ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರಿಕಲ್ಪನೆ ಆದೇಶ ಮತ್ತು ಮಾರ್ಗದರ್ಶನದನ್ವಯ ದೇವ-ದೇಶ-ದೇಹ ಮಂದಿರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಉದ್ದೇಶದೊಂದಿಗೆ, ಸ್ವಚ್ಛ ಭಾರತ್ ಅಭಿಯಾನಕ್ಕೆ ಪೂರಕವಾಗಿ ಕೃಷ್ಣಗೀತಾ ಸೇವಾ ವೃಂದವನ್ನು ರಚಿಸಿಕೊಂಡು ಸ್ವಚ್ಛತಾ ಕೆಲಸಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ನವೆಂಬರ್ 3ರ ಭಾನುವಾರ ಬೆಳಿಗ್ಗೆ 5.30ಕ್ಕೆ ಶ್ರೀಕೃಷ್ಣ ಮಠದ ಸನಿಹದಲ್ಲಿರುವ ಗೀತಾ ಮಂದಿರದಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ನಗರ ಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಗಾಂಧಿ ಆಸ್ಪತ್ರೆಯ ಡಾ. ಹರಿಶ್ವಂದ್ರ, ಡಾ. ವೇದವ್ಯಾಸ ತಂತ್ರಿ, ಮತ್ತಿತರರು ಪಾಲುಗೊಳ್ಳಲಿದ್ದಾರೆ.
ಭಾಗವಹಿಸುವ ಸಂಘ ಸಂಸ್ಥೆಗಳು:
* ನಗರಸಭೆ, ಉಡುಪಿ,
* ಪತಂಜಲಿ ಯೋಗ ಸಮಿತಿ, ಉಡುಪಿ.
* ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಉಡುಪಿ.
* ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ, ಮತ್ತು ಮಹಿಳಾ ಘಟಕ ಉಡುಪಿ ಜಿಲ್ಲೆ.
* ಶಿವಾಜಿ ಪಾರ್ಕ್ ನಿರ್ವಹಣ ಸಮಿತಿ.
* ಬಬ್ಬುಸ್ವಾಮಿ ದೇವಸ್ಥಾನ, ಇಂದಿರಾನಗರ.
* ಶ್ರೀ ಕೃಷ್ಣಧಾಮ, ಮಕ್ಕಳ ಭಗವದ್ಗೀತಾ ಪಠಣ ಸಮಿತಿ.
ಪ್ರತಿ ತಿಂಗಳ ಮೊದಲ ಭಾನುವಾರ ಬೆಳಗ್ಗೆ 6 ರಿಂದ 7ರ ವರೆಗೆ ಗೀತಾ ಮಂದಿರದಲ್ಲಿ ಈ ಅಭಿಯಾನ ಮುಂದುವರೆಯಲಿದೆ. ಆಸಕ್ತರು ಯಾವ ಊರಲ್ಲಿ ಬೇಕಾದರೂ ಗೀತಾ ಮಂದಿರ ಕೇಂದ್ರಿತ ಸೇವಾ ವೃಂದವನ್ನು ರಚಿಸಿಕೊಂಡು ಸ್ವಚ್ಛತಾ ಕಾರ್ಯಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರಬಹುದಾಗಿದೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಶ್ರೀಪುತ್ತಿಗೆ ಮಠದ ಶ್ರೀರಮಣಾಚಾರ್ಯ (8792158946)ರನ್ನು ಸಂಪರ್ಕಿಸಬಹುದಾಗಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ- ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ