ಆನಂದಮಯ ಜೀವನದ ಮಾರ್ಗ ತೋರಿಸುವ ಸನಾತನ ಸಂಸ್ಥೆಯ ನಡಿಗೆ

Upayuktha
0

ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ



ಮಾಜದಲ್ಲಿ ಆಧ್ಯಾತ್ಮಿಕ ಏಳ್ಗೆಗಾಗಿ ಹಗಲಿರುಳು ಶ್ರಮಿಸುವ ಸಂಸ್ಥೆ ಎಂದರೆ ಸನಾತನ ಸಂಸ್ಥೆ ! ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕಾರ್ಯನಿರತವಾಗಿದ್ದರೂ ರಾಷ್ಟ್ರ-ಧರ್ಮ ರಕ್ಷಣೆಯ ಕಾರ್ಯದಲ್ಲಿ ಸಹ ಸನಾತನವು ಮುಂದೆ ಸಾಗುತ್ತಿದೆ. ದುರ್ಲಭವಾದ ಮಾನವ ಜನ್ಮ ಸಾರ್ಥಕಗೊಳಿಸಿಕೊಳ್ಳಲು 'ಸಾಧನೆ’ ಕಲಿಸುತ್ತದೆ; ಮುಂದೆ ಬರುವ ಭಯಾನಕ ಆಪತ್ಕಾಲದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಉಪಾಯ ಯೋಜನೆಯನ್ನೂ ಹೇಳುತ್ತಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು 25 ವರ್ಷಗಳ ಹಿಂದೆ ನೆಟ್ಟಿರುವ 'ಸನಾತನ' ರೂಪಿ ಸಸಿ ಇಂದು ಒಂದು ವಟವೃಕ್ಷವಾಗಿದೆ. ಈ ವಟವೃಕ್ಷದ ನೆರಳಿನಲ್ಲಿ ಸಾವಿರಾರು ಜೀವಗಳು ತನು-ಮನ-ಧನ ಸಮರ್ಪಿಸಿ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಆದರ್ಶ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಅಂತಹ ಸನಾತನ ಸಂಸ್ಥೆಯ ಸಂಕ್ಷಿಪ್ತ ಪರಿಚಯ...


ಹಿಂದೂ ಧರ್ಮದ ತೇಜಸ್ವಿ ಪ್ರಸಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಮಾರ್ಚ್ 22, 1999 ರಂದು ಸನಾತನ ಸಂಸ್ಥೆಯ ಸ್ಥಾಪನೆ ಮಾಡಿದರು. ಸನಾತನ ಸಂಸ್ಥೆ ಹಿಂದೂ ಧರ್ಮದ ತೇಜಸ್ವಿ ಪ್ರಸಾರ ಮಾಡುತ್ತಿದೆ. ಇದರಿಂದ ಸನಾತನಕ್ಕೆ ಬಹಳ ವಿರೋಧವನ್ನೂ ಸಹಿಸಬೇಕಾಯಿತು, ಇಂದಿಗೂ ಸಹಿಸುತ್ತಿದೆ. ಒಳ್ಳೆಯ ಕಾರ್ಯಕ್ಕೆ ವಿರೋಧವಾಗುತ್ತದೆ. ಹಿಂದೆ ಸಂತಪರಂಪರೆ ಪಡೆದಿರುವ ಅನುಭವವನ್ನು ಸನಾತನವೂ ಅನುಭವಿಸಿದೆ. ಇಂತಹ ಈ ಅಗ್ನಿದಿವ್ಯದಿಂದ ಬೆಂದು ಹೊರಬಂದು, ಹೊಳೆಯುತ್ತಾ ಮುಂದೆ ಸಾಗಿ ರಜತ ಮಹೋತ್ಸವದ ಮೈಲುಗಲ್ಲು ತಲುಪಿದೆ, ಇದು ಒಂದು ದಿವ್ಯವೇ ಆಗಿದೆ.


ವಿಶ್ವಕಲ್ಯಾಣದ ಧ್ಯಾಸ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಅಂತರಾಷ್ಟ್ರೀಯ ಕೀರ್ತಿಯ ಸಂಮೋಹನ ಚಿಕಿತ್ಸಾ ತಜ್ಞ ! 1971 ರಿಂದ 1978 ಈ ಕಾಲಾವಧಿಯಲ್ಲಿ ಅವರು ಇಂಗ್ಲೆಂಡ್ ನಲ್ಲಿ 'ಕ್ಲಿನಿಕಲ್ ಹಿಪ್ನೋತೆರೆಫೀ' (ವೈದ್ಯಕೀಯ ಸಂಮೋಹನ ಚಿಕಿತ್ಸೆ ) ಈ ವಿಷಯದಲ್ಲಿ ಆಳವಾದ ಸಂಶೋಧನೆ ಮಾಡಿದ್ದಾರೆ. ವೈದ್ಯಕೀಯ ಶಾಸ್ತ್ರಕ್ಕಿಂತಲೂ ಅಧ್ಯಾತ್ಮಶಾಸ್ತ್ರ ಪ್ರಗತಿಪರ ಶಾಸ್ತ್ರವಾಗಿದೆ, ಇದು ಗಮನಕ್ಕೆ ಬಂದ ನಂತರ ಪರಾತ್ಪರ ಗುರು ಡಾ. ಆಠವಲೆ ಇವರು ವೈದ್ಯಕೀಯ ಉದ್ಯೋಗ ನಿಲ್ಲಿಸಿ ಸಂತರ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದರು. ಆ ಸಮಯದಲ್ಲಿ ಅವರು ಅಧ್ಯಾತ್ಮದಲ್ಲಿನ ಅಧಿಕಾರಿ ಸಂತರಿಂದ ಅಧ್ಯಾತ್ಮ ಮತ್ತು ಧರ್ಮದ ಅಭ್ಯಾಸ ಮಾಡಿದರು. ಸ್ವತಹ ಪ್ರತ್ಯಕ್ಷ ಸಾಧನೆ ಮಾಡಿದರು. ಮುಂದೆ ಅವರಿಗೆ ಇಂದೂರು ನಿವಾಸಿ ಹಿರಿಯ ಸಂತ ಪ.ಪೂ. ಭಕ್ತರಾಜ ಮಹಾರಾಜರು ಗುರುವಾಗಿ ಲಭಿಸಿದರು. ಅವರ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಸಹ ಅಧ್ಯಾತ್ಮದಲ್ಲಿ ಅಧಿಕಾರಿ ಸಂತರಾದರು. ಸನಾತನ ಹಿಂದೂ ಧರ್ಮದಲ್ಲಿ ಈ ಅಧ್ಯಾತ್ಮ 'ಶಾಸ್ತ್ರ' ಸ್ವರೂಪದಲ್ಲಿ ಎಂದರೆ 'ಸೈನ್ಸ್' ಎಂದು ಸ್ಥಾಪಿತವಾಗಬೇಕೆಂದು ಅವರು ತಮ್ಮ ಸಂಪೂರ್ಣ ಜೀವನ ಸಮರ್ಪಿತಗೊಳಿಸಿದರು. ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮದ ಪ್ರಸಾರ ಮಾಡುವಾಗಲೇ ಅವರು ಸಾಧಕರಿಗೆ 'ಗುರುಕೃಪಾಯೋಗಾನುಸಾರ ಸಾಧನೆ' ಕಲಿಸಿದರು.


ಗುರುಕೃಪಾಯೋಗಾನುಸಾರ ಸಾಧನೆ

ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗ ಈ ಮೂರು ಯೋಗಗಳ ಸಂಗಮವಾಗಿರುವ  'ಗುರುಕೃಪಾಯೋಗ' ಈ ಸಾಧನಾಮಾರ್ಗವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ನಿರ್ಮಿಸಿದ್ದಾರೆ. ಸನಾತನದ ಎಲ್ಲಾ ಸಾಧಕರು ಗುರುಕೃಪಾಯೋಗಾನುಸಾರ ಸಾಧನೆ ಮಾಡುತ್ತಾರೆ. ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ನವೆಂಬರ್ 2024 ವರೆಗೆ 131 ಸಾಧಕರು ಸಂತ ಪದವಿಯನ್ನು ಪಡೆದಿದ್ದಾರೆ. ಹಾಗೂ 1 ಸಾವಿರಗಿಂತಲೂ ಹೆಚ್ಚಿನ ಸಾಧಕರು ಸಂತತ್ವದ ದಿಶೆಯಲ್ಲಿ ಮುನ್ನಡೆಯುತ್ತಿದ್ದಾರೆ. ಇದು ಒಂದು ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಕ್ರಾಂತಿಯೇ ಆಗಿದೆ.


ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ!

‘ಷಡ್ರಿಪುಗಳ ಮೇಲೆ ನಿಯಂತ್ರಣ’ ಮತ್ತು 'ಚಿತ್ತಶುದ್ಧಿ' ಈ ಕುರಿತು ಅನೇಕ ಧರ್ಮಗ್ರಂಥಗಳಲ್ಲಿ ವಿಶ್ಲೇಷಣೆ ಇದೆ. ಈ ಎರಡನ್ನೂ ಸಾಧಿಸುವ ಪ್ರಕ್ರಿಯೆ ಎಂದರೆ 'ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ !' ಸಾಧನೆ ಒಳ್ಳೆಯ ರೀತಿ ಆಗಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಈ ಪ್ರಕ್ರಿಯೆಯನ್ನು ಸಾಧಕರಿಗೆ ಕಲಿಸಿದ್ದಾರೆ.  ಇದರಿಂದಾಗಿ ಸನಾತನದ ಸಾವಿರಾರು ಸಾಧಕರು ಇದರ ಲಾಭವನ್ನು ಪಡೆದಿದ್ದಾರೆ.

ಸನಾತನ ಸಂಸ್ಥೆಯ 'ಸಾಧನಾ ಸತ್ಸಂಗ'ದಲ್ಲಿ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಉಚಿತವಾಗಿ ಕಲಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಜೀವನದಲ್ಲಿನ ಒತ್ತಡ ಕಡಿಮೆ ಆಗುತ್ತದೆ. ಒತ್ತಡ ದೂರವಾಗುವುದರಿಂದ ಮನಸ್ಸು ಆನಂದಿಯಾಗುತ್ತದೆ. ಜೀವನದ ಕಡೆಗೆ ನೋಡುವ ದೃಷ್ಟಿಕೋನ ಸಕಾರಾತ್ಮಕವಾಗುತ್ತದೆ. ಆತ್ಮವಿಶ್ವಾಸ ವೃದ್ಧಿಯಾಗುತ್ತದೆ, ಹೀಗೆ ಅನೇಕ ಲಾಭಗಳನ್ನು ಸಾಧಕರು ಪಡೆದಿದ್ದಾರೆ. ಪರಿಣಾಮವಾಗಿ ಸಾಧಕರ ವ್ಯಕ್ತಿತ್ವ ವಿಕಾಸವೂ ಆಗುತ್ತದೆ.


ಸಮರ್ಪಿತ ಸಾಧಕರ ಪಡೆ

ಇಂದು ಪ್ರತಿಯೊಬ್ಬರೂ ಆನಂದದ ಹುಡುಕಾಟದಲ್ಲಿ ಇದ್ದಾರೆ. ಈ ಶಾಶ್ವತ ಆನಂದ ಕೇವಲ ಸಾಧನೆಯಿಂದಲೇ ದೊರೆಯುತ್ತದೆ. ಅದಕ್ಕಾಗಿ ಸನಾತನದಿಂದ ಗ್ರಾಮ ಗ್ರಾಮಗಳಲ್ಲಿ 'ಸಾಧನಾ ಸತ್ಸಂಗ', 'ಯುವ ಸಾಧನಾ ಸತ್ಸಂಗ', 'ಬಾಲಸಂಸ್ಕಾರ ವರ್ಗ' ಹಾಗೂ ವಿವಿಧ ಆಧ್ಯಾತ್ಮಿಕ ವಿಷಯದ ಕುರಿತು 'ಪ್ರವಚನಗಳು' ಆಯೋಜಿಸಲಾಗುತ್ತದೆ. ಸಾಧನೆಯ ಮೂಲಕ ಈಶ್ವರೀ ಚೈತನ್ಯ ದೊರೆಯುತ್ತದೆ, ಚೈತನ್ಯದಿಂದ ಪ್ರಭಾವಿ ಕಾರ್ಯಗಳಾಗುತ್ತವೆ. ಸನಾತನದ ಬಳಿ ಈ ರೀತಿ ಸಮರ್ಪಿತ ಸಾಧಕರ ಪಡೆಯ ನಿರ್ಮಾಣವಾಗುತ್ತಿದೆ. ಸಾವಿರಾರು ಸಾಧಕ ಕುಟುಂಬಗಳು ಸನಾತನದ ಜೊತೆಗೆ ಜೋಡಣೆ ಆಗಿವೆ. ಅನೇಕ ಉನ್ನತ ಶಿಕ್ಷಣ ಪಡೆದಿರುವ ಸಾಧಕರು ಸ್ವಇಚ್ಛೆಯಿಂದ ನೌಕರಿ ಉದ್ಯೋಗವನ್ನು ತ್ಯಜಿಸಿ ಧರ್ಮಕಾರ್ಯಕ್ಕಾಗಿ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದಾರೆ. ಇದು ಇಂದಿನ ಮಾಯಾ ಜಗತ್ತಿನಲ್ಲಿನ ಒಂದು ಚಮತ್ಕಾರವೇ ಏನ್ನಬಹುದು.


ಸನಾತನದ ಆಶ್ರಮ!

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು, ಸಮಷ್ಠಿ ಸಾಧನೆ ಎಂದು ಹಿಂದೂ ಧರ್ಮದ ಪೂರ್ಣಕಾಲೀನ ಕಾರ್ಯ ಮಾಡಲು ಇಚ್ಚಿಸುವ ಸಾಧಕರಿಗಾಗಿ ಆಶ್ರಮದ ನಿರ್ಮಾಣ ಮಾಡಿದ್ದಾರೆ. ಇಂದು ರಾಜಕಾರಣಿಗಳು ಸಮಾಜವನ್ನು ಜಾತಿ ಜಾತಿಗಳಲ್ಲಿ ವಿಭಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸನಾತನ ಆಶ್ರಮದಲ್ಲಿ ಜಾತ್ಯಾತೀತತೆ ಎದ್ದು ಕಾಣುತ್ತದೆ. ಇಂದು ಸನಾತನದ ಆಶ್ರಮ ಎಂದರೆ ಈಶ್ವರೀ ರಾಜ್ಯದ ಪುಟ್ಟ ಪ್ರತಿಕೃತಿಯಾಗಿದೆ. ಗೋವಾದಲ್ಲಿನ ಸನಾತನ ಆಶ್ರಮ, ಇದು ಸನಾತನ ಸಂಸ್ಥೆಯ ಮುಖ್ಯಾಲಯವಾಗಿದೆ. ಈ ಸನಾತನ ಆಶ್ರಮ ಪುರಿ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಾಮಿ ನಿಶ್ಚಲಾನಂದ ಸರಸ್ವತಿ, ಹಾಗೂ ಕಾಂಚಿ ಕಾಮಕೋಟಿ ಪೀಠಾಧೀಶ್ವರ ಶ್ರೀ ಸ್ವಾಮಿ ಜಯೇಂದ್ರ ಸರಸ್ವತಿ ಇವರ ಪಾದಸ್ಪರ್ಶದಿಂದ ಪಾವನವಾಗಿದೆ. ದೇಶವಿದೇಶದ ಅನೇಕ ಸಂತರು, ಮಹಂತರು, ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಹಿರಿಯರು, ಸಂಶೋಧಕರು, ಹಿಂದೂ ಧರ್ಮಕ್ಕಾಗಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರತವಾಗಿರುವ ಧರ್ಮನಿಷ್ಠರು, ಹಿಂದುತ್ವನಿಷ್ಠರು ಮುಂತಾದವರು ನಿರಂತರವಾಗಿ ಸನಾತನ ಆಶ್ರಮಕ್ಕೆ  ಭೇಟಿ ನೀಡಲು  ಬರುತ್ತಾರೆ.


ಅಮೂಲ್ಯ ಗ್ರಂಥಸಂಪತ್ತಿನ ನಿರ್ಮಾಣ!

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಅನೇಕ ವರ್ಷದ ತಪಸ್ಸೆಂದರೆ ಅಮೂಲ್ಯವಾದ 'ಸನಾತನದ ಗ್ರಂಥ ಸಂಪತ್ತು' ಆಗಿದೆ. ಈ ಗ್ರಂಥಗಳ ವೈಶಿಷ್ಟ್ಯ ಎಂದರೆ ಗ್ರಂಥಗಳಲ್ಲಿ ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಸನಾತನ ಧರ್ಮದಲ್ಲಿನ ಅಧ್ಯಾತ್ಮದ ಶಿಕ್ಷಣ ನೀಡಲಾಗಿದೆ. ಏಪ್ರಿಲ್ 2024 ವರೆಗೆ 13 ಭಾರತೀಯ ಭಾಷೆಗಳಲ್ಲಿ ವಿವಿಧ ಆಧ್ಯಾತ್ಮಿಕ ವಿಷಯಗಳ ಕುರಿತು 365 ಗ್ರಂಥಗಳ 96 ಲಕ್ಷ 54 ಸಾವಿರ ಪ್ರತಿ ಪ್ರಕಾಶನಗೊಂಡಿವೆ. ಇನ್ನೂ 5 ಸಾವಿರ ಗ್ರಂಥಗಳು ಪ್ರಕಾಶಿತಗೊಳಿಸಬಹುದು. ಅಷ್ಟು ವಿಷಯಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಸಂಗ್ರಹಿಸಿಟ್ಟಿದ್ದಾರೆ. ಮುಂದಿನ ಅನೇಕ ಪೀಳಿಗೆಗಳಿಗೆ ಅಧ್ಯಾತ್ಮದಲ್ಲಿ ಹೊಸ ವಿವಿಧ ವಿಷಯಗಳ ಕುರಿತು ಜ್ಞಾನ ದೊರೆಯಬೇಕು, ಈ ಉನ್ನತ ಉದ್ದೇಶದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಅನಾರೋಗ್ಯದಲ್ಲಿದ್ದರೂ ಗ್ರಂಥ ಲೇಖನದ ಕಾರ್ಯ ನಿರಂತರವಾಗಿ ನಡೆಸುತ್ತಿದ್ದಾರೆ.


ವಿಶ್ವಕಲ್ಯಾಣಕ್ಕಾಗಿ ಯಜ್ಞಯಾಗ

ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸನಾತನ ಸಂಸ್ಥೆಯ ಸಹಭಾಗ ಮುಖ್ಯವಾಗಿ ಆಧ್ಯಾತ್ಮಿಕ ಸ್ವರೂಪದ್ದಾಗಿದೆ. ವಿಶ್ವಕಲ್ಯಾಣ ಹಾಗೂ ಈಶ್ವರೀ ರಾಜ್ಯದ ಸ್ಥಾಪನೆಯಲ್ಲಿ ಬರುವ ಅಡಚಣೆಗಳು ದೂರವಾಗಬೇಕೆಂದು ಸನಾತನದ ಆಶ್ರಮದಲ್ಲಿ ಇಲ್ಲಿಯವರೆಗೆ 450 ಕ್ಕೂ ಹೆಚ್ಚಿನ ಯಜ್ಞ ಯಾಗಗಳು ಮತ್ತು ಧಾರ್ಮಿಕ ವಿಧಿಗಳನ್ನು ನಡೆಸಲಾಗಿದೆ. ಇದರಲ್ಲಿ ಮುಖ್ಯವಾಗಿ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ, ಉಚ್ಚಿಷ್ಟ ಗಣಪತಿ ಯಜ್ಞ, ಚಂಡಿಯಾಗ, ಧನ್ವಂತರಿಯಾಗ, ಸಂಜೀವಿನಿ ಹೋಮ, ಪಂಚಮಹಾಭೂತಯಾಗ ಮುಂತಾದ ಯಜ್ಞಗಳ ಸಮಾವೇಶವಿದೆ.


ಅದ್ವಿತೀಯ ಯೋಗದಾನದಕ್ಕೆ ಪುರಸ್ಕಾರ

ಸನಾತನದ ಈ ದೈವೀ ಕಾರ್ಯದ ಕಡೆಗೆ  ದೇಶವಿದೇಶದಲ್ಲಿ ಕೂಡ ಗಮನಹರಿಸಲಾಗುತ್ತಿದೆ. ಸನಾತನ ಸಂಸ್ಥೆಯು ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಇವುಗಳಿಗೆ ಅಂತರಾಷ್ಟ್ರೀಯ ಪ್ರಸಾರಕ್ಕಾಗಿ ನೀಡಿರುವ ಅದ್ವಿತೀಯ ಕೊಡುಗೆಯ ಕುರಿತು ಇತ್ತೀಚಿಗೆ ಎಂದರೆ ಜೂನ್ 5. 2024 ರಂದು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ ಫ್ರಾನ್ಸಿನ ಸೀನೆಟಿನಲ್ಲಿ (ಸಂಸತ್ತಿನಲ್ಲಿ) ‘ಭಾರತ ಗೌರವ ಪ್ರಶಸ್ತಿ' ಪ್ರದಾನಿಸಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ವತಿಯಿಂದ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀ ಸತ್ ಶಕ್ತಿ ಶ್ರೀಮತಿ ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್ ಶಕ್ತಿ ಶ್ರೀಮತಿ ಅಂಜಲಿ ಗಾಡಗೀಳ ಇವರು ಈ ಪ್ರಶಸ್ತಿ ಸ್ವೀಕರಿಸಿದರು.


ಮುಗಿಲೆತ್ತರಕ್ಕೆ ಸನಾತನ ಧ್ವಜ!

ಕಳೆದ ಕೆಲವು ಸಮಯದಲ್ಲಿ ಸನಾತನದ ಮೇಲೆ ಬಂದಿರುವ ವಿವಿಧ ಸಂಕಷ್ಟಗಳು ನೋಡಿದರೆ, ಸನಾತನದ ವಟವೃಕ್ಷ ನಿಂತಿರುವುದು, ಒಂದು ದೈವೀ ಅನುಭೂತಿಯೇ ಆಗಿದೆ. ಭಗವಂತನ ಕೃಪೆ, ಸಂತರು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಶೀರ್ವಾದದಿಂದ ಸನಾತನ ಸಂಸ್ಥೆಯು ಅಧ್ಯಾತ್ಮದ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಹಾರಿದೆ. 25  ವರ್ಷಗಳ ಹಿಂದೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಒಬ್ಬರೇ ಆರಂಭಿಸಿರುವ ಕಾರ್ಯ ಇಂದು ದೇಶವಿದೇಶದ ವರೆಗೆ ತಲುಪಿದೆ. ಸಾವಿರಾರು ಸಾಧಕರು ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುತ್ತಿದ್ದಾರೆ. 2 ಸಾವಿರಕ್ಕಿಂತಲೂ ಹೆಚ್ಚಿನ ಸಾಧಕರು ಪೂರ್ಣಾವಧಿ ಧರ್ಮಪ್ರಚಾರದ ಸೇವೆಯನ್ನು ತಳಮಳದಿಂದ ಮಾಡುತ್ತಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top