ಹಾಯ್ ಹೇಗಿದ್ದೀರಾ? ಇಲ್ಲಿ ನಾವು ಪಾಲಿಶ್ ಮಾಡಿದ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳೋಣ.
ಹೇಗೆ ಕತ್ತರಿ, ಚಾಕು, ಮುಂತಾದ ವಸ್ತುಗಳನ್ನು ಹೇಗೆ ಸಾಣೆ ಹಿಡಿದು ಹರಿತ ಮಾಡುತ್ತಾರೋ ಹಾಗೆ ನಮ್ಮ ವ್ಯಕ್ತಿತ್ವಕ್ಕೆ ಮೇಲಿಂದ ಮೇಲೆ ಸಾಣೆ ಹಿಡಿಯುವುದು ಕೂಡ ಅತ್ಯವಶ್ಯಕವಾಗಿರುತ್ತದೆ. ಇಲ್ಲದಿದ್ದರೆ ಅವು ಹೇಗೆ ಮೊಂಡಾಗುತ್ತವೆಯೋ ಹಾಗೆ ನಮ್ಮ ವ್ಯಕ್ತಿತ್ವವು ಆಕರ್ಷಕ ವಾಗಿರಲು ಉತ್ತಮ ಕೌಶಲ, ಸಂವಹನೆಗಳಿಂದ ನಮ್ಮ ವ್ಯಕ್ತಿತ್ವವನ್ನು ಸಾಣೆ ಹಿಡಿಯಬಹುದು.
ಹಾಗೆಯೇ ಕೆಲವೊಂದು ಸಾರೆ ಪ್ರತಿಕೂಲ ಸನ್ನಿವೇಶಗಳು ಮತ್ತು ಜನರು ಕೂಡ ನಮ್ಮ ವ್ಯಕ್ತಿತ್ವಕ್ಕೆ ಸಾಣೆ ಹಿಡಿಯುವುದುಂಟು. ಇದರಿಂದ ನಮ್ಮ ಪ್ರತಿಭೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಕಾಲಕ್ಕೆ ತಕ್ಕಂತೆ ನಮ್ಮ ವ್ಯಕ್ತಿತ್ವವನ್ನು ಸುಂದರವಾಗಿ ಬದಲಾಯಿಸದೆ ಇದ್ದರೆ ನಾವು ನಿಂತ ನೀರಿನಂತೆ ಯಾರಿಗೂ ಬೇಡವಾಗುತ್ತೇವೆ. ಗಂಗೆ ಕೂಡ ಹರಿಯದೇ ಇದ್ದರೆ ಮಾಲಿನವಾಗಿ ಬಿಡುತ್ತಾಳೆ ಎಂದು ಹೇಳುತ್ತಾರೆ. ನದಿ ಕೂಡ ರಭಸವಾಗಿ ಹರಿದು ಕಸ, ಕಡ್ಡಿಗಳನ್ನು ದಂಡೆಗೆ ಹಾಕಿ ಸ್ವಚ್ಛವಾಗುತ್ತದೆ.
ಹಾಗೆಯೇ ನಮ್ಮ ವ್ಯಕ್ತಿತ್ವವನ್ನು ಚಲನಶೀಲ ಮಾಡದಿದ್ದರೆ ನಮ್ಮ ವ್ಯಕ್ತಿತ್ವವು ಹೊಳಪನ್ನು ಕಳೆದುಕೊಂಡು ಬಿಡುತ್ತದೆ. ಚಿನ್ನವನ್ನು ಸಾಣೆ ಹಿಡಿದಾಗಲೇ ಅದು ಒಂದು ಉತ್ತಮ ಆಭರಣವಾಗಿ ಬಿಡುತ್ತದೆ. ಹಾಗೆಯೇ ನಮ್ಮ ವ್ಯಕ್ತಿತ್ವವನ್ನು ಸುಂದರವಾದ ಪ್ರತಿಭೆ, ವಿನಯ, ಮತ್ತು ಮಾನವೀಯತೆಯನ್ನು ಅಳವಡಿಸುವುದರಿಂದ ನಾವು ನಮ್ಮದೇ ಆದ ಛಾಪನ್ನು ಮೂಡಿಸಿ ತೋರಿಸಬಹುದು.
ಹಿಟ್ಟನ್ನು ಹೇಗೆ ಜರಡಿ ಹಿಡಿದು ತೌಡು ತೆಗೆದು ಉಪಯೋಗ ಮಾಡುತ್ತಾರೋ ಹಾಗೆಯೇ ನಮ್ಮ ದೋಷಗಳನ್ನೂ ತಿದ್ದಿ ನಮ್ಮ ವ್ಯಕ್ತಿತ್ವವನ್ನು ಶೋಕೇಸಿನ ವಸ್ತುವಿನಂತೆ ಸುಂದರ ಆಗುತ್ತದೆ.
ಇಲ್ಲಿ ನಮ್ಮ ಪ್ರೆಸೆಂಟೇಷನ್ ಕೂಡ ಮುಖ್ಯವಾಗುತ್ತದೆ. ಹೇಗೆ ಅಂಗಡಿಯಲ್ಲಿ ಇರುವ ವಸ್ತುವು ಧೂಳನ್ನು ಕೆಡವಿಕೊಂಡು ಇನ್ನೊಬ್ಬರ ಮುಂದೆ. ಉತ್ತಮವಾಗಿ ಪ್ರೆಸೆಂಟ್ ಆಗುತ್ತದೆಯೋ ಹಾಗೆ ನಾವು ನಮ್ಮ ವ್ಯಕ್ತಿತ್ವದ ಮೇಲೆ ಬಿದ್ದಿರುವ ದೌರ್ಬಲ್ಯಗಳನ್ನು ಕೊಡವಿಕೊಂಡು ಸಮಾಜದ ಮುಂದೆ ಉತ್ತಮ ರೀತಿಯಲ್ಲಿ present ಆಗಿ ತೋರಿಸೋಣ. ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ