ಧರ್ಮಸ್ಥಳ: ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಬಳ್ನಾಡು ಜನ ಜಾಗೃತಿ ವೇದಿಕೆಯ ಕಲಾವಿದರು ಧರ್ಮಸ್ಥಳದ ಎಸ್ಡಿಎಂ ಪ್ರೌಢಶಾಲಾ ಆವರಣದ ವಸ್ತು ಪ್ರದರ್ಶನ ಸಭಾಂಗಣದಲ್ಲಿ ಪ್ರಸ್ತುತಪಡಿಸಿದ ‘ಜನಜಾಗೃತಿ ಧರ್ಮ ಕ್ಷೇತ್ರ’ ಯಕ್ಷಗಾನ ನೆರೆದಿದ್ದ ಭಕ್ತಾದಿಗಳ ಪ್ರಶಂಸೆಗೆ ಪಾತ್ರವಾಯಿತು.
ಶಿವ ಪಾರ್ವತಿಯು ಭೂ ಲೋಕದಲ್ಲಿ ಏನೇನು ಬದಲಾವಣೆಗಳು ಆಗುತ್ತಿವೆ ಎನ್ನುವುದನ್ನು ನೋಡುವುದಕ್ಕೆ ಕೈಲಾಸದಿಂದ ಭೂಲೋಕಕ್ಕೆ ಮಾನವನ ರೂಪದಲ್ಲಿ ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಶಿವನು ಪಾರ್ವತಿಯ ಬಳಿ ಏನು ಆಗುತ್ತಿದೆ ಎಂದು ಕೇಳಿದಾಗ ಭೂಲೋಕೊದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೆಟ್ಟ ದಾರಿ ಹಿಡಿಯುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಎಂದು ಪಾರ್ವತಿ ಹೇಳುತ್ತಾಳೆ.
ಮಾನವರು ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಅದರ ಜೊತೆಗೆ ಹೆಂಡವನ್ನು ಕುಡಿದು, ಕುಡಿದ ಅಮಲಿನಲ್ಲಿ ಹೆಂಡತಿ ಮಕ್ಕಳಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದಾರೆ. ಇದರಿಂದಾಗಿ ಕೆಲವು ಮನೆಗಳು ನಾಶವೇ ಆಗುವ ಸಾದ್ಯತೆಯಿದೆ ಎಂದು ಪಾರ್ವತಿಯ ಮಾತನ್ನು ಸ್ವತಃ ತಾನೇ ಅರಿಯುವ ಶಿವ ಪಾರ್ವತಿಗೆ ನೀನೆ ಇದಕ್ಕೆ ಪರಿಹಾರ ಹುಡುಕಬೇಕು ಎಂದು ಹೇಳುತ್ತಾನೆ.
ಆ ಸಂದರ್ಭದಲ್ಲಿ ಹೆಂಡಾಸುರರನ್ನು ಕೊಂದರೆ ಇದಕ್ಕೆ ಪರಿಹಾರ ಸಿಗುತ್ತದೆ ಎಂದು ಪಾರ್ವತಿಯು ಹೇಳುತ್ತಾಳೆ. ಯಾವುದು ಕೆಟ್ಟದ್ದು ಎಂದು ಅನ್ನಿಸುತ್ತದೆಯೋ ಅದನ್ನು ಯಾರು ಸೇವಿಸುತ್ತಾರೋ ಅವರು ಹೊರಗಿನ ಜಗತ್ತಿಗೆ ಕೆಟ್ಟವರಾಗಿ ಕಾಣುತ್ತಾರೆ ಆ ಕೆಟ್ಟದಾಗಿ ರಕ್ಕಸ ರೂಪದಲ್ಲಿರುವ ಹೆಂಡಾಸುರರನ್ನೇ ವಧಿಸಿಬಿಡೋಣ ಎಂದು ಶಿವಪಾರ್ವತಿಯರು ಉಪಾಯವನ್ನು ಮಾಡುತ್ತಾರೆ.
ನಂತರ ಹೆಂಡಾಸುರ ರಂಗ ಸ್ಥಳಕ್ಕೆ ಪ್ರವೇಶಿಸುತ್ತಾನೆ. ಹೆಂಡಾಸುರನು ಯಾವ ರೀತಿ ಮನೆ ಮನೆಗಳಲ್ಲಿ ದ್ವಂಸ ಮಾಡುವುದೆಂದು ಯೋಚನೆಗಳನ್ನು ಮಾಡುತ್ತಾ ಸಾಗುತ್ತಾನೆ. ನಂತರದ ದೃಶ್ಯದಲ್ಲಿ ಶಿವನು ಮಾನವನ ರೂಪದಲ್ಲಿ ಭೂಮಿಗೆ ಆಗಮಿಸುತ್ತಾನೆ. ಆ ಸಂದರ್ಭದಲ್ಲಿ ಧರ್ಮಸ್ಥಳದ ಡಾ.ಡಿ. ವಿರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ 'ಮದ್ಯವರ್ಜನ ಶಿಬಿರದ' ಬಗ್ಗೆ ಅರಿವನ್ನು ಮೂಡಿಸುವ ವಿಶೇಷ ಪ್ರಯತ್ನ ಮಾಡಿದರು.
ಯಕ್ಷಗಾನದ ರಚನೆಯು ಪದ್ಮನಾಭ ಜೈನ್ ಸಾಹಿತ್ಯದಲ್ಲಿ ಮೂಡಿಬಂದಿದೆ. ಭಾಗವತಿಕೆಯಲ್ಲಿ ಪದ್ಮನಾಭ ಪಳ್ಳಿಗದ್ದೆ ಬಿಳಿನೆಲೆ, ಚೆಂಡೆಯಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ ಸಹಕರಿಸಿದರು, ಬಾಲಕೃಷ್ಣ ಬೋಮ್ಮಾರು ಅವರು ಮದ್ದಳೆಗೆ ಸಹಕರಿಸಿದರು.
ತೆಂಕು ತಿಟ್ಟಿನಲ್ಲಿ ನಡೆದ ಯಕ್ಷಗಾನ ಕುಣಿತ, ವೇಷ ಭೂಷಣ ಉತ್ತಮವಾಗಿತ್ತು. ಅದರಲ್ಲೂ 'ರಮಣನೇ ಕೇಳಿಗ ಹೆಂಡಾಸುರನನ್ನು ಕೊಲ್ಲು' ಎನ್ನುವ ಭಾಗವತಿಕೆ ಕರತಾಳಕ್ಕೆ ಭಾಜನವಾಯಿತು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ