ದ್ರೌಪದಿ ಶ್ರೀಕೃಷ್ಣ ಪರಮಾತ್ಮನ ಮಹಿಮೆಯನ್ನು ಚಿಂತನೆಯನ್ನು ಮಾಡುತ್ತಾ ವರ್ಣನೆಯನ್ನು ಮಾಡುತ್ತಾ ಇದ್ದಾಳೆ. ಭಕ್ತಿ ಉದ್ವೇಗದಿಂದ ವರ್ಣನೆ ಮಾಡುತ್ತಾಳೆ, ಶ್ರೀಮದಾಚಾರ್ಯರು ಹೇಳಿದ ಭಗವಂತನ ಸ್ವಾತಂತ್ರ್ಯದ ಬಗೆಗೆ ಮೂಲ ಮಹಾಭಾರತದಲ್ಲಿ ವರ್ಣನೆ ಬರುತ್ತದೆ. ಒಬ್ಬ ಪುಟ್ಟ ಬಾಲಕ ಆಟಿಕೆಗಳನ್ನು ಉಪಯೋಗ ಮಾಡುವಂತೆ ಪರಮಾತ್ಮನು ಅಷ್ಟು ಸುಲಲಿತವಾಗಿ ಎಲ್ಲ ಕೆಲಸವನ್ನು ಮಾಡಿ ತೋರಿಸುತ್ತಾನೆ. ಭಗವಂತನಲ್ಲಿರುವ ಔದಾರ್ಯ ಯಾರಿಗೂ ಇಲ್ಲ, ಪ್ರಪಂಚದಲ್ಲಿ ಏನೇ ಕೊಟ್ಟರೂ ಎಲ್ಲವನ್ನೂ ಅವನೇ ಕೊಟ್ಟಿದ್ದು. ಪುಟ್ಟ ಮಗು ತನ್ನ ಆಟಿಕೆಗೆ ಬಟ್ಟೆ ಆಹಾರ ಕೊಡುವ ಮುಗ್ಧ ಮನಸ್ಸಿನಿಂದ ಮಾಡಿದರೆ ಪರಮಾತ್ಮ ಅದು ಅವನ ಲೀಲೆಯಂದು ಮಾಡುತ್ತಾನೆ.
ದೇವರಿಗೆ ಇಡೀ ಜಗತ್ತಿನ ಸೃಷ್ಟಿ ಮತ್ತು ಲಯ ಎರಡೂ ಆಟವೇ ಅವನ ಲೀಲೆ. ಆ ಸತ್ಯ ಅರಿಯದೇ ಹೋದರೆ ಸಂಸಾರ ದೊಡ್ಡ ಕಾಟ. ದ್ರೌಪದಿ ಹೇಳುತ್ತಾಳೆ- (ನರಸಿಂಹ) ದೇವರೇ ಬ್ರಹ್ಮ ರುದ್ರ ಇಂದ್ರಾದಿಗಳನ್ನ ತನ್ನಿಚ್ಛೆಯಂತೆ ಆಟ ಆಡಿಸುತ್ತಾನೆ. ಗುಂಡುಗೋಲಿಯ ಅಟದಂಥೆ ಯಮನನ್ನು ರುದ್ರ ದೇವರನ್ನು ನಿಮಿತ್ತ ಮಾಡಿ ಆಟ ಆಡಿಸುತ್ತಾನೆ, ನಾನಾ ರೀತಿಯ ಕ್ರೀಡೆಗಳನ್ನು ಪರಮಾತ್ಮ ಆಡಿ ತೋರಿಸಿದ್ದಾನೆ. ಬೇರೆ ಬೇರೆ ಪಕ್ಷಿಗಳ ಧ್ವನಿಯನ್ನು ಮಾಡುತ್ತಿದ್ದ ಎಂದು ಭಾಗವತದಲ್ಲಿ ಉಲ್ಲೇಖ ಇದೆ. ಪ್ರಾಣಿಗಳ ಧ್ವನಿಯನ್ನು ತೆಗೆಯುತ್ತಿದ್ದ ಹಾರುತ್ತಿದ್ದ ಜಿಗಿಯುತ್ತಿದ್ದ ಕೆಲವೊಮ್ಮೆ ಗೋಪಾಲಕರು ಹಾಡಿದಾಗ ತಾನು ನರ್ತನ ಮಾಡುತ್ತಿದ್ದ. ನಾನಾ ರೀತಿಯ ಆಟಗಳನ್ನು ಆಡಿದ್ದಾನೆ. ಗೋಪಾಲಕರು ಸಾಮಾನ್ಯರೆಲ್ಲರೂ ದೇವತೆಗಳು ಗೋಪಾಲಕರ ರೂಪದಿಂದ ಅವತಾರ ಮಾಡಿದವರು. ಈ ಚಿಂತನೆಯನ್ನು ದ್ರೌಪದಿ ದೇವರಲ್ಲಿ ಹೇಳುತ್ತಲಿದ್ದಾಳೆ.
ಸಾಮಾನ್ಯ ಜನರು ಇದನ್ನು ಆಟವೆಂದು ಭಾವಿಸಿದರೇ ಜ್ಞಾನಿಗಳು ಕೃಷ್ಣ ದೇವರ ಸರ್ವೋತ್ತಮತ್ವ ತೋರಿಸುತ್ತದೆ. ಕಣ್ಣಾಮುಚ್ಚಾಲೆ ಆಟವನ್ನು ದೇವರು ಎಲ್ಲ ದೇವತೆಗಳ ಜೊತೆಗೆ ಆಡುತ್ತಾನೆ. ದೇವತೆಗಳನ್ನೇ ಆಟ ಆಡಿಸುವ ದೇವರು ಮಾನವ ಋಷಿ ಮುನಿ ಎಲ್ಲರ ಜೊತೆಗೆ ಆಟ ಆಡುತ್ತಾನೆ. ದೇವರು ಯಾರೆಂಧು ನಾವು ತಿಳಿದರೆ ಸಿಗುವ ಬಹುಮಾನ ಮೋಕ್ಷ. ಪರಮಾತ್ಮ ನಮ್ಮೆಲ್ಲರ ಕಣ್ಣು ತೆರೆದಿದ್ದರೂ ದೇವರನ್ನು ಕಾಣದೇ ಇರುವಂತೆ ಕಣ್ಣನ್ನು ಮುಚ್ಚಿದ್ದಾನೆ. ಇಂತಹ ಆಟ ಅವನೊಬ್ಬನನ್ನು ಬಿಟ್ಟು ಇನ್ಯಾರಿಗೂ ಸಾಧ್ಯವಿಲ್ಲ.
ಅರ್ಜುನನಿಗೆ ಇದ್ದ ಕಲೆ ಬಾಣಗಳು ಹಾನಿಯಾಗದಂತೆ ಬಿಡುವ ಕಲೆ ಇತ್ತು ಪರಮಾತ್ಮನಿಗೂ ಕೂಡ ಇಂತಹ ಅಪ್ರತಿಮ ಆಟ ಗೊತ್ತಿತ್ತು. ಈ ಎಲ್ಲ ಕಲೆಗಳ ವರ್ಣನೆ ದಶಮ ಸ್ಕಂದದಲ್ಲಿ ಬರುತ್ತದೆ. ಅವತಾರಗಳು ಲೀಲೆಗಳು ನಿತ್ಯ ಅವುಗಳನ್ನು ಜನರಿಗೆಲ್ಲ ತೋರಿಸಲು ಹೊಸ ಹೊಸ ಅವತಾರಗಳನ್ನು ತೋರಿಸುತ್ತಾನೆ.
ದೇವರ ಮಹಿಮೆಯನ್ನು ತಿಳಿಯಲು ಚಿಂತನೆಯನ್ನು ಮಾಡುತ್ತಿರಬೇಕು, ಚಿಕ್ಕ ವಯಸ್ಸಿನಿಂದ ಮಾತುಗಳನ್ನು ತಪ್ಪಾಗಿ ಆಡದಂತೆ ತಂದೆ ತಾಯಿಗಳು ಕಲಿಸಿರುತ್ತಾನೆ. ಮನುಷ್ಯನ ಈ ರೀತಿಯ ಮಾತುಗಳನ್ನು ಆಡಿಸುವವನು ಭಗವಂತನೇ ಜಾಣರಲ್ಲಿ ಹುಚ್ಚರಲ್ಲಿ ತಾನೇ ನಿಂತು ಮಾತನಾಡಿ ಮಾತನಾಡಿಸುತ್ತಾನೆ. ನಿಧಾನಗತಿಯಲ್ಲಿ ಅತೀ ವೇಗವಾಗಿ ಗಂಭೀರವಾಗಿ ನಡೆಯಲ್ಲೂ ದೇವರು ನಡೆಯುತ್ತಾನೆ. ಈ ರೀತಿ ಭಗವಂತ ಎಲ್ಲರಲ್ಲಿ ಇದ್ದೂ ಮಾಡುವುದು ಪರಮಾತ್ಮನ ನಿತ್ಯ ಸತ್ಯ ಎಂದರೆ ಅವನೇ ನಿಂತು ತಾನು ಮಾಡಿ ಮಾಡಿಸುತ್ತಾನೆ. ಶ್ರೀಮದ್ ಭಾಗವತದಲ್ಲಿ ಬರುವ ಲೀಲೆಗಳಿಂದ ತಿಳಿದುಕೊಳ್ಳಬಹುದು ಈ ವಿಚಾರವನ್ನು ದ್ರೌಪದಿ ದೇವಿ ತನ್ನ ಪ್ರಾರ್ಥನೆಯ ಮೂಲಕ ತಿಳಿಸುತ್ತಾಳೆ.
ಮಗುವಿನಂತೆ ಯಾವ ಭಯವೂ ಇಲ್ಲದೇ ಇರುವಂತಹ ಸ್ವಾತಂತ್ರ್ಯ ಭಗವಂತನಲ್ಲಿದೆ. ಪರಮಾತ್ಮನಿಗೆ ನಿಯಾಮಕರು ಯಾರೂ ಇಲ್ಲ. ಮುಂದೆ ಬ್ರಹ್ಮ ದೇವರು, ವಾಯುದೇವರು, ಋಜುಗಣರು ಇದ್ದಾರೆ. ಸಮಾನ ಯೋಗ್ಯತೆ ಇದ್ದರೂ ಪರಮಾತ್ಮನ ಇಚ್ಛೆಯಂತೆ ಯೋಗ್ಯತೆಗೆ ತಕ್ಕಂತೆ ಅವರವರ ಸಾಧನೆಯಂತೆ ಪರಮಾತ್ಮ ಪದವಿಯನ್ನು ಕೊಡುತ್ತಾನೆ. ದೇವತೆಗಳನ್ನು ತನ್ನ ಇಚ್ಛೆಯಂತೆ ನಿಯಮನ ಮಾಡುತ್ತಾನೆ ಎಂದು ಹೇಳುತ್ತಾರೆ. ಮುಂದೆ ಯುದ್ಧ ಬರುವುದಿದೆ ಎಂಬ ವಿಚಾರವನ್ನು ಮನಸ್ಸಿನ ಲ್ಲಿಟ್ಟುಕೊಂಡು ಅನುಸಂಧಾನ ಮಾಡುತ್ತಿದ್ದಾಳೆ ಎಂಬುದನ್ನು ನಾವು ಮನದಲ್ಲಿಟ್ಟುಕೊಳ್ಳಬೇಕು.
ನಾವೆಲ್ಲರೂ ಭಗವಂತನ ಆಟದ ಆಟಿಕೆಗಳು ಎಂಬ ಅನುಸಂಧಾನ ಮಾಡಿದರೆ ನಾವು ಅದು ಅದ್ಭುತವಾದ ಚಿಂತನೆ ಬಂದರೆ ಎಲ್ಲವನ್ನೂ ಪರಮಾತ್ಮನಿಗೆ ಸಮರ್ಪಣೆ ಮಾಡಬೇಕು. ಈ ಸಂದೇಶವನ್ನು ದ್ರೌಪದೀ ದೇವಿ ಮಾಡಿದ್ದಾಳೆ ಎಂಬ ಚಿಂತನೆಯನ್ನು ನಾವು ಕೂಡ ಮಾಡಬೇಕು. ಇದರಿಂದ ಪರಮಾತ್ಮನ ಕುರಿತಾದ ಭಕ್ತಿ ಹೆಚ್ಚುತ್ತದೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ