ಬಳ್ಳಾರಿ: ರಾಜ್ಯದಲ್ಲೂ ಬಳ್ಳಾರಿ ಜಿಲ್ಲೆ ಚೀನಾದ ಬೀಜಿಂಗ್ನಂತೆ ಆಗಬೇಕೆಂಬುದು ನಮ್ಮ ಬಯಕೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಅವರು ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರಿನಲ್ಲಿ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಸಂಡೂರು ಹೊಸಪೇಟೆ ಬಳ್ಳಾರಿ ನಡುವೆ 50 ಸಾವಿರ ಎಕರೆಯಲ್ಲಿ ಜಿಂದಾಲ್ ನಂತಹ ಹತ್ತು ಕಾರ್ಖಾನೆಗಳು ಬರಬೇಕು. ಚೀನಾದ ಬೀಜಿಂಗ್ನಂತೆ ಬಳ್ಳಾರಿ ಆಗಬೇಕು. ಸ್ಥಳೀಯವಾಗಿ ಅದಿರು ಬಳಕೆ ಆಗಬೇಕು ಎಂಬುದು ನನ್ನ ಕನಸಾಗಿತ್ತು. ಇದರಿಂದ ಯುವ ಜನತೆಗೆ ಉದ್ಯೋಗ ದೊರಕುವಂತಾಗಬೇಕು ಎಂಬುದಾಗಿತ್ತು. ಆದರೆ ದುರಾದೃಷ್ಟವಶಾತ್ ನನ್ನನ್ನು ಕಾಂಗ್ರೆಸ್ನವರು ಗಣಿಗಾರಿಕೆ ಆರೋಪ ಮಾಡಿ 14 ವರ್ಷ ಜಿಲ್ಲೆಯಿಂದ ಹೊರಗಿಟ್ಟರು. ನನಗೆ ತೊಂದರೆ ಕೊಟ್ಟವರು ನನ್ನಂತೆ ಕರ್ಮ ಅನುಭವಿಸುವ ದಿನ ಹತ್ತಿರ ಇದೆ ಎಂದರು.
ಬಿಜೆಪಿಯನ್ನು ಈ ಬಾರಿ ಗೆಲ್ಲಿಸಿ ಕ್ಷೇತ್ರದ ಹಳ್ಳಿಗಳ ಅಭಿವೃದ್ಧಿ ಕಾಣಿರಿ ಎಂದರು. ಸಂಡೂರು ಠಾಣೆಯ ಸಿಪಿಐ ಮಹೇಶಗೌಡ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿಗಳನ್ನೇ ನೋಡಿರುವ ನಾನು ಇಂತಹ ಅಧಿಕಾರಿಗಳ ಕುತಂತ್ರ ಬಲ್ಲೆ. ಅವರಿಗೆ ಹೇಳಿರುವೆ ನಿಮ್ಮ ಈ ನಡೆ ಸರಿಯಲ್ಲ ಎಂದು. ಅವರು ಎಚ್ಚೆತ್ತುಕೊಳ್ಳಬೇಕು ಎಂದರು. ಈ ಸಂಧರ್ಬದಲ್ಲಿ ವಿಜಯೇಂದ್ರ, ಶ್ರೀರಾಮುಲು, ಅನಿಲ್ಲಾಡ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ