ಪುತ್ತೂರು: ಪುತ್ತೂರು ಪರ್ಪುಂಜದ ಸೌಗಂಧಿಕಾದಲ್ಲಿ 'ಕಲರವ' ಛಾಯಾಚಿತ್ರಗಳ ಹಾಗೂ ತೈಲ ವರ್ಣಚಿತ್ರಗಳ ಪ್ರದರ್ಶನ ನ. 1ರಿಂದ ನ.9ರ ವರೆಗೆ ನಡೆಯಲಿದೆ.
ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಶ ಕುಮಾರ ಎಂ.ಕೆ ಅವರು ನ.1ರಂದು 5 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಭಿಷೇಕ ಡಿ. ಪುಂಡಿತ್ತೂರು ಅವರ ಹಕ್ಕಿ- ಪ್ರಕೃತಿ- ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಹಾಗೂ ಪಿ. ವಸಂತಿ ಸಾಮೆತ್ತಡ್ಕ ಅವರ ತೈಲವರ್ಣಚಿತ್ರ ಪ್ರದರ್ಶನ ಇರಲಿದೆ. ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಈ ಕಲಾಪ್ರದರ್ಶನ ಇರುತ್ತದೆ ಎಂದು ಸಂಘಟಕ ಚಂದ್ರ ಸೌಗಂಧಿಕ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ