ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞದ ಚಪ್ಪರ ಮುಹೂರ್ತ ಮತ್ತು ಯಜ್ಞ ಕುಂಡಕ್ಕೆ ಬುಧವಾರ ಚಿತ್ರಾಪುರ ಮಠಾಧೀಶರಾದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಗಾಯತ್ರಿ ಜಪಯಜ್ಞಕ್ಕೆ ಎಲ್ಲ ರೀತಿಯ ಸಿದ್ಧತೆಯು ಭರದಿಂದ ಸಾಗುತ್ತಿದೆ. ಈ ಯಾಗವು ಸಮುದಾಯಕ್ಕೆ ಒಳಿತನ್ನು ತರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಧಾರ್ಮಿಕ ವಿಧಿ ವಿಧಾನ ನೆರವೇರಿಸಿದದ ಕುಡುಪು ಕೃಷ್ಣರಾಜ ತಂತ್ರಿಗಳು ಮಾತನಾಡಿ, ಎಲ್ಲ ಬ್ರಾಹ್ಮಣರು ಉಪಾಸನೆ ಮಾಡುವ ಗಾಯತ್ರಿ ಯಾಗ ಎಂಬುದು ಸರ್ವಶ್ರೇಷ್ಠಯಾಗವಾಗಿದೆ. ಗಾಯತ್ರಿ ಯಾಗಕ್ಕೆ ಪೂರಕವಾಗಿ ಎಲ್ಲರೂ ಜಪ ಆರಂಭಿಸಿದ್ದಾರೆ. ಈ ಜಪವು ಭವಿಷ್ಯದಲ್ಲಿ ಸಮಾಜದಲ್ಲಿ ಧನಾತ್ಮಕ ಚಿಂತನೆ ಮೂಡಿಸಲಿದೆ. ಬದುಕು ಹಸನಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ದೇವರ ಅನುಗ್ರಹ ಸಿಗಲಿ ಎಂದರು.
ಯಜ್ಞ ಸಮಿತಿಯ ಸಂಚಾಲಕರಾದ ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣ ಅವರು ಸರ್ವರ ಸಹಕಾರದಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಲಿ ಈ ಮೂಲಕ ಬ್ರಾಹ್ಮಣ ಸಮಾಜದ ಒಗ್ಗಟ್ಟು ಮತ್ತು ಹಿಂದೂ ಸಮಾಜ, ಭಾರತ ದೇಶವು ಸುಭಿಕ್ಷೆಯಿಂದ ಕೂಡಿ, ಲೋಕಕ್ಕೆ ಮಂಗಳವಾಗಲೆಂದು ಸಂಕಲ್ಪಿಸತ್ತೇವೆ ಎಂದರು.
ಗಾಯತ್ರಿ ಸಂಗಮದ ಅಧ್ಯಕ್ಷ, ಸಭಾದ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ಸಂಗಮದ ಪ್ರಧಾನ ಸಂಚಾಲಕ ವಿದ್ವಾನ್ ಶ್ರೀಧರ ಹೊಳ್ಳ, ಚಿತ್ರಪುರ ಕ್ಷೇತ್ರದ ಅರ್ಚಕರಾದ ಕಾರ್ತಿಕ್ ಭಟ್, ಸಂಚಾಲಕ ಸುರೇಶ್ ರಾವ್ ಚಿತ್ರಾಪುರ, ಉಪಾಧ್ಯಕ್ಷರಾದ ಸಿಎ ಆರ್ ಡಿ ಶಾಸ್ತ್ರಿ, ಶ್ರೀಕರ ದಾಮ್ಲೆ, ಸುಬ್ರಹ್ಮಣ್ಯ ಪ್ರಸಾದ್ ಕೋರಿಯರ್, ಪ್ರಕಾಶ್ ಕೋಟೆ ಕಾರು ಕಗ್ಗಿ, ಶ್ರೀ ನಿವಾಸ ಆಚಾರ್, ವಿಶ್ವೇಶ್ವರ ಕಾರಂತ್, ವಿಶ್ವೇಶ್ವರ ಬದೆವಿದೆ, ಎಂ.ಎಸ್. ಗುರುರಾಜ್, ಭಾಸ್ಕರ್ ರಾವ್ ಬಾಳ, ಕಾರ್ಯದರ್ಶಿ ಕದ್ರಿ ಕೃಷ್ಣ ಭಟ್, ಅರ್ಚಕ ಪುರೋಹಿತ ಪರಿಷತ್ ಅಧ್ಯಕ್ಷ ಕೃಷ್ಣರಾಜ ಭಟ್, ಜಪ ಸಮಿತಿಯ ರವೀಶ್ ನಾರ್ಶಾ, ಅನಂತಶಯನ ಭಟ್ ಅಡ್ಯತಿಮಾರ್, ಸುಬ್ರಹ್ಮಣ್ಯ ಬಟ್ಟೆ ವಾಟೆತ್ತಿಲಾಜಲು, ಸೀತ ಕಾಂತ್ ಘಾಟೆ ದರ್ಬೆ, ವಿಶ್ವನಾಥ ಭಟ್ ಕುಂಚಾರು, ನ್ಯಾಯವಾದಿ ಪುರುಷೋತ್ತಮ ಭಟ್, ರಾಜೇಂದ್ರ ಕಲ್ಬಾವಿ, ಜಯರಾಮ್ ಭಟ್ ಕೊಮ್ಮುಂಜೆ, ಅಂಶುಮಾಲಿ ಕಡಬ, ಮಾತೃ ಸಮಿತಿಯ ನ್ಯಾಯವಾದಿ ಉಮಾ ಸೋಮಯಾಜಿ, ಕಾತ್ಯಾಯಿನಿ ಸೀತಾರಾಮ್, ಕಲಾವತಿ ಟೀಚರ್, ಸಾವಿತ್ರಿ ಕುಳಾಯಿ, ಶೋಭಾ ಚಿತ್ರಾಪುರ, ಚೇತನ ದತ್ತಾತ್ರೇಯ, ಎಚ್.ಎಲ್.ರಾವ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ