ಬೆಂಗಳೂರು: ಕಾಪು ಮಾರಿಗುಡಿ ದೇವಸ್ಥಾನ ಅಭಿವೃದ್ದಿ ಲೇಖನ ಯಜ್ಞ ಸಮಿತಿಯ ಮಹತ್ವದ ಸಭೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಗೇಟ್ ಸಂಖ್ಯೆ 4ರಲ್ಲಿ ನವೆಂಬರ್ 17ರಂದು ನಡೆಯಲಿದೆ.
ಬೆಂಗಳೂರಿನಲ್ಲಿರುವ ಮಾರಿಯಮ್ಮ ಭಕ್ತರು ಈ ಸಭೆಗೆ ಆಗಮಿಸಿ ಲೇಖನ ಯಜ್ಞ ಸಮಿತಿಯಲ್ಲಿ ಭಾಗಿಗಳಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾಪು ಮಾರಿಗುಡಿ ದೇವಸ್ಥಾನ ಅಭಿವೃದ್ದಿ-ಬೆಂಗಳೂರು ಸಮಿತಿಯ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ಆಹ್ವಾನ ನೀಡಿದ್ದಾರೆ.
ಸಭೆಯ ವಿವರಗಳು:
ದಿನಾಂಕ: 17 ನವೆಂಬರ್ 2024
ಸಮಯ: ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00 ರ ವರೆಗೆ
ಸ್ಥಳ: ಗಾಯತ್ರಿ ವಿಹಾರ ಗೇಟ್ ಸಂಖ್ಯೆ 4 ಅರಮನೆ ಮೈದಾನ ಬೆಂಗಳೂರು
ಸಮಿತಿಯ ಸಭೆಯಲ್ಲಿ ಭಾಗವಹಿಸಲು ವಸ್ತ್ರ ಸಂಹಿತೆ ನಿಗದಿಪಡಿಸಲಾಗಿದ್ದು, ಪುರುಷರು ಬಿಳಿ ಶರ್ಟ್ ಮತ್ತು ಪಂಚೆ ಧರಿಸಿದರೆ ಉತ್ತಮ, ಮಹಿಳೆಯರು ಕುಂಕುಮ ಬಣ್ಣದ ಸೀರೆ ಧರಿಸಿದರೆ ಉತ್ತಮ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ