ಧರ್ಮಸ್ಥಳ: ಪ್ರತೀ ಧರ್ಮದ ಮೂಲ ಉದ್ದೇಶ ಮನುಕುಲದಲ್ಲಿ ಸಭ್ಯತೆಯನ್ನು ಕಲಿಸುವುದಾಗಿದೆ. ಅಹಿಂಸಾತ್ಮಕ ಜೀವನವನ್ನು ನಡೆಸುವ ಮಾರ್ಗವನ್ನು ತಿಳಿಸುವ ಮೂಲ ಉದ್ದೇಶವನ್ನು ಧರ್ಮಗಳು ಹೊಂದಿದೆ ಎಂದು ಉಪನ್ಯಾಸಕ ಸಂಶೋಧಕರು ಮತ್ತು ಸಂವಹನಕಾರರಾದ ಡಾ. ಜಿ.ಬಿ ಹರೀಶ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶುಕ್ರವಾರ 92 ನೇ ಸರ್ವಧರ್ಮ ಸಮ್ಮೇಳನದ ಅಧಿವೇಶನದಲ್ಲಿ ಸಮ್ಮೇಳನದ ಉಪನ್ಯಾಸಕರಾಗಿ ಮಾತನಾಡಿದರು.
ಹಲವಾರು ಯೋಚನೆಗಳ ಮೊತ್ತವಾಗಿರುವ ಮಾನವನು ತನ್ನ ಪೂರ್ವಜನ್ಮದ ಕರ್ಮಗಳನ್ನು ಹೊತ್ತು ತಿರುಗುತ್ತಾನೆ. ಭಾರತದಲ್ಲಿ ಹುಟ್ಟಿದ ಎಲ್ಲಾ ಧರ್ಮಗಳು ಕರ್ಮ ಸಿದ್ಧಾಂತವನ್ನು ಪಾಲಿಸುತ್ತದೆ. ಇಲ್ಲಿನ ಧರ್ಮಗಳು ಪ್ರಕೃತಿ ಆರಾಧನೆಯನ್ನು ಪ್ರೋತ್ಸಾಹಿಸಿ ಒಂದಕ್ಕೊಂದು ಪೂರಕವಾಗಿದೆ. ಎಂದು ಅಭಿಪ್ರಾಯ ಪಟ್ಟರು.
ಶಿಕ್ಷಣದಿಂದ ಅಂತದೃಷ್ಟಿಯನ್ನು ಬೆಳೆಸಿಕೊಳ್ಳುವುದರಿಂದ ಆಧ್ಯಾತ್ಮಿಕತೆಯ ಕಡೆಗೆ ಸಾಗಬಹುದು. ಈ ಸಾಧನೆಗಳು ಕಠಿಣ ಪರಿಶ್ರಮದ ಉತ್ಪನ್ನವಾಗಿದೆ. ಪರಿಶ್ರಮವಿಲ್ಲದೆ ಧರ್ಮದ ಸಾರ ಅರ್ಥವಾಗಲು ಸಾಧ್ಯವಿಲ್ಲ ಎಂದರು.
ಭಾರತೀಯ ಧರ್ಮಗಳು ಒಳಿತಿನ ಒಂದೇ ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದೆ. ಬೋಧನೆಯ ಮತ್ತು ಅನುಸರಣೆಯ ಮಾರ್ಗಗಳು ಬೇರೆಯಾದರೂ ಕೂಡಾ ಧ್ವನಿಸುವ ತತ್ವಗಳು ಒಂದೇ ಆಗಿದೆ ಎಂದು ಹೇಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ