ಧರ್ಮಸ್ಥಳ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಾಲಯದಿಂದ ಧರ್ಮಸ್ಥಳದ ವರೆಗಿನ ಪಾದಯಾತ್ರೆ ಸಂದರ್ಭದಲ್ಲಿ ಜನ ದಟ್ಟಣೆ ಹಾಗೂ ವಾಹನ ಸಂಚಾರವನ್ನು ನಿಯಂತ್ರಿಸುವಲ್ಲಿ 'ಶೌರ್ಯ' ವಿಪತ್ತು ನಿರ್ವಹಣಾ ತಂಡ ಯಶಸ್ವಿಯಾಗಿದೆ.
ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಭಕ್ತಾದಿಗಳ ದಂಡು ಸಾಗರೋಪಾದಿಯಲ್ಲಿ ಹರಿದುಬರುತ್ತದೆ. ಇದರ ಪ್ರಯುಕ್ತ ಮೊದಲನೇ ದಿನದ ಪಾದಯಾತ್ರೆಯುಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾದಯಾತ್ರಿಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು 'ಶೌರ್ಯ' ತಂಡದ ಸದಸ್ಯರು ಕಾರ್ಯಪ್ರವೃತ್ತರಾಗಿದ್ದರು.
'ಶೌರ್ಯ' ತಂಡವು ಒಂದು ತಾಲೂಕಿನಲ್ಲಿ ಹಲವು ಗುಂಪುಗಳಾಗಿ ಕಾರ್ಯ ನಿರ್ವಹಿಸುತ್ತವೆ. ನಾವುರು, ಐನಬೆಟ್ಟು, ದೆತ್ತಬಾಗಿಲು, ಬೆಳ್ತಂಗಡಿ, ಧರ್ಮಸ್ಥಳ, ಮಲವಂತಿಗೆ, ಮಂಜಟ್ಟಿ, ಲೈಲಾ ಸೇರಿದಂತೆ ಹಲವಾರು ಭಾಗದಿಂದ ತಂಡದ ಕಾರ್ಯಕರ್ತರು ಆಗಮಿಸಿದ್ದರು.
ಈ ತಂಡದಲ್ಲಿ ಪುರುಷರು ಹಾಗೂ ಮಹಿಳೆಯರು ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಸುಮಾರು 100ಕ್ಕೂ ಹೆಚ್ಚಿನ ಜನರು ಈ ಸಂದರ್ಭದಲ್ಲಿದ್ದು ಶಾಂತಿ, ಸುವ್ಯವಸ್ಥೆ, ವಾಹನ ಸಂಚಾರ ವ್ಯವಸ್ಥೆಯನ್ನು ಸುಗಮವಾಗಿಸಿದರು. ಭಕ್ತಾದಿಗಳು ತಂಡ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿರಿದಾದ ಹಾಗೂ ವಾಹನ ದಟ್ಟಣೆಯಾಗುವ ಸ್ಥಳಗಳಾದ ನೇತ್ರಾವತಿ ಸ್ನಾನ ಘಟ್ಟ, ಉಜಿರೆಯ ವೃತ್ತ, ಧರ್ಮಸ್ಥಳದ ಸಮೀಪದ ಸ್ಥಳಗಳಲ್ಲಿ'ಶೌರ್ಯ' ತಂಡವು ಕಾರ್ಯ ನಿರ್ವಹಿಸಿದೆ. ವಾಹನ ಸಂಚಾರಕ್ಕೆ ಮತ್ತು ಪಾದಯಾತ್ರಿಗಳಿಗೆ ಅನುಕೂಲಕರವಾಗುವಂತೆ ತಂಡವು ಕಾರ್ಯ ಕೆಲಸ ಮಾಡುತ್ತಿದೆ.
- ದಿವ್ಯಶ್ರೀ ಹೆಗಡೆ
ಎಸ್.ಡಿ.ಎಂ ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ