'ವಿಜಯ ವಿಟ್ಠಲ' ಕೃತಿ- ಕೃಷ್ಣನಿಗೆ ಜ್ಞಾನದಾರತಿ

Upayuktha
0

ವಿಜಯದಾಸರ ಕುರಿತ ನುಡಿನಮನ ಉಡುಪಿಯಲ್ಲಿ ಬಿಡುಗಡೆ




ದಾಸವರೇಣ್ಯರಲ್ಲಿ ಒಬ್ಬರಾದ ಶ್ರೀ ವಿಜಯದಾಸರ ಆರಾಧನೆ ಸಂದರ್ಭದಲ್ಲಿ ಅವರ ಕೃತಿಗಳ ಒಳಾರ್ಥಗಳನ್ನು ಬಿಂಬಿಸುವ ವಿನೂತನ ಕೃತಿ 'ವಿಜಯ ವಿಟ್ಠಲ' ಉಡುಪಿಯಲ್ಲಿ ಬಿಡುಗಡೆಗೊಂಡಿದೆ.


ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ, ಪುತ್ತಿಗೆ ಮಠ ಮತ್ತು ಶ್ರೀ ಶ್ರೀನಿವಾಸ ಉತ್ಸವ ಬಳಗದ ಸಹಯೋಗದೊಂದಿಗೆ ಈ ಕೃತಿ ಬೆಳಕು ಕಂಡಿದೆ.


 

ಶ್ರೀ ವಿಜಯದಾಸರ ಕೃತಿಗಳಲ್ಲಿ ಪ್ರಸ್ಥಾನ ತ್ರಯ, ವಿಜಯದಾಸರು ಕಂಡಂತೆ ಉಡುಪಿ ಕೃಷ್ಣ, ವಿಜಯದಾಸರ ಕೃತಿಗಳಲ್ಲಿ ನೀತಿ, ಹರಿದಾಸರು ವರ್ಣಿಸಿದ ಶ್ರೀ ಕೃಷ್ಣ, ಉಡುಪಿ ಯಾತ್ರೆ ಆನಂದ ಯಾತ್ರೆ, ವಿಜಯದಾಸರ ಸುಳಾದಿಗಳು, ವಿಜಯದಾಸರ ಉಡುಪಿ ಯಾತ್ರೆ, ವಿಜಯದಾಶರ ತೀರ್ಥಕ್ಷೇತ್ರಗಳ ವರ್ಣನೆ, ವಿಜಯ ದಾಸರ ಶ್ರೀ ಶೈಲ ಸುಳಾದಿ, ವಿಜಯ ದಾಸರು ವರ್ಣಿಸಿದ ಮಧ್ವ ಸರೋವರ, ದಾಸ ಸಾಹಿತ್ಯಕ್ಕೆ ವಿಜಯ ದಾಶರ ಕೊಡುಗೆ ಹೀಗೆ 47 ಕನ್ನಡ ಲೇಖನಗಳು ಹಾಗೂ 3 ಆಂಗ್ಲ ಲೇಖನಗಳಿಂದ ಜ್ಞಾನ ಪೂರ್ಣ ಲೇಖನಗಳನ್ನೊಳಗೊಂಡ "ವಿಜಯ ವಿಟ್ಠಲ" 300ಕ್ಕೂ ಹೆಚ್ಚು ಪುಟಗಳ ಸುಂದರ ಪುಸ್ತಕ ಪ್ರಧಾನ ಸಂಪಾದಕರಾಗಿ ಡಾ. ಬಿ ಗೋಪಾಲಚಾರ್ಯರು ಮತ್ತು ಸಂಪಾದಕರಾಗಿ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿಯವರು ಉತ್ತಮ ಕಾರ್ಯ ಮಾಡಿದ್ದಾರೆ.


 

ವಿಜಯ ದಾಸರ ಕೃತಿಗಳಲ್ಲಿ ವೇದ ಉಪನಿಷತ್ತುಗಳ ಪ್ರಭಾವ, ಸೃಷ್ಟಿ ಪ್ರಕರಣ ಹರಿನಾಮಸ್ಮರಣೆ, ಸಂಸಾರ ಸಾರ ರಹಿತವಾದದ್ದು, ಮನಸ್ಸಿನ ನಿಯಂತ್ರಣದ ಬಗೆ, ಹರಿ ಸರ್ವೋತ್ತಮತ್ವ, ಜೀವನ ಅತಂತ್ರತೆ, ಸಂಸಾರದಲ್ಲಿದ್ದು ಭಗವಂತನ ಆರಾಧನೆಯ ಬಗೆ. ಉಡುಪಿಯ ಕೃಷ್ಣನ ಕ್ಷೇತ್ರದ ಮಹಿಮೆ ಉಡುಪಿಯ ದೇವಾಲಯಗಳು ಮತ್ತು ಅವುಗಳ ಕುರಿತಾದ ಕೀರ್ತನೆಗಳು, ವಿಜಯದಾಸರ ಕೀರ್ತನೆಗಳಲ್ಲಿ ಲೋಕ ನೀತಿ, ಗೋಪಿ ಚಂದನದಲ್ಲಿ ಶ್ರೀ ಕೃಷ್ಣ ಉಡುಪಿಗೆ ಬಂದ ಕುರಿತಾದ ಕೃತಿ ಅದರ ಹಿನ್ನೆಲೆ. ಪಾತ್ರರ ಸಂಗ ಯಾತ್ರೆಯನ್ನು ಮಾಡುವಾಗ ಉಡುಪಿಯ ಯಾತ್ರೆಯ ಮಹತ್ವ ಆ ಯಾತ್ರೆ ಯಾವ ರೀತಿಯಲ್ಲಿ ಆನಂದಮಯವಾಗಿರುವುದು ಎಂಬುದರ ಕರಿತು, ವಿಜಯ ದಾಸರು ರಚಿಸಿದ ಸುಳಾದಿಗಳ ಮಹತ್ವ ಪ್ರಾರ್ಥನಾ ಸುಳಾದಿ, ತೀರ್ಥಕ್ಷೇತ್ರಗಳ ಮಹಿಮೆಯ ಸುಳಾದಿಗಳು, ಉಪಸನಾ ಸುಳಾದಿಗಳ ಸವಿವರ ಲೆಖನಗಳು, ವಿಜಯ ದಾಸರು ತೀರ್ಥಕ್ಷೇತ್ರಯಾತ್ರೆಗಳ ಬಗೆಗೆ ಅದರಲ್ಲೂ ವಿಶೇಷವಾಗಿ ಉಡುಪಿ ಯಾತ್ರೆಯ ಬಗೆಗೆ ವರ್ಣಿಸಿದ ಸ್ತುತಿ ಮತ್ತು ಸುಳಾದಿಗಳನ್ನು ಬಹಳ ಸೊಗಸಾಗಿ ಬರೆದಿದ್ದಾರೆ ಅದರ ಕುರಿತಾದ ಲೇಖನಗಳು, ಕೃಷ್ಣನ ಕುರಿತಾಗಿ ವಿಜಯ ದಾಸರು ರಚಿಸಿದ ಅರಿಷ್ಟಾಪಹಾರಿ ಕೃಷ್ಣ ಅವನ ವಿಶೇಷತೆಯ ಕುರಿತಾದ ಲೇಖನ, ಉಡುಪಿ ಕ್ಷೇತ್ರದ ಶ್ರೀಕೃಷ್ಣ ಪರಮಾತ್ಮನ ಪ್ರಸಾದ ಮತ್ತದರ ವಿಶೇಷತೆಯ ಕುರಿತಾಗಿ ಲೇಖನ, “ನಿನ್ನ ಒಲುಮೆಯಿಂದ…. ಮೊದಲಾದ ಕೀರ್ತನೆಗಳಿಂದ ಲೋಕ ನೀತಿ ಮತ್ತು ಶಿಕ್ಷಣಗಳ ಕುರಿತು ಲೇಖನ, ವಿಜಯ ದಾಸರು ರಚಿಸಿದ ಶ್ರೀಶೈಲ ಕ್ಷೇತ್ರ ಸುಳಾದಿ, ವಿಜಯ ದಾಸರು ದಾಸ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ, ವಿಜಯರಾಯರ ಕವಚ, ಹೀಗೆ ಅನೇಕ ರೀತಿಯಿಂದ ವಿಜಯದಾಸರ ಕುರಿತು ಅನೇಕ ಲೇಖನಗಳಲ್ಲಿ ಅವರ ಸಮಗ್ರ ಜೀವನ ರಚನೆಗಳು ಉಡುಪಿ ಶ್ರೀಕೃಷ್ಣನೊಂದಿಗೆ ಅವರ ನಂಟಿನ ಬಗೆಗೆ ಉತ್ತಮವಾದ ಬೆಳಕನ್ನು ಚೆಲ್ಲುವುದರೊಂದಿಗೆ ವಿಜಯ ದಾಸರು ಮತ್ತು ಅವರ ಜೀವನದ ಸಮಗ್ರ ಪರಿಚಯ ಮಾಡಿಸುವ ಉತ್ತಮ ಗ್ರಂಥವಾಗಿದೆ.  ಇದರಲ್ಲಿ ಲೇಖನಗಳಲ್ಲಿ ಶ್ರೀಕೃಷ್ಣ ಭಕ್ತಿ ವಿಜಯದಾಸರ ಕುರಿತಾದ ಭಕ್ತಿ ಹರಿದಾಸ ಮಹಿಮೆ ಮಹತ್ವಗಳ ಬಗೆಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಜ್ಞಾನ ಮತ್ತು ಧರ್ಮ ಕಾರ್ಯಗಳ ಬೆಳಕನ್ನು ಕಾಣಬಹುದಾಗಿದೆ.  ದೇಶದ ಹಲವು ಭಾಗಗಳಲ್ಲಿ ನೆಲೆಸಿರುವ ಮಹಿಳೆಯರು ಪುರುಷರ ಎಲ್ಲ ಚಿಂತಕರು, ವಿದ್ವಾಂಸರು ತಮ್ಮ ವಿಚಾರಗಳನ್ನು ಅಭಿವ್ಯಕ್ತಿ ಪಡಿಸಿದ್ದಾರೆ ಜೊತೆಗೆ ಮುನ್ನುಡಿ ಬರೆದಿರುವ ಸಮ್ಮೇಳನ ಅಧ್ಯಕ್ಷರಾದ ಸಂಪಾದಕ ಡಾ ಎ ಬಿ ಶಾಮಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಉತ್ತಮ ವಿಚಾರಗಳನ್ನು ಲೇಖನಗಳನ್ನು ಆಯ್ದುಕೊಂಡು ಪುಸ್ತಕ ಸಂಪಾದನೆಯನ್ನು ಮಾಡಲಾಗಿದೆ. ಈ ರೀತಿಯ ಕೆಲಸಗಳು ಜನರ ಜ್ಞಾನವನ್ನು ಸಹೃದಯರೊಂದಿಗೆ ಹಂಚಿಕೊಳ್ಳಲು ಸಹಾಯಕವಾಗುತ್ತದೆ. ಜನ ಸಾಮಾನ್ಯರು ಕೂಡ ಇಂತಹ ಲೇಖನಗಳನ್ನು ಬರೆಯುವಾಗ ಅವರ ಜ್ಞಾವೃದ್ಧಿಯನ್ನು ಮಾಡಿಕೊಂಡು ಅಧ್ಯಯನ ಮಾಡಿ ಲೇಖನ ಬರೆದು ಅದನ್ನು ಪ್ರಸ್ತುತಿ ಪಡಿಸುವ ಬಗೆ ಅನನ್ಯವಾಗಿದೆ ಎಂದು ಕೃತಿಯ ಪ್ರಕಾಶಕರಾದ ವಿದ್ವಾನ್ ಎಂ ಪ್ರಸನ್ನ ಆಚಾರ್ಯ ಈ ಜ್ಞಾನ ಯಜ್ಞಕ್ಕೆ ತುಂಬು ಸಹಕಾರ ನೀಡಿದ್ದಾರೆ.


ಮೊಟ್ಟ ಮೊದಲ ಬಾರಿಗೆ ಇಂತಹದೊಂದು ದಾಸರ ಮತ್ತು ಕ್ಷೇತ್ರದ ನಂಟಿನ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ನಡೆಸುತ್ತಿರುವ ಸಮ್ಮೇಳನವು ಮುಂದೆ ಅನೇಕ ಹೊಸ ಹೊಸ ವಿಷಯಗಳ ಮತ್ತು ಉತ್ತಮ ಕಾರ್ಯಗಳಿಗೆ ನಾಂದಿ ಹಾಡಲಿದೆ ಆಯೋಜಕರಾದ ಶ್ರೀನಿವಾಸ ಉತ್ಸವ ಬಳಗದ ಟಿ ವಾದಿರಾಜರವರು ಆಶಯ ವ್ಯಕ್ತಪಡಿಸುತ್ತಾರೆ.


 ಕೃತಿಯ ವಿವರ

'ವಿಜಯ ವಿಠಲ'(ಹರಿದಾಸ ಸಾಹಿತ್ಯ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನ)

 ಪ್ರಧಾನ ಸಂಪಾದಕರು: ಡಾ.ಬಿ ಗೋಪಾಲಾಚಾರ್ಯ 

 ಸಂಪಾದಕರು: ಡಾ.ಗುರುರಾಜ ಪೋಶೆಟ್ಟಿಹಳ್ಳಿ 

 ಪ್ರಕಾಶಕರು: ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ,ಶ್ರೀ ಪುತ್ತಿಗೆ ಮಠ,ಉಡುಪಿ 

 ಸಹಕಾರ :ಶ್ರೀ ಶ್ರೀನಿವಾಸ ಉತ್ಸವ ಬಳಗ,ಬೆಂಗಳೂರು 

 ಪುಟ: 304 

 ಬೆಲೆ: 200 ರೂ

ಪ್ರತಿಗಳಿಗೆ ಸಂಪರ್ಕಿಸಿ: 973936 9621 


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top