ಉನ್ನತ ತತ್ವಾದರ್ಶಗಳಿಂದ ಬದುಕು ಹಸನು: ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳು

Upayuktha
0


ಧರ್ಮಸ್ಥಳ: ಮಾನವನನ್ನು ಸಂಬಂಧಗಳಿಂದ  ದೂರಮಾಡುವ ಯಾವುದೇ ಕೆಲಸಗಳನ್ನು ಧರ್ಮಗ್ರಂಥಗಳು ಪ್ರೋತ್ಸಾಹಿಸುವುದಿಲ್ಲ  ಎಂದು ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನ ರಾಜರಾಜೇಶ್ವರಿ ನಗರ ಬೆಂಗಳೂರಿನ  ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳು ನುಡಿದರು. 


ಶ್ರೀ ಕ್ಷೇತ್ರ  ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶುಕ್ರವಾರ  92 ನೇ ಸರ್ವಧರ್ಮ ಸಮ್ಮೇಳನವನ್ನು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.


ಇಡೀ ವಸುಧೆಯು ನಮ್ಮ ಕುಟುಂಬ ಎಂಬ ಭಾವನೆಯನ್ನು ಮಾನವರು ಹೊಂದಬೇಕು. ಈ ಮಹತ್ವ ಪೂರ್ಣ ಉದ್ದೇಶಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿ ಸೌಹಾರ್ದಯುತ ಜೀವನಕ್ಕೆ ನಾಂದಿಯಾಗುತ್ತದೆ  ಎಂದು ನುಡಿದರು. 


ಎಲ್ಲಾ ಮತ ಗ್ರಂಥಗಳು ಸರ್ವಕಾಲದಲ್ಲಿಯೂ ಅನ್ವಯವಾಗುವಂತಹ ತತ್ವಾದರ್ಶಗಳನ್ನು ಹೊಂದಿದೆ. ಈ ತತ್ವಗಳು ಕಾಲದಿಂದ ಕಾಲಕ್ಕೆ ಪ್ರತೀ ವಿಚಾರಗಳಲ್ಲಿಯೂ ಹೊಂದಿಕೆಯಾಗುವ ಉದ್ದೇಶವನ್ನು ಒಳಗೊಂಡಿದೆ. 


ಸಮಾಜದ ಒಳಿತಿಗಾಗಿ ಸತ್ಯದ ನೆಲೆಯಲ್ಲಿ ಜೀವನ ಸಾಗಿಸಬೇಕು. ಇಂತಹ ಆಲೋಚನೆಗಳು ಅನಂತಕಾಲದವರೆಗೂ ಉಳಿಯುವುದರಿಂದ ವಿಶ್ವ ಶಾಂತಿಯನ್ನು ಸ್ಥಾಪಿಸಬಹುದು. ಒಳಿತಿನ ಚಿಂತನೆಗಳನ್ನು ಬಾಳಿನಲ್ಲಿ ಬೆಳೆಸಿಕೊಂಡು ಬಾಳಬೇಕು. ವಿನಾಶವನ್ನು ಪ್ರಚೋದಿಸುವ ಲೋಚನೆಗಳಿಂದ ದೂರವಿರಬೇಕು ಎಂದರು. 


ಎಲ್ಲಾ ಧರ್ಮಗಳು ಶಾಂತಿ, ಸುಸ್ಥಿರತೆಯನ್ನು ಬೆಂಬಲಿಸುತ್ತದೆ. ನಾವೆಲ್ಲರೂ ಒಂದು ಕುಟುಂಬ ಎಂಬ ಮನೋಭಾವವನ್ನು ಬೆಳೆಸಿಕೊಂಡಾಗ ಸರ್ವಧರ್ಮ ಸಮ್ಮೇಳನ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top