೀಲತೆಯಲ್ಲಿ ಯಶಸ್ಸು' ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಪಿಜಿ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಎಚ್.ಜಿ ಶ್ರೀಧರ್,ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ, ರವಿನಾರಾಯಣ ಎಂ, ಗಿರೀಶ್ ಎಂ, ಕೇಶವ ಪ್ರಸಾದ್ ಮುಳಿಯ, HEF ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಎಂ.ಕಾಂ. ವಿದ್ಯಾರ್ಥಿನಿಯರಾದ ಅನನ್ಯ ಮತ್ತು ಪೂಜಶ್ರೀ ಇವರು ಪ್ರಾರ್ಥನೆ ಮಾಡಿದರು. ಡಾ. ವಿಜಯ ಸರಸ್ವತಿಯವರು ಇವರು ಅತಿಥಿ- ಅಭ್ಯಾಗತರನ್ನು ಸ್ವಾಗತಿಸಿದರು. ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಉದ್ಘಾಟನೆಯನ್ನು ದೀಪೋಜ್ವಲನದೊಂದಿಗೆ ಡಾ. ಹೆಚ್. ಜಿ ಶ್ರೀಧರ್ ಇವರು ನೆರವೇರಿಸಿದರು.
ಕೊನೆಯದಾಗಿ ಅತಿಥಿಗಳಿಗೆ ಧನ್ಯವಾದ ಸಮರ್ಪಿಸುವುದರ ಜೊತೆಗೆ ಕಾರ್ಯಕ್ರಮದ ನಿರೂಪಣೆಯನ್ನು ಮೇಘನಾ ಇವರು ನಡೆಸಿಕೊಟ್ಟರು.
ಸಮಾರೋಪ ಸಮಾರಂಭ:
ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ , ಡಾ. ವಿಜಯ ಸರಸ್ವತಿ ಡೀನ್ ಸ್ನಾತಕೋತ್ತರ ವಿಭಾಗ, ರವಿ ನಾರಾಯಣ ಎಂ, ಗಿರೀಶ್ ಎಂ, ಶ್ರೀಮತಿ ಮೀರಾ ಮುರಳೀಧರ್, ಶ್ರೀ ಕೇಶವ ಪ್ರಸಾದ್ ಮುಳಿಯ, ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಧನ್ಯವಾದ ಸಮರ್ಪಣೆಯ ಜೊತೆಗೆ ಕಾರ್ಯಕ್ರಮವನ್ನು ನವೀನ್ ಕೃಷ್ಣ ಇವರು ನಿರೂಪಿಸಿದರು.
HEF ಮಹಿಳಾ ಘಟಕದ ಕಾರ್ಯದರ್ಶಿ ಗಳಾದ ಶ್ರೀಮತಿ ಮಹಾಲಕ್ಷ್ಮಿ ಕೆಮ್ಮಿಂಜೆ , ಶ್ರೀಮತಿ ಶರಾವತಿ, ಶ್ರೀಮತಿ ಉಮಾ ಡಿ ಪ್ರಸನ್ನ, ಶ್ರೀಮತಿ ಪ್ರಭಾವತಿ ಹಾಗೂ HEF ಅಧ್ಯಕ್ಷ ಸತೀಶ್ ರಾವ್ ಉಪಸ್ಥಿತರಿದ್ದರು.
ಎಲೆಕ್ಟ್ರಿಕ್ ಉದ್ಯಮದ ಕುರಿತು ಉದ್ಯಮಿಗಳಾದ ರವಿನಾರಾಯಣ ಇವರು ಮಾಹಿತಿ ನೀಡಿದರು. ಇವರು ಆರಂಭ ಮಾಡಿದ ಮೈತ್ರಿ ಎಲೆಕ್ಟ್ರಿಕಲ್ ಕಂಪನಿಯ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಜೊತೆಗೆ ಒಬ್ಬ ವ್ಯಕ್ತಿ ಒಂದು ಉದ್ಯಮ ಶುರು ಮಾಡಬೇಕೆಂದು ಅಂದುಕೊಂಡಾಗ ಆತನಿಗೆ ಆ ಉದ್ಯಮದ ಬಗ್ಗೆ ಅಷ್ಟು ಜ್ಞಾನವಿಲ್ಲದಿದ್ದರೂ ಆ ಉದ್ಯಮದ ಬಗ್ಗೆ ತಿಳಿದಿರುವವರನ್ನು ಒಟ್ಟುಗೂಡಿಸಿಕೊಂಡು ಉದ್ಯಮವನ್ನು ಪ್ರಾರಂಭಿಸಬಹುದು ಎಂದು ಹೇಳಿದರು.
ಈ ಅವಧಿಯನ್ನು ತನುಜಾ ನಿರೂಪಿಸಿದರು.
ಗಿರೀಶ್ ಎಂ ಇವರು ಆಹಾರೋದ್ಯಮ ಉದ್ಯಮದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.
ಆಹಾರ ಉದ್ಯಮದಲ್ಲಿ ಸಂತೃಪ್ತಿ ಹೋಟೆಲನ್ನು ಇವರು ಆರಂಭಿಸಿದರು. ಹೋಟೆಲ್ ಉದ್ಯಮದಲ್ಲಿ ಇರುವ ಕಷ್ಟಗಳು ಅದರ ಜೊತೆಗೆ ಬೇರೆ ಹೋಟೆಲುಗಳ ಪೈಪೋಟಿಯನ್ನು ಹೇಗೆ ಎದುರಿಸಬೇಕೆಂಬುದನ್ನು ಕೂಡ ತಿಳಿಸಿದರು.
ಜೊತೆಗೆ ಹೋಟೆಲಿನಲ್ಲಿ ಅಡುಗೆ ಮಾಡಲು ಜನ ಸಿಗದಾಗ ಆಗುವ ಕಷ್ಟಗಳು ಮತ್ತು ಹೊಸ ಅಡುಗೆಯವರು ಬಂದಾಗ ದಿನದಿಂದ ದಿನಕ್ಕೆ ಬದಲಾಗುವ ಪದಾರ್ಥಗಳ ರುಚಿಯ ಬಗ್ಗೆ ತಿಳಿಸುತ್ತ ಇಂತಹ ಸಂದರ್ಭದಲ್ಲಿ ನಮಗೆ ಅಡುಗೆ ಗೊತ್ತಿದ್ದರೆ ಅದರಿಂದ ಆಗುವ ಪ್ರಯೋಜನಗಳನ್ನು ಕೂಡ ವಿವರಿಸಿದರು.
ಈ ಅವಧಿಯನ್ನು ನೀಹಾ ಇವರು ನಿರೂಪಿಸಿದರು.
ಶ್ರೀಮತಿ ಮೀರಾ ಮುರಲೀಧರ್ ಇವರ ಸಂವಾದ ಕಾರ್ಯಕ್ರಮದಲ್ಲಿ ಇವರ ಜೊತೆಗೆ ಶರಾವತಿ ರವಿ ನಾರಾಯಣ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯ ಜೊತೆಗಿದ್ದರು. ಇವರು ತಾವು ಪ್ರಾರಂಭಿಸಿದ ಕಂಪನಿಯ ಬಗ್ಗೆ ತಿಳಿಸಿದರು, ಇವರು ಅಗತ್ಯವಿರುವ ಗಿಡಮೂಲಿಕೆ ಔಷಧಿಯ ಸಸ್ಯಗಳನ್ನು ಬೆಳೆಸಿ, ಅದರಿಂದ ಗಿಡಮೂಲಿಕೆ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಇದರೊಂದಿಗೆ ಸತ್ವಂ ಎಂಬ ಹರ್ಬಲ್ ಮಿನರಲ್ ವಾಟರ್ ಕೂಡ ಇವರ ಸಂಸ್ಥೆಯ ಉತ್ಪನ್ನ. ಇವರು ತಮ್ಮ ಸಾಧನೆಯಲ್ಲಿ ತಮ್ಮ ಮನೆಯವರ ಸಹಕಾರವನ್ನು ಕೂಡ ನೆನಪಿಸಿಕೊಂಡರು.
ಈ ಅವಧಿಯನ್ನು ತೇಜಸ್ವಿ ಇವರು ನಿರೂಪಿಸಿದರು.
ಕೇಶವಪ್ರಸಾದ್ ಮುಳಿಯ ಇವರು ಆಭರಣ ಮತ್ತು ಇತರ ಉದ್ಯಮಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿದರು. ಮುಳಿಯ ಜುವೆಲರ್ಸ್ ನ ಆರಂಭದಿಂದ ಹಿಡಿದು ಈಗ ಅದು ಯಾವ ರೀತಿಯಲ್ಲಿ ನಡೆದುಕೊಂಡು ಹೋಗುತ್ತಾ ಇದೆ ಮತ್ತು ಸಂಸ್ಥೆ ಹೊಂದಿರುವ ಶಾಖೆಗಳ ಬಗ್ಗೆ ತಿಳಿಸಿದರು.
ಜೊತೆಗೆ ತಮ್ಮ ಸಂಸ್ಥೆಯು ಉದ್ಯೋಗಿಗಳಿಗೆ ಸ್ವಂತ ನಿವೇಶನದ ಅವಶ್ಯಕತೆ ಇದ್ದಾಗ find the need and fill the gap ಎಂಬಂತೆ ಮುಳಿಯ ಪ್ರಾಪರ್ಟೀಸ್ ನ ಉಗಮಕ್ಕೆ ಕಾರಣವಾದ ರೋಚಕ ವಿಚಾರವನ್ನು ತಿಳಿಸಿದರು.
ಜೊತೆಗೆ ಯುವ ಉದ್ಯಮಿಗಳಿಗೆ ಇರುವ ಅವಕಾಶಗಳು, ಡಿಜಿಟಲ್ ಇಂಡಿಯಾ ದಿಂದ ಆಗುವಂತಹ ಪ್ರಯೋಜನಗಳನ್ನು ಹಾಗೂ ಸ್ವ ಉದ್ಯೋಗಕ್ಕೆ ಇರುವ ಬೇರೆ ಬೇರೆ ಅವಕಾಶದ ಬಗ್ಗೆ ಕೇಶವ ಪ್ರಸಾದ್ ಮುಳಿಯ ಇವರು ವಿವರಿಸಿದರು.
ಈ ಅವಧಿಯನ್ನು ನವೀನ್ ಕೃಷ್ಣ ಇವರು ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ