ಕಲಬುರಗಿಯಲ್ಲಿ ಕನ್ನಡಜ್ಯೋತಿ ರಥ ಯಾತ್ರೆಗೆ ಅದ್ಧೂರಿ ಸ್ವಾಗತ, ಕಲಾಮೇಳಗಳ ಕಲರವ

Upayuktha
0

ಕನ್ನಡಿಗರಲ್ಲಿ ನಾಡು-ನುಡಿಯ ಜಾಗೃತಿ ಮೂಡಿಸುವ ಕನ್ನಡ ರಥ: ಶಾಸಕ ಅಲ್ಲಮಪ್ರಭು




ಕಲಬುರಗಿ: ನೃಪತುಂಗನ ನಾಡಿನಲ್ಲಿ ಕನ್ನಡಜ್ಯೋತಿ ಹೊತ್ತ ರಥ ಯಾತ್ರೆಯ ಆಗಮನ. ಚಿಟ್ಟಲಗಿ ವಾದನ, ಡೊಳ್ಳು ಕುಣಿತದ ವಾದ್ಯ ಮೇಳಗಳಿಗೆ ಪುಳಕಗೊಂಡ ಮೈ ಮನಗಳು.


ಶುಕ್ರವಾರದಂದು ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತಕ್ಕೆ ರಥ ಯಾತ್ರೆ ಆಗಮಿಸಿದಾಗ ಕನ್ನಡಾಂಬೆಯ ಝೇಂಕಾರ, ಸಮ್ಮೇಳನಕ್ಕೆ ಜೈಕಾರ ಎಲ್ಲವೂ ಮೈ ನವಿರೇಳುವಂತೆ ಮಾಡಿದವು. ಸಕ್ಕರೆ ನಾಡಾದ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ನಾಡಿನಾದ್ಯಂತ ಸಂಚರಿಸುತ್ತಿರುವ ಕನ್ನಡಜ್ಯೋತಿ ರಥ ಯಾತ್ರೆ ಭಾಗವಹಿಸಿದವರ ಕಣ್ಮನ ಸೆಳೆಯುವಂತಿತ್ತು. ಮುಸುಕು ಹಾಕಿದ ವಾತಾವರಣ ಕಂಡು ಬಂತು. ತುಸು ತುಂತುರು ಹನಿಗಳ ಮಳೆಯ ಸಿಂಚನ ಹಾಗೂ ಕನ್ನಡಿಗರ ಮನಸ್ಸುಗಳ ಅಸ್ಮಿತೆಯನ್ನು ಮೆರವಣಿಗೆಯಲ್ಲಿ ಅನಾವರಣಗೊಂಡಿತು.


ಚಾಲನೆ ನೀಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂಗವಾಗಿ ರಾಜ್ಯದಲ್ಲಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಯಾತ್ರೆಯು ಕನ್ನಡಿಗರಲ್ಲಿ ನಾಡು ನುಡಿಯ ಜಾಗೃತಿಯನ್ನು ಮೂಡಿಸುತ್ತಿದೆ. ಕನ್ನಡಿಗರಲ್ಲಿ ಭಾಷೆಯ ಅಭಿಮಾನವನ್ನು ಮತ್ತು ನಾಡ ಪ್ರೇಮವನ್ನು ಹೆಚ್ಚಿಸಲು ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸುವುದರ ಮೂಲಕ ಜಾಗೃತಿಯ ಸಂದೇಶವನ್ನು ಮೊಳಗಿಸುತ್ತಿದೆ ಎಲ್ಲ ಕನ್ನಡಿಗರು ಕನ್ನಡ ರಥವನ್ನು ಸಂಭ್ರಮದಿAದ ಸ್ವಾಗತಿಸಿ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರುವ ಜೊತೆಗೆ ಕನ್ನಡಿಗರ ನಡುವೆ ಭಾವನಾತ್ಮಕ ಸಂಬAಧವನ್ನು ವೃದ್ಧಿಗೊಳಿಸುತ್ತಿದೆ ಎಂದರು.


ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಿದ ಕನ್ನಡ ರಥವು ಕಲಬುರಗಿಗೆ ಪ್ರವೇಶಿಸುತ್ತಿದ್ದಂತೆ ಸಂಭ್ರಮದಿಂದ ಸ್ವಾಗತವನ್ನು ಕೋರಲಾಗಿದೆ. ಮಂಡ್ಯದಲ್ಲಿ ನಡೆಯುವ ಸಮ್ಮೇಳನಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೆ ಕಾರಣೀಕರ್ತರಾಗಬೇಕು ಎಂದರು.


ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ರಥವು ಕೇವಲ ಒಂದು ರಥವಲ್ಲ. ಇದು ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ರಥವಾಗಿದ್ದು ಈ ಮೂಲಕ ಕನ್ನಡಿಗರು ಜಾತಿ-ಮತ-ಪಂಥ ಲಿಂಗ ಎಂಬ ಬೇಧವನ್ನು ಮರೆತು ಕನ್ನಡಕ್ಕಾಗಿ ಶ್ರಮಿಸಬೇಕು ಮತ್ತು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಲು ನಾವೆಲ್ಲರೂ ಕಂಕಣಬದ್ಧರಾಗಬೇಕಾಗಿದೆ ಎಂದ ಅವರು, ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರ ಆಶಯದಂತೆ ಕನ್ನಡ ರಥವು ಸಮ್ಮೇಳನದ ಪ್ರಚಾರದ ಜೊತೆಗೆ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.


ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಕಲಬುರಗಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಡಿ ಬಡಿಗೇರ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಮಲ್ಲಿಕಾರ್ಜುನ ಸಾರವಾಡ, ಕಲ್ಯಾಣರಾವ ಪಾಟೀಲ, ಬಾಬುರಾವ ಕೋಬಾಳ, ಶಿವಲಿಂಗಪ್ಪ ಅಷ್ಟಗಿ, ರವೀಂದ್ರಕುಮಾರ ಭಂಟನಳ್ಳಿ, ಕಲ್ಯಾಣಕುಮಾರ ಶೀಲವಂತ, ಧರ್ಮರಾಜ ಜವಳಿ, ಗುರುಬಸಪ್ಪ ಸಜ್ಜನಶೆಟ್ಟಿ, ಶರಣಬಸಪ್ಪ ಕೋಬಾಳ, ಶಾಮಸುಂದರ ಕುಲಕರ್ಣಿ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಎಂ ಎನ್ ಸುಗಂಧಿ, ವಿನೋದಕುಮಾರ ಜೇನವೇರಿ, ಸೇವಂತಾ ಚವ್ಹಾಣ, ಶರಣಬಸಪ್ಪ ನರೂಣಿ, ರಾಜೇಂದ್ರ ಮಾಡಬೂಳ, ಪ್ರಕಾಶ ಗೊಣಗಿ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಸಿದ್ಧಲಿಂಗ ಬಾಳಿ, ಮಂಜುನಾಥ ಕಂಬಾಳಿಮಠ, ರಮೇಶ ಬಡಿಗೇರ, ರೇವಣಸಿದ್ದಪ್ಪ ಜೀವಣಗಿ, ಹಣಮಂತ ಖಜೂರಿ, ಮಹೇಶ ಚಿಂತನಪಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಕನ್ನಡಜ್ಯೋತಿ ರಥ ಯಾತ್ರೆಯೂ ಪಟೇಲ್ ವೃತ್ತದಿಂದ ಜಗತ್ ವೃತ್ತ, ಸುಪರ್ ಮಾರ್ಕೇಟ್ ಮಾರ್ಗವಾಗಿ ಕಮಲಾಪೂರ ತಾಲೂಕು ಕಡೆಗೆ ಸಂಚರಿಸಿತು. ರಥ ಸಾಗುವ ದಾರಿಯುದ್ದಕ್ಕೂ ವರ್ಣರಂಜಿತ ಸಾಂಸ್ಕೃತಿಕ ಕಲಾ ತಂಡಗಳು ಕನ್ನಡದ ರಥ ಸಂಚಾರಕ್ಕೆ ಮೆರುಗು ನೀಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top