ಹೊರನಾಡಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸಿ: ಚಕ್ರವರ್ತಿ ಸೂಲಿಬೆಲೆ

Upayuktha
0

ಗೋವಾ ಕನ್ನಡಿಗರಿಂದ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ




ಪಣಜಿ: 'ಭಾಷೆಯಿಂದ ಬರಿಭಾಷೆ ಉಳಿಯುವುದು ಬೆಳೆಯುವುದಷ್ಟೆ ಅಲ್ಲದೆ ಅದರಿಂದ ಸಂಸ್ಕಾರ ಮತ್ತು ಸಂಸ್ಕೃತಿಗಳೆರಡು ತಂದೆ ತಾಯಿಯರಿಂದ ಮಕ್ಕಳಿಗೆ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರವಾಗುತ್ತದೆ. ಹೀಗಾಗಿ ಹೊರನಾಡಲ್ಲಿದ್ದು ಭಾಷಾಭಿಮಾನ ಇಟ್ಟುಕೊಳ್ಳುವುದರ ಜೊತೆಗೆ ಮಕ್ಕಳಿಗೆ ಭಾಷೆಯನ್ನು ಕಲಿಸಿ, ಉಳಿಸಿ ಮತ್ತು ಬೆಳೆಸಿ ಎಂದು ಚಕ್ರವರ್ತಿ ಸೂಲಿಬೆಲೆ ರವರು ಕಿವಿ ಮಾತು ಹೇಳಿದರು.


ಗೋವಾದ ಪೋಂಡಾ ಶಹರದ ಸಾವಿತ್ರಿ ಸಭಾಂಗಣದಲ್ಲಿ ಶೈಲೇಶ ಪಾಟೀಲರ ಸಾರತ್ಯದಲ್ಲಿ ಭಾನುವಾರ ಸಂಜೆ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಮಾರಂಭದ ಉಧ್ಘಾಟನೆ ನೆರವೇರಿಸಿ ಚಕ್ರವರ್ತಿ ಸೂಲಿಬೆಲೆ ರವರು ಮಾತನಾಡುತ್ತಿದ್ದರು. 'ಇಲ್ಲಿ ನೆರೆದವರೆಲ್ಲ ಯಾವ ಜಾತಿ, ಧರ್ಮ, ಕುಲ, ಗೋತ್ರ ಹಿಡಿದು ಇಲ್ಲಿಗೆ ಬರಲಿಲ್ಲ, ಯಾವುದಾದರೂ ಶಕ್ತಿ ಅವರನ್ನು ಕರೆ ತಂದಿದ್ದರೆ ಅದು ನಮ್ಮ ತಾಯಿ ಭಾಷೆ ಕನ್ನಡ. ಇದು ನಮ್ಮನ್ನೆಲ್ಲ ಒಗ್ಗೂಡಿಸುವ ಶಕ್ತಿ ಕೇಂದ್ರವಾಗಿದೆ' ಎಂದರು. ಇತಿಹಾಸದ ಪುಟಗಳಿಂದ ಆಯ್ದ ಕೆಲ ಘಟನೆಗಳನ್ನು ನೆನಪಿಸಿ ಕನ್ನಡಾಭಿಮಾನ ಮತ್ತು ನಾಡಪ್ರೇಮವನ್ನು ಚಕ್ರವರ್ತಿ ಸೂಲಿಬೆಲೆ ಅವರು ಇನ್ನೂ ಗಟ್ಟಿಗೊಳಿಸಿದರು.


ಕಾರ್ಯಕ್ರಮದ ಎರಡನೇ ಭಾಗದ ಅಧ್ಯಕ್ಷತೆಯನ್ನು ಎಮ್ ಎಸ್ ಕೃಪಾಶಂಕರ, ಪ್ರಾಂಶುಪಾಲರು, ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಫರ್ಮಾಗುಡಿ-ಪೋಂಡಾ ಇವರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಸಂಘದ ಖಜಾಂಚಿ ಶಿರಗಣ್ಣವರ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮೊದಲ ಭಾಗದಲ್ಲಿ ದಾನಮ್ಮರವರ ಸ್ವಾಗತ ಗೀತೆ ಮತ್ತು ಶರಣು ಯಮನೂರರವರ ಹಾಸ್ಯ ಕಾರ್ಯಕ್ರಮ ಜರುಗಿತು. ಸುರೇಶ ಹಡಪದ, ಶ್ರೀನಿವಾಸ ಕಳಗಿ ಮತ್ತು ರಾಘವೇಂದ್ರ ಕಂಚಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ಈ ಸಮಾರಂಭದಲ್ಲಿ ಸಿದ್ಧು ಹಿರೇಮಠ, ವಿರೂಪಾಕ್ಷ ತೊಂಡೆಹಾಳ, ಸಂದೀಪ ನಾಯಕ, ರಜತ್ ಶೆಟ್ಟಿ, ರಾಘವೇಂದ್ರ ಕಂಚಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ರೆಡ್ಡಿ, ಶ್ರೀನಿವಾಸ ಬಳಗಟ್ಟಿ, ಸಂಜಯ ಶಿರಗಣ್ಣವರ್, ಶ್ರೀನಿವಾಸ ಕಲಗಿ, ಸುರೇಶ ಕಣವಿ, ಮತ್ತಿತರರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಎರಡನೆಯ ಭಾಗವು ವಿಜಯಲಕ್ಷ್ಮಿ ಅವರ ಸ್ವಾಗತ ಗೀತೆಯೊಂದಿಗೆ ಪ್ರಾರಂಭ ವಾಯಿತು. ಪೋಂಡಾ ಕನ್ನಡ ಸಂಘದ ಅಧ್ಯಕ್ಷ ಶೈಲೇಶ ಪಾಟೀಲ ಅವರು ಅತಿಥಿಗಳ ಸ್ವಾಗತ ಕೋರಿದರು. ದಾನಮ್ಮಾ ಹಾಗೂ ಸಂಗಡಿಗರು ನಾಡಗೀತೆಯನ್ನು ಹೇಳಿದರು. ರೇವಣಸಿದ್ಧಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು,ಪ್ರಿಯಾ ಪತ್ತಾರ ಅತಿಥಿಗಳನ್ನು ಪರಿಚಯಿಸಿದರು.ಶರಣು ಯಮನೂರು ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು, ಸಂಘದ ಸಚಿವ ಶ್ರೀನಿವಾಸ ಕಂಚಿಯವರು ವಂದನಾರ್ಪನೆ ಸಲ್ಲಿಸಿದರು.


ಕುಮಾರಿ ಪ್ರಿಯಾ, ಮಹಾಲಕ್ಷ್ಮಿ ಹಾಗೂ ಪವನ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಮಾರಂಭದಲ್ಲಿ ಪೊಂಡಾ ಕನ್ನಡ ಸಂಘದ ಹಿಂದಿನ ಎಲ್ಲ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top