ಪೌರಾಣಿಕ ಕಥನ ದಾಟಿಸಿದ ನೃತ್ಯರೂಪಕ

Upayuktha
0


ದುಷ್ಟ ಶಕ್ತಿಗಳ ನಿರ್ನಾಮ ಮತ್ತು ಸೀತಾಪಹರಣ ನೃತ್ಯರೂಪಕ ಅಭಿನಯ ಹಾಗೂ ವಿಶಿಷ್ಟ ಆಹಾರ್ಯಗಳಿಂದ ಕೂಡಿದ ಪ್ರಸ್ತುತಿಯು ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಪ್ರದರ್ಶನಗೊಂಡಿತು. ಯಾವುದೇ ಕೃತಕ ತಂತ್ರಜ್ಞಾನವನ್ನು ಬಳಸದೆ ಸಂಪೂರ್ಣ ನಾಟ್ಯದ ಮುಖಾಂತರ  ಪೌರಾಣಿಕ ಕಥೆಯ ಚಿತ್ರಣ ರಸದೌತಣವನ್ನು ನೀಡಿತು. ಪುರಾಣದ ಕಥೆಗೆ ಚ್ಯುತಿಬಾರದಂತೆ ನವರೂಪದಲ್ಲಿ ಕಥೆಯನ್ನು ನಿರೂಪಿಸಿದ ನೃತ್ಯ ವಿಶೇಷವೆನ್ನಿಸಿತು.


ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಮೂರನೇ ದಿನ ಅಮೃತವರ್ಷಿಣಿ ಸಭಾಭವನದಲ್ಲಿ ನಾಟ್ಯಾರಾಧನಾ ಕಲಾಕೇಂದ್ರದ ವಿದುಷಿ ಸುಮಂಗಲ ರತ್ನಕರ್ ರಾವ್ ನಿರ್ದೇಶನದಲ್ಲಿ ಪ್ರಸ್ತುತಪಡಿಸಲ್ಪಟ್ಟ ನೃತ್ಯಾರ್ಚನೆ ಮತ್ತು ಮಯಾ ವಿಲಾಸ ನೃತ್ಯ ರೂಪಕದ ವಿಶೇಷತೆಗಳಿವು.


ಅಚ್ಚುಕಟ್ಟಾದ ವೇಷಭೂಷಣ, ಪರಿಪೂರ್ಣ ರಂಗನಡೆ  ಈ ಪ್ರದರ್ಶನದ ಹೆಚ್ಚುಗಾರಿಕೆಯಾಗಿತ್ತು. ಭಾವಪೂರ್ಣ ಅಭಿನಯದ ಮೂಲಕ ಪ್ರೇಕ್ಷಕರನ್ನು  ಹಿಡಿದಿಟ್ಟುಕೊಂಡರು. ವಿಘ್ನ ವಿನಾಶಕನ ಶ್ಲೋಕ ಜೊತೆಗೆ ವಿದ್ಯಾಮಾತೆ ಸರಸ್ವತಿಯನ್ನ ಸ್ಮರಿಸುವ ಸಾಲಿನಿಂದ ಕೂಡಿದ ನೃತ್ಯ ಜನಮಾನಸವನ್ನ ತನ್ನತ್ತ ಸಳೆಯಿತು. ನಾಟ್ಯದ ಅಧಿದೇವತೆ ನಟರಾಜನನ್ನು ನಮಿಸುವ ಹಾಡಿನ ಮೂಲಕ  ಇವುಮೂರನ್ನು ಒಳಗೊಂಡ ನೃತ್ಯ ತ್ರಿಶಕ್ತಿ ಅಂಜಲಿ ಪದ ರಾಗ ಮಾಲಿಕೆ ಆದಿತಳದಲಿ ಪ್ರಸ್ತುತಿಹೊಂದಿತು.


ನಾಟ್ಯ ಎಂದಾಕ್ಷಣ ನೆನಪಾಗುವುದು ನಟರಾಜ.  ಸಪ್ತ ತಾಂಡವ ಎಂಬ ಹಾಗೆ ಲೋಕದಲ್ಲಿ ಗುರುತಿಸಲ್ಪಟ್ಟ ಆತನ ಬೇರೆ ಬೇರೆ ನಾಟ್ಯಗಳು. ಆತನ ರೂಪ ಲಾವಣ್ಯ ಹರಡಿದ ಕೇಶ, ಹರಿಯುವ ನಾಗ, ಮುನುಗುವ ಚಂದ್ರ, ರುದ್ರಾಕ್ಷಿ ಮಾಲೆ ಆ ನಟರಾಜನ ಭಂಗಿ ವರ್ಣಿಸಲಾಸಾಧ್ಯ . ತನ್ನ ಕೈಗಳಲ್ಲಿ ಹಿಡಿದಂತಹ ಡಮರು, ಅಗ್ನಿಯ ಮೂಲಕ ಸೃಷ್ಟಿ ಲಯದ ಕರ್ತವ್ಯವನ್ನು ಮಾಡುತ್ತಾನೆ. ಅಭಯ ಹಸ್ತದ ಮೂಲಕ ಲೋಕದ ಜನರನ್ನ ಪೊರೆಯುತ್ತಾನೆ ಎಂಬುದನ್ನು ವರ್ಣಿಸುವ ನರ್ತಿಪ ನಟರಾಜನ ನೋಡೇ ಎಂಬ ಪದಕ್ಕೆ ನಾಟ್ಯಾರಾಧನಾ ಕಲಾಕೇಂದ್ರದ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.


ವೇದಬಾಹಿರ ಋಷಿಗಳು ಮಾಡುತ್ತಿದ್ದ ಯಜ್ಞದ ವರ್ಣನೆ. ತಾವೇ ಲೋಕವನ್ನ ಆಳಬೇಕು ಎಂಬ ದುಷ್ಟ ಮನಸ್ಸಿನಿಂದ ಯಜ್ಞ ಮಾಡಿದಾಗ, ಹರನು  ಅವರನ್ನು ಸರಿಯಾದ ಮಾರ್ಗಕ್ಕೆ ತರಲು ದಿಗಂಬರನಾಗಿ ಆ ಪ್ರದೇಶಕ್ಕೆ ಬರುತ್ತಾನೆ. ಹೃಷಿಕೆಯರೆಲ್ಲ ಪುಷ್ಪವನ್ನು ಕೊಯ್ಯುವ ಸಮಯದಲ್ಲಿ ಅವರ ಮತಿಗೆ ಮೋಹ ಮಾಯಾಜಾಲವನ್ನು ಹರಡಿಸುತ್ತಾನೆ.ಏಕಾಗ್ರತೆಗೆ ಭಂಗ ತಂದ ಅತನ ಮೇಲೆ ಕುಪಿತಗೊಂಡAತಹ ಋಷಿಗಳು ಅವರ ಒಂದೊAದೇ ಉಗ್ರ ಸೃಷ್ಟಿಯನ್ನು ಹರನ ವಧೆಗಾಗಿ ಕಳಿಸುತ್ತಾರೆ. ಮೊದಲು ವ್ಯಾಘ್ರವನ್ನು ಹರನ ಬಳಿ ಕಳಿಸಿದಾಗ ಅದನ್ನ ಕ್ಷಣಮಾತ್ರದಲ್ಲಿ ಬಗೆದಂತ ಹರನು ವ್ಯಾಘ್ರ ಚರ್ಮಾಂಬರಧರನಾಗುವ ಸನ್ನಿವೇಶ, ನಂತರ  ಹಾವನ್ನ ಶಿವನ ಬಳಿ ಕಳಿಸಿದಾಗ ಹಾವನ್ನು ಶಿವ ತನ್ನ ಅಲಂಕಾರಿಕ ವಸ್ತು ಎಂಬAತೆ ಕೊರಳಲ್ಲಿ ಧರಿಸುವ ಸನ್ನಿವೇಶ.  ಕೊನೆಗೆ ಎಲ್ಲ ದುಷ್ಟ ಶಕ್ತಿಗಳನ್ನು ಸೇರಿಸಿ ಮುಯ್ಯಲಗ ಎಂಬ ಕುಬ್ಜ ರಾಕ್ಷಸನನ್ನು, ಬಂದಿರುವAತಹ ಆತ ಶಿವನೆಂದು ತಿಳಿಯದೆ ಸಂಹರಿಸಲು ಬಳಸಿದಂತ ಸಂದರ್ಭದಲ್ಲಿ ಶಿವ ದುಷ್ಟನ ಬೆನ್ನ ಮೇಲೆ ತನ್ನ ಬಲಗಾಲನ್ನು ಒತ್ತಿ ಎಡಗಾಲನ್ನು ನೆಲದಿಂದ ಮೇಲೆತ್ತಿ ಅಂದರೆ ನಮ್ಮಲ್ಲಿರುವಂತಹ ರಜೋಗುಣವನ್ನು ಧಮನಿಸಿ, ತಮಸ್ಸು ಶಕ್ತಿ ಇಲ್ಲದಂತೆ  ಮಾಡಿ, ಸತ್ವ ಗುಣ ಮೇಲೆತ್ತಿ ನೃತ್ಯ ಮಾಡುವಂತಹ ನಟರಾಜನ ಕಥಾ ವಿವರವನ್ನು ಸುಂದರವಾಗಿ ಮುಟ್ಟುವಂತೆ ಪ್ರಸ್ತುತಪಡಿಸಿದರು. ಈ ನೃತ್ಯ ಮಂಜುನಾಥ ಸ್ವಾಮಿಗೆ ಸಮರ್ಪಣೆ ಮಾಡಿದರು. 


ಗೋಪಿಕೆಯರ ನಾಯಕ, ಪರಮಾತ್ಮನಾದಂತಹ ಕೃಷ್ಣನ ರಾಸಲೀಲೆಯ ಕುರಿತು ನಾವೆಲ್ಲ ಕೇಳಿರುತ್ತೇವೆ. ಒಬ್ಬ ಮುಗ್ಧ ಗೋಪಿಕೆ ಆಕೆ ಕೃಷ್ಣನ ಅರಸಿಕೊಂಡು ಹೋಗುತ್ತಾಳೆ. ಸೋಡಶಿ ಆದಂತಹ ಆಕೆ ಮನೆಯವರಿಗೆ ಯಾರಿಗೂ ತಿಳಿಯದಂತೆ ಮೆಲ್ಲನೆ ಹೋಗುವಾಗ ಸಖಿಯ ಕಣ್ಣಿಗೆ ಬೀಳುತ್ತಾಳೆ. ಆ ಸಖಿಯಲ್ಲಿ ತಾನು ಎಲ್ಲಿಗೆ ಹೋಗುತ್ತಿದ್ದೇನೆ, ಯಾರನ್ನ ಕಾಣಲು ಹೋಗುತ್ತಿದ್ದೇನೆ ಎಂಬುದನ್ನು ವಿವರಿಸುವ‘ಅರಸುತ್ತಾ ಹೋಗುವೆ ನಾ’ ಎಂಬ ಶೃಂಗಾರ ಪದಕ್ಕೆ ನೃತ್ಯ ಮಾಡುವ ಮೂಲಕ ತನ್ನ ಹವಾ ಭಾವದಿಂದಲೇ ಜನ ಮಾನಸವನ್ನ ಮೆರುಗುಗೊಳಿಸಿದರು  ವಿದುಷಿ ಸುಮಂಗಳ ರತ್ನಾಕರ ರಾವ್. 


ಕೊನೆಯ ನೃತ್ಯ ರೂಪಕ ಮಾಯ ವಿಳಾಸ ಬದುಕಲ್ಲಿ ಎಲ್ಲವೂ ನಡೆಯುವುದು ಮಾಯೆಯೇ ಎಂದು ಸಾರುತ್ತದೆ. ಸಾಕ್ಷಾತ್ ಪರಮಾತ್ಮ ಧರೆಗೆ ಇಳಿದು ಬಂದಾಗಲೂ  ಆ ಮಾಯೆಯಿಂದ ಹೊರ ಬರಲು ಆಗುವುದಿಲ್ಲ. ಈ ಕಥಾಹಂದರದಲ್ಲಿ  ಸೀತಾಪಹರಣದ ಸನ್ನಿವೇಶವನ್ನು ಕಟ್ಟಿಕೊಟ್ಟರು. ಮಂಥರೆಗೆ ಕವಿದ ಮಾಯೆಯಿಂದ ಕೈಕೆಗೆ ಹೇಳಿದ ಮಾತುಗಳ ಮೂಲಕ, ಆಕೆಯನ್ನು ಮಾಯೆ ಆವರಿಸಿ ಶ್ರೀರಾಮಚಂದ್ರನನ್ನ ವನವಾಸಕ್ಕೆ ಕಳಿಸಿ ಕೊಡುವ ಸಂದರ್ಭ. ದಶರಥ ಆಡಿದ ಮಾತನ್ನು ಪಿತೃವಾಕ್ಯ ಪರಿಪಾಲನೆ ಎಂದು ನಂಬಿಕೊAಡು ಶ್ರೀರಾಮಚಂದ,್ರ ಸೀತಾಮಾತೆ ಮತ್ತು ಲಕ್ಷ್ಮಣ ಸಹಿತನಾಗಿ ಕಾಡಿಗೆ ಹೊರಡುವ ದುಃಖ ತಪ್ತ ಸಂದರ್ಭವನ್ನು ಸುಂದರವಾದ ‘ಮಾಯ ವಿಳಾಸ’ ಎಂಬ ನಾಟ್ಯ ರೂಪಕದ ಮೂಲಕ ಪ್ರಸ್ತುತಿಪಡಿಸಿದರು.


ಹೀಗೆ ಕಾಡಿನಲ್ಲಿ ಸಾಗುತ್ತಾ ಸಾಗುತ್ತಾ ಪಂಚವಟಿ ಎಂಬ ಪ್ರದೇಶಕ್ಕೆ ಬಂದು ಒಂದು ಪರ್ಣಕುಟೀರ ಕಟ್ಟಿಕೊಂಡು ಅದರಲ್ಲಿ ಇರುವಂತಹ ಹೊತ್ತು ಶೂರ್ಪನಕಿಯ ಆಗಮನವಾಗುತ್ತದೆ. ನರ ವಾಸನೆಯ ಜಾಡನ್ನು ಹುಡುಕಿಕೊಂಡು ರಾಮನನ್ನು ತಿನ್ನುವುದಕ್ಕೆ ಬರುತ್ತಾಳೆ. ಆತನ ರೂಪ ಲಾವಣ್ಯಕ್ಕೆ ಸೋತು ಹೋಗಿ  ಉಗ್ರ ರೂಪದಿಂದ ಸುಂದರ ಯುವತಿಯಂತೆ ಮಾಯಾ ಶೂರ್ಪನಕಿಯಾಗಿ ಆತನನ್ನ ಮದುವೆ ಆಗಬೇಕು ಎಂದು ಬಯಸಿ ಹೋಗುತ್ತಾಳೆ. ರಾಮ ತಾನು ಏಕ ಪತ್ನಿ ವೃತಸ್ತ ಎಂದು ಹೇಳಿ ಲಕ್ಷ್ಮಣನನ್ನು ತೋರಿಸಿದಾಗ ಆಕೆ ಲಕ್ಷ್ಮಣನ ಬಳಿ ಹೋಗುವ  ಕಥೆಯನ್ನು ಹಾಗೂ ರಾವಣ ಸೀತೆಯ ಸೌಂದರ್ಯಕ್ಕೆ ಮನಸೋತು ಆಕೆ ಬೇಕು ಎನ್ನುವಂತ ಕೆಟ್ಟ ಉದ್ದೇಶವನ್ನು ಇಟ್ಟುಕೊಂಡು ಆಕೆಯನ್ನು ಅಪಹರಿಸುವಂತಹ ಸಂದರ್ಭವನ್ನು ಅಮೋಘವಾಗಿ ಎಲ್ಲರ ಕಣ್ಣೆದುರಿಗೆ ಕಟ್ಟಿಕೊಟ್ಟರು.

-ರಕ್ಷಿತಾ ಶಿಶಿರ್



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top