ಕುಂಬಳೆ: ಕಂಬಾರು ಕ್ಷೇತ್ರದ ಮುಂದಿನ 2025 ಜನವರಿ 28 ರಿಂದ ಫೆಬ್ರವರಿ 2ರ ತನಕ ಜರುಗಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಶಾಂಭವಿ ಸಭಾಂಗಣದಲ್ಲಿ ಅ.31ರಂದು ಕುಡಾಲು ಬಾಡೂರು ಗ್ರಾಮಸ್ಥರ ಸಭೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಇ.ಎಸ್.ಮಹಾಬಲೇಶ್ವರ ಭಟ್ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀ ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿದರು. ಮೊಕ್ತೇಸರರಾದ ಶ್ರೀ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ ಪ್ರಾರ್ಥನೆ ಸಲ್ಲಿಸಿದರು.
ಕ್ಷೇತ್ರದ ಆಡಳಿತ ಮೊಕ್ತೇಸರರಾದ ಬಾಡೂರು ಯಜಮಾನ ಕುಂಞಣ್ಣ ಭಂಡಾರಿ, ಮೊಕ್ತೇಸರ ರವಿಶಂಕರ್ ಭಟ್ ಹಾಗೂ ಕುಡಾಲುಗುತ್ತು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ರವಿಶಂಕರ್ ಭಟ್ ಅವರು ಜೀರ್ಣೋದ್ಧಾರ ಕಾಮಗಾರಿಗಳ ಮಾಹಿತಿ ನೀಡಿದರು. ಕುಂಞಣ್ಣ ಭಂಡಾರಿ ಅವರು ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಎರಡೂ ಗ್ರಾಮಗಳ ಭಕ್ತರು ಸಹಕರಿಸುವಂತೆ ಮನವಿ ಮಾಡಿದರು. ರಾಜಾರಾಮ ಶೆಟ್ಟಿ ಕುಡಾಲು ಅವರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದ ಸಿದ್ದತೆ ಹಾಗೂ ಅನುಷ್ಠಾನಕ್ಕಾಗಿ ಒಂದು ಮಾರ್ಗದರ್ಶಕ ಮಂಡಳಿ, ಜೀರ್ಣೋದ್ಧಾರ ಸಮಿತಿ ಹಾಗೂ ಹದಿನಾರು ಉಪಸಮಿತಿಗಳನ್ನು ರೂಪಿಸಲಾಯಿತು. ವಿವಿಧ ಸಮಿತಿಗಳ ವಿಸ್ತರಣೆ ಹಾಗೂ ಜವಾಬ್ದಾರಿ ಹಂಚಿಕೆಗಾಗಿ ನವೆಂಬರ್ 16 ನೇ ಶನಿವಾರ ಅಪರಾಹ್ನ 3 ಗಂಟೆಗೆ ಎಲ್ಲಾ ಸಮಿತಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಸಲು ನಿರ್ಧರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ