ಬೆಂಗಳೂರು: ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಗೀತಾ ಜಯಂತಿ ಪ್ರಯುಕ್ತ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎದುರುಗಡೆ ಇರುವ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹದೇವರ ಸನ್ನಿಧಾನ (ಉತ್ತರಾದಿ ಮಠ)ದಲ್ಲಿ ಡಿಸೆಂಬರ್ 2 ರಿಂದ 20ರ ವರೆಗೆ ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ ಪ್ರತಿದಿನ ಸಂಜೆ 6-30 ರಿಂದ 7-30ರ ವರೆಗೆ ಭಗವದ್ಗೀತೆಯ ಪ್ರವಚನ ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಡಿಸೆಂಬರ್ 2 ರಿಂದ 4 : ಮ||ಶಾ||ಸಂ|| ಪುರಂದರಾಚಾರ್ಯ ಹಯಗ್ರೀವ (ಅಧ್ಯಾಯ-1 ರಿಂದ 3), ಡಿಸೆಂಬರ್ 5 ರಿಂದ 8 : ಮ||ಶಾ||ಸಂ|| ಕಲ್ಲಾಪುರ ಪವಮಾನಾಚಾರ್ (ಅಧ್ಯಾಯ-4 ರಿಂದ 7), ಡಿಸೆಂಬರ್ 9 ರಿಂದ 13 : ಮ||ಶಾ||ಸಂ||ವಿದ್ಯಾಧೀಶಾಚಾರ್ಯ ಗುತ್ತಲ (ಅಧ್ಯಾಯ-8 ರಿಂದ 11), ಡಿಸೆಂಬರ್ 14 ರಿಂದ 16 : ಮ||ಶಾ||ಸಂ|| ಹನುಮಂತಾಚಾರ್ಯ ಕುಲಕರ್ಣಿ (ಅಧ್ಯಾಯ-12 ರಿಂದ 14), ಡಿಸೆಂಬರ್ 17 ರಿಂದ 20 : ಮ||ಶಾ||ಸಂ|| ವಾದಿರಾಜಾಚಾರ್ಯ ಕರಣಂ (ಅಧ್ಯಾಯ-15 ರಿಂದ 18).
ಭಕ್ತಾದಿಗಳು ಈ ಎಲ್ಲಾ ದಿನಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಿ-ವಾಯು-ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕ್ರಮದ ನಿರ್ವಾಹಕರಾದ ಮ||ಶಾ||ಸಂ|| ಭೀಮಸೇನಾಚಾರ್ಯ ಅತನೂರು ವಿನಂತಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ