ಪುತ್ತೂರು: "ಕಾಡುಗಳಿದ್ದರೆ ನಾಡು ಬೆಳೆಯುತ್ತದೆ. ಪರಿಸರ ಹಸಿರಾಗಿದ್ದರೆ ನಾವು ಶುದ್ಧ ಗಾಳಿ ಪಡೆಯಬಹುದು. ಪರಿಸರ ನಮಗೆ ಅತಿ ಮುಖ್ಯ. ಹುಲ್ಲುಗಾವಲು ಚೆನ್ನಾಗಿ ಬೆಳೆಯಬೇಕಾದರೆ ಮಳೆ ಬೇಕು, ಮಳೆ ಬರಬೇಕಾದರೆ ಗಿಡಗಳನ್ನು ನೆಡಬೇಕು. ಹಾಗಾಗಿ ನಾವು ಹೆಚ್ಚಾಗಿ ಗಿಡಗಳನ್ನು ನೆಡಬೇಕು. ನಮ್ಮ ಪರಿಸರದಲ್ಲಿ ನದಿಯು ಒಂದು ಭಾಗವಾಗಿದೆ. ನಾವು ನದಿಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ನದಿಗಳಿಗೆ ಕಸವನ್ನು ಹಾಕಬಾರದು. ಇದು ನೀರನ್ನು ಕಲುಷಿತಗೊಳಿಸುತ್ತದೆ. ಮುಟ್ಟಿದರೆ ಮುನಿ ಎನ್ನುವ ಸಸ್ಯದ ಬೇರಿನಿಂದಾಗಿ ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ ಹಾಗೂ ಇದರಲ್ಲಿ ಔಷಧೀಯ ಗುಣವು ಇದೆ. ಗಿಡಗಳನ್ನು ನೆಡುವ ಮೂಲಕ ನಾವು ನಮ್ಮ ಭೂಮಿಯನ್ನು ರಕ್ಷಿಸಬಹುದು. ಭೂಮಿಯನ್ನು ರಕ್ಷಿಸಬೇಕಾದರೆ ಎಲ್ಲರೂ ಕೈ ಜೋಡಿಸಬೇಕು" ಎಂದು ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಹೇಳಿದರು.
ಇವರು ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕುಡಿಪಾಡಿ ಇಲ್ಲಿ ಸಸ್ಯಶಾಸ್ತ್ರ ವಿಭಾಗ ಮತ್ತು ಗ್ರಾಮ ವಿಕಾಸ ಯೋಜನೆ ಇದರ ಸಹಯೋಗದಲ್ಲಿ ನಡೆದ ಇಕೋ ಕ್ಲಬ್ ಪರಿಸರ ಜಾಗೃತಿ ಮತ್ತು ಗಿಡಗಳ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.
"ಪ್ರಕೃತಿಯು ಕೇವಲ ಮಾನವನ ಸ್ವತ್ತಲ್ಲ, ಅದರ ಮೇಲೆ ಎಲ್ಲಾ ಜೀವಿಗಳಿಗೂ ಸಮವಾದ ಹಕ್ಕಿದೆ. ನಮ್ಮ ಸುತ್ತಲಿನ ಪ್ರತಿಯೊಂದು ಗಿಡಗಳು ಒಂದೊಂದು ಉಪಯೋಗವನ್ನು ಹೊಂದಿದೆ. ಮರಗಳಲ್ಲಿ ಬೆಳೆದ ಹಣ್ಣುಗಳನ್ನು ನಾವು ಮಾತ್ರ ತಿನ್ನುವ ಬದಲು ಕನಿಷ್ಠ ಒಂದು ಹಣ್ಣನ್ನಾದರೂ ಹಕ್ಕಿಗಳಿಗೆ ಉಳಿಸಿ. ಪರಿಸರದಲ್ಲಿ ಬೆಳೆಯುವ ಅದೆಷ್ಟೋ ಹಣ್ಣುಗಳು ನೈಸರ್ಗಿಕವಾಗಿರುತ್ತವೆ, ಅವುಗಳಿಗೆ ನಾವು ಯಾವುದೇ ರೀತಿಯಲ್ಲಿ ನೀರು, ಗೊಬ್ಬರ ಇಟ್ಟಿರುವುದಿಲ್ಲ. ಹಾಗಾಗಿ ಅದು ಮನುಷ್ಯನ ಜೊತೆಗೆ ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಸೇರಿದ್ದಾಗಿದೆ" ಎಂದು ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕುಡಿಪಾಡಿ ಇಲ್ಲಿನ ಮುಖ್ಯ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮುಸ್ಕರೇನ್ಹಸ್ ಹೇಳಿದರು.
ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ವಿವಿಧ ಬಗೆಯ ಸಸ್ಯಗಳನ್ನು ಪರಿಚಯಿಸಲಾಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮುಸ್ಕರೇನ್ಹಸ್ ಸ್ವಾಗತಿಸಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ