ಬದಿಯಡ್ಕ: ಕಿಳಿಂಗಾರು ವೈದಿಕ ಮನೆತನದ ತುಪ್ಪೆಕಲ್ಲು ದಿವಂಗತ ಶ್ರೀಮತಿ ಸರಸ್ವತಿ ಭಟ್ ಮತ್ತು ವೇದಮೂರ್ತಿ ಶ್ರೀ ಕೃಷ್ಣ ಭಟ್ ಇವರ ಮಗ ವಿದ್ಯಾಗಿರಿ ಸಮೀಪ ಮುನಿಯೂರು ಎಂಬಲ್ಲಿ ವಾಸವಾಗಿರುವ ವೇದಮೂರ್ತಿ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಇವರು ಹವ್ಯಕ ವೇದರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ವಿಶ್ವ ಹವ್ಯಕ ಸಮ್ಮೇಳನ-2024 ಸಮಾರಂಭದಲ್ಲಿ ವೇದರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇವರು ಪಳ್ಳತ್ತಡ್ಕ ವಲಯದ ಬಳ್ಳಂಬೆಟ್ಟು ಘಟಕದ ಕುಲಗುರುಗಳ ಶಿಷ್ಯರು. ಇವರಿಗೆ ಪಳ್ಳತ್ತಡ್ಕ ವಲಯದ ಬಳ್ಳಂಬೆಟ್ಟು ಘಟಕದ ಪರವಾಗಿ ಘಟಕ ಅಧ್ಯಕ್ಷರಾದ ಗದ್ದೆಮನೆ ಈಶ್ವರ ಭಟ್ ಬಳ್ಳಂಬೆಟ್ಟು, ಹಾಗೂ ಯಕ್ಷಗಾನ ಪ್ರಸಂಗಕರ್ತ, ಉದ್ಯಮಿ ಮತ್ತು ಸಂಘಟಕರಾದ ಕೃಷ್ಣ ಪ್ರಕಾಶ ಬಳ್ಳಂಬೆಟ್ಟು ಅಭಿನಂದನೆ ಸಲ್ಲಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ