ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಗೀತಾ ಜಯಂತಿ ಪ್ರಯುಕ್ತ ಡಿಸೆಂಬರ್ 9 ರಿಂದ 12ರ ವರೆಗೆ ಪ್ರತಿದಿನ ಸಂಜೆ 6-00 ರಿಂದ 8-00ರ ವರೆಗೆ ಶ್ರೀರಾಮಪುರದ 4ನೇ ಅಡ್ಡರಸ್ತೆಯಲ್ಲಿರುವ ಗೀತಾ ಮಂದಿರದಲ್ಲಿ ವಿವಿಧ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6-00 ರಿಂದ 7-00) : ಡಿಸೆಂಬರ್ 9, ಸೋಮವಾರ - ಮಲ್ಲೇಶ್ವರದ ವಾಸವಿ ಗಾನಮಂಜರಿ ಸದಸ್ಯರಿಂದ ಭಜನೆ, ಡಿಸೆಂಬರ್ 10, ಮಂಗಳವಾರ - ರಾಜಾಜಿನಗರದ ಅಂಭ್ರಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಡಿಸೆಂಬರ್ 11, ಬುಧವಾರ - ಮಲ್ಲೇಶ್ವರದ ವಾಸವಿ ಕಲಾ ಶಾಲೆಯ ಸದಸ್ಯರಿಂದ ಭಜನೆ.
ಪ್ರವಚನ ಕಾರ್ಯಕ್ರಮ : ಡಿಸೆಂಬರ್ 9 ರಿಂದ 11ರ ವರೆಗೆ (ಪ್ರತಿದಿನ ಸಂಜೆ 7-00 ರಿಂದ 8-00). ವಿಷಯ : "ಗೀತಾ ಸಂದೇಶ". ಪ್ರವಚನಕಾರರು : ಮ||ಶಾ||ಸಂ|| ಡಾ|| ಭೀಮಸೇನ ಗುತ್ತಲ ಆಚಾರ್ಯ.
ಹರಿನಾಮ ಸಂಕೀರ್ತನೆ : ಡಿಸೆಂಬರ್ 12, ಗುರುವಾರ ಸಂಜೆ 6-30ಕ್ಕೆ : ಗಾಯನ : ಶ್ರೀ ಆನಂದ್ ದೇಶಪಾಂಡೆ ಮತ್ತು ಸಂಗಡಿಗರಿಂದ ಏರ್ಪಡಿಸಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ
.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ