ಭಕ್ತಿಗೀತೆ: ನಾಡಸಿರಿ ಕಾವೇರಿ

Upayuktha
0



ನೋಡಿ ನೀವು ಕುಂಡಿಕೆಯ ಉಕ್ಕುವಳು

ಜುಳು ಜುಳನೇ ಕಾವೇರಿ ಹರಿಯುವಳು

ಲೋಕ ಸೇವೆಗೆಂದು ಲೋಪಮುದ್ರೆಯಾಗಿ 

ಕಾವೇರಿ ತಾನಾಗಿ ತುಳುಕುವಳೂ

ಈ ನಾಡ ಸಿರಿಗೆ ಅಮ್ಮ ಎನಿಸಿಹಳು||ಪ||


ಕರ್ಣಾಟ ರಾಜ್ಯದ ಕೊಡಗಿನ ಸೀಮೆ

ಸಿರಿನಾಡಿನ ಬೆಟ್ಟದಡಿ ಪಾದದ ನಾಮೆ

ಸಿರಿಯ ಸಂಪೋಷಿಣಿ ತಿರೆಜನ ಕಾಯೆ ನೀ

ಕುಂಡಿಕೆಯ ತೀರ್ಥಕೀಗ ಕುಂಕುಮಾರ್ಚನೆ ||1||


ನಂಬಿರುವ ಜೀವದ


ದಾಹಕಾಗಿ 

ಬೆಂಬಿಡದೆ ಸುರಿವಳು ಧಾರೆಯಾಗಿ

ತುಂಬುವಳು ಜಲದಿಂದ ಕನ್ನಂಬಾಡಿಯಾಗಿ 

ಕರುನಾಡ ರೈತರ ಸಿರಿದೇವಿಯಾಗಿ||2||


ಉಕ್ಕುತಿಹ ಕಾಲುವೆಗೆ ಉಸಿರಂತೆ

ಬೀಸುತಿಹ ಗಾಳಿಯಲೆಗೆ ತಲೆಬಾಗಿ

ನಿಂತ ಹಸಿರು ಪೈರುಗಳಿಗೆ ವರವಾಗಿ

ಕಾವೇರಿ ನೀಡುವಳು ಜಲ ರಾಶಿ||3||


- ವೈಲೇಶ ಪಿ.ಎಸ್. ಕೊಡಗು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top