MRPL ಉದ್ಯೋಗಿಗಳಿಗೆ ಎಐಎಂಐಟಿ ಯಿಂದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

Upayuktha
0


ಮಂಗಳೂರು: ನವೆಂಬರ್ 26-27ರಂದು ಎರಡು ದಿನಗಳ MRPL ನ ಉದ್ಯೋಗಿಗಳಿಗೆ ಎರಡು ದಿನಗಳ ಆಡಳಿತಾತ್ಮಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು AIMIT,  ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ಸ್ನಾತಕೋತ್ತರ ವ್ಯವಹಾರ ಆಡಳಿತ ವಿಭಾಗವು ನವೆಂಬರ್ 26, 2024 ರಂದು AIMIT ಬೀರಿಯಲ್ಲಿ ನಡೆಸಿತು.


ಉದ್ಘಾಟನಾ ಸಮಾರಂಭವನ್ನು AIMIT ನಿರ್ದೇಶಕ ಡಾ (ಫಾದರ್) ಕಿರಣ್ ಕೋಥ್ SJ ನೆರವೇರಿಸಿದರು. ಸಂದೇಶ್ ಜೆ ಕುಟಿನ್ಹೊ ಪ್ರಭು-  (ಸಿಜಿಎಂ ಎಚ್‌ಆರ್, ಎಂಆರ್‌ಪಿಎಲ್), ಡಾ ರಜನಿ ಸುರೇಶ್- ಸ್ಕೂಲ್ ಆಫ್ ಬ್ಯುಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್ ಡೀನ್, ರಿತು ರಾಜ್-  ಮ್ಯಾನೇಜರ್ ಎಚ್‌ಆರ್; ಮತ್ತು ಶ್ರೀಮತಿ ಪೂನಂ ಶೆಟ್ಟಿ- ತರಬೇತಿ ಸಹಾಯಕರು, HR MRPL, ನೌಕರರು, ಅಧ್ಯಾಪಕರು, ಆಡಳಿತ ಮತ್ತು ಸಹಾಯಕ ಸಿಬ್ಬಂದಿ ಭಾಗವಹಿಸಿದ್ದರು.


ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಡಾ ಆನೆಟ್ ಮಾಬೆನ್ ನಿರೂಪಿಸಿದರು. ಡೀನ್ ಡಾ.ರಜನಿ ಸುರೇಶ್ ಅವರು ಸ್ವಾಗತಿಸಿದರು. ಬಳಿಕ ದೀಪ ಬೆಳಗಿಸಲಾಯಿತು. ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ನಿರ್ದೇಶಕ ಡಾ (ಫಾದರ್) ಕಿರಣ್ ಕೋಥ್ SJ, AIMIT ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆಯು (AI) ಕೆಲಸದ ಸಂಕೀರ್ಣ ಜಗತ್ತನ್ನು ಪರಿವರ್ತಿಸಲಿರುವ ಕಾರಣ  ಅದರ ಕಲಿಕೆಯ ಅಗತ್ಯವನ್ನು ಒತ್ತಿ ಹೇಳಿದರು.


ತರಬೇತಿ ಮತ್ತು ಕಲಿಕೆಯು ಉದ್ಯೋಗಕ್ಕೆ ಸಿದ್ಧವಾಗಿರಲು ಮತ್ತು ಉದ್ಯೋಗಕ್ಕೆ ಯೋಗ್ಯವಾಗಿರಲು ಮೆಟ್ಟಿಲಾಗಬಹುದು. ಸ್ಪರ್ಧಾತ್ಮಕವಾಗಿ ಉಳಿಯಲು, ವಿಮರ್ಶಾತ್ಮಕ ಚಿಂತನೆ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು. ಮತ್ತು ವ್ಯವಸ್ಥಾಪಕ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು ಒದಗಿಸಿದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಭಾಗವಹಿಸಿದ ನೌಕರರನ್ನು ಪ್ರೋತ್ಸಾಹಿಸಿದರು.


ಬೆಳಗಿನ ಅಧಿವೇಶನವನ್ನು ಎಂಆರ್‍‌ಪಿಎಲ್‌ ನ ಸಂದೇಶ್ ಜೆ ಕುಟಿನ್ಹೋ ಮತ್ತು ರಿತು ರಾಜ್ ನಿರ್ವಹಿಸಿದರು. ಇಬ್ಬರೂ ಉದ್ಯೋಗಿಗಳ ತರಬೇತಿ ಮತ್ತು ಅಭಿವೃದ್ಧಿಯಲ್ಲಿ ಅತ್ಯಂತ ಪರಿಣತರು. ಅಪರಾಹ್ನದ ಸೆಷನ್‌ಗಳಲ್ಲಿ- "ಲೀಡಿಂಗ್ ಎ ವ್ಯಾಲ್ಯೂ ಡ್ರೈವನ್ ಲೈಫ್" ಅನ್ನು ರೆವ್ ಫ್ರಾ ರೋಶನ್ ಪಿರೇರಾ ಎಸ್‌ಜೆ ನಡೆಸಿಕೊಟ್ಟರು. ಮತ್ತು "ಮೌಲ್ಯ ಆಧಾರಿತ ಸಂಸ್ಥೆ ಸಂರಚನೆ" ಕುರಿತು ರೆವರೆಂಡ್ ಫಾದರ್ ಬಾಲರಾಜು ಎಸ್‌ ಜೆ. ಆಳವಾದ ಮತ್ತು ಮೌಲಿಕವಾದ ಮಾಹಿತಿ ನೀಡಿದರು.


ತರಬೇತಿ ಅವಧಿಯ 2 ನೇ ದಿನ ಪೂರ್ವಾಹ್ನ "ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು" ಮತ್ತು "ಎಂಗೇಜ್‌ಮೆಂಟ್‌ನಿಂದ ಫ್ಲೋ-ಎಂಬ್ರೇಸಿಂಗ್ ಅಗೈಲ್" ಎಂಬ ವಿಷಯಗಳ ಬಗ್ಗೆ  ಡಾ ರಜನಿ ಸುರೇಶ್ ಮತ್ತು ಡಾ ಆನೆಟ್ ಮಾಬೆನ್ ಉಪನ್ಯಾಸ ನೀಡಿದರು. ಉದ್ಯೋಗಿಗಳಲ್ಲಿ ತೃಪ್ತಿ, ಪಾಲ್ಗೊಳ್ಳುವಿಕೆ ಮತ್ತು ಮುಂದುವರಿಕೆಯನ್ನು ಉಂಟುಮಾಡುವ ಗುರಿ ಹೊಂದಿತ್ತು. ಅಪರಾಹ್ನದ ಅವಧಿಯಲ್ಲಿ ಡಾ. ಜಸ್ಟಿನ್ ಜೇಮ್ಸ್ ಮತ್ತು ಡಾ. ಸ್ವಪ್ನಾ ರೋಸ್ ಅವರು "ಸಮಾನವರ ಒಳಗೊಳ್ಳುವಿಕೆ ಮತ್ತು ಗುಣಮಟ್ಟದ ಸಮಸ್ಯೆಗಳ ಉದ್ಯೋಗಿ ಮಾಲೀಕತ್ವದ ಮೇಲೆ ಒತ್ತು ನೀಡುವ ಸಾಂಸ್ಥಿಕ ಬದ್ಧತೆ" ಹಾಗೂ "ಗುಣಮಟ್ಟ ಮತ್ತು ವೆಚ್ಚ ಪ್ರಜ್ಞೆಯ ಸಂಸ್ಕೃತಿಯನ್ನು ರಚಿಸುವುದು" ಎಂಬ ವಿಷಯವಾಗಿ ತರಬೇತಿ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top